Search This Blog

Monday, September 30, 2024

ಅಕ್ಟೋಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು

ಅಕ್ಟೋಬರ್ ಪ್ರಮುಖ ದಿನಗಳು ಮತ್ತು ದಿನಾಂಕಗಳು

1 ಅಕ್ಟೋಬರ್ - ಹಿರಿಯ ವ್ಯಕ್ತಿಗಳ ಅಂತರಾಷ್ಟ್ರೀಯ ದಿನ
1 ಅಕ್ಟೋಬರ್ - ಅಂತರಾಷ್ಟ್ರೀಯ ಕಾಫಿ ದಿನ
1 ಅಕ್ಟೋಬರ್ - ವಿಶ್ವ ಸಸ್ಯಾಹಾರಿ ದಿನ
2 ಅಕ್ಟೋಬರ್ - ಗಾಂಧಿ ಜಯಂತಿ
2 ಅಕ್ಟೋಬರ್ - ಅಂತರಾಷ್ಟ್ರೀಯ ಅಹಿಂಸಾ ದಿನ
2 ಅಕ್ಟೋಬರ್ - ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
3 ಅಕ್ಟೋಬರ್ - ಜರ್ಮನ್ ಏಕತೆಯ ದಿನ
3 ಅಕ್ಟೋಬರ್ - ನವರಾತ್ರಿ
4 ಅಕ್ಟೋಬರ್ - ವಿಶ್ವ ಪ್ರಾಣಿ ಕಲ್ಯಾಣ ದಿನ
5 ಅಕ್ಟೋಬರ್ - ವಿಶ್ವ ಶಿಕ್ಷಕರ ದಿನ
6 ಅಕ್ಟೋಬರ್ - ಜರ್ಮನ್-ಅಮೇರಿಕನ್ ದಿನ
6 ಅಕ್ಟೋಬರ್ - ವಿಶ್ವ ಸೆರೆಬ್ರಲ್ ಪಾಲ್ಸಿ ದಿನ
7 ಅಕ್ಟೋಬರ್ - ವಿಶ್ವ ಹತ್ತಿ ದಿನ
7 ಅಕ್ಟೋಬರ್ - ವಿಶ್ವ ಆವಾಸ ದಿನ 
8 ಅಕ್ಟೋಬರ್ - ಭಾರತೀಯ ವಾಯುಪಡೆ ದಿನ
9 ಅಕ್ಟೋಬರ್ - ವಿಶ್ವ ಅಂಚೆ ದಿನ
10 ಅಕ್ಟೋಬರ್ - ರಾಷ್ಟ್ರೀಯ ಅಂಚೆ ದಿನ
10 ಅಕ್ಟೋಬರ್ - ವಿಶ್ವ ಮಾನಸಿಕ ಆರೋಗ್ಯ ದಿನ
10 ಅಕ್ಟೋಬರ್ - ವಿಶ್ವ ದೃಷ್ಟಿ ದಿನ
 11 ಅಕ್ಟೋಬರ್ - ಹೆಣ್ಣು ಮಗುವಿನ ಅಂತರಾಷ್ಟ್ರೀಯ ದಿನ
11 ಅಕ್ಟೋಬರ್ - ದುರ್ಗಾ ಅಷ್ಟಮಿ
11 ಅಕ್ಟೋಬರ್ - ಮಹಾನವಮಿ
12 ಅಕ್ಟೋಬರ್ - ದಸರಾ
13 ಅಕ್ಟೋಬರ್ - ವಿಪತ್ತು ಅಪಾಯ ಕಡಿತಕ್ಕಾಗಿ ಅಂತರಾಷ್ಟ್ರೀಯ ದಿನ
13 ಅಕ್ಟೋಬರ್ - ಸ್ತನ ಕ್ಯಾನ್ಸರ್ ಜಾಗೃತಿ ದಿನ
14 ಅಕ್ಟೋಬರ್ - ವಿಶ್ವ ಗುಣಮಟ್ಟ ದಿನ
15 ಅಕ್ಟೋಬರ್ - ಗರ್ಭಾವಸ್ಥೆ ಮತ್ತು ಶಿಶು ನಷ್ಟದ ಸ್ಮರಣಾರ್ಥ ದಿನ
15 ಅಕ್ಟೋಬರ್ - ಜಾಗತಿಕ ಕೈ ತೊಳೆಯುವ ದಿನ
15 ಅಕ್ಟೋಬರ್ - ವಿಶ್ವ ಬಿಳಿ ಕಬ್ಬಿನ ದಿನ
15 ಅಕ್ಟೋಬರ್ - ವಿಶ್ವ ವಿದ್ಯಾರ್ಥಿಗಳ ದಿನ
16 ಅಕ್ಟೋಬರ್ - ವಿಶ್ವ ಆಹಾರ ದಿನ
16 ಅಕ್ಟೋಬರ್ - ವಿಶ್ವ ಅರಿವಳಿಕೆ ದಿನ
16 ಅಕ್ಟೋಬರ್ - ಬಾಸ್ ದಿನ
16 ಅಕ್ಟೋಬರ್ - ವಿಶ್ವ ಬೆನ್ನುಮೂಳೆಯ ದಿನ
17 ಅಕ್ಟೋಬರ್ - ಬಡತನ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನ
17 ಅಕ್ಟೋಬರ್ - ವಾಲ್ಮೀಕಿ ಜಯಂತಿ
19 ಅಕ್ಟೋಬರ್ - ಕರ್ವಾ ಚೌತ್
20 ಅಕ್ಟೋಬರ್ - ವಿಶ್ವ ಅಂಕಿಅಂಶ ದಿನ
 21 ಅಕ್ಟೋಬರ್ - ಪೊಲೀಸ್ ಸ್ಮರಣಾರ್ಥ ದಿನ
23 ಅಕ್ಟೋಬರ್ - ಮೋಲ್ ದಿನ
24 ಅಕ್ಟೋಬರ್ - ವಿಶ್ವಸಂಸ್ಥೆಯ ದಿನ
24 ಅಕ್ಟೋಬರ್ - ವಿಶ್ವ ಅಭಿವೃದ್ಧಿ ಮಾಹಿತಿ ದಿನ
28 ಅಕ್ಟೋಬರ್ - ಅಂತರಾಷ್ಟ್ರೀಯ ಅನಿಮೇಷನ್ ದಿನ
29 ಅಕ್ಟೋಬರ್ - ಧನ್ತೇರಸ್
30 ಅಕ್ಟೋಬರ್ - ವಿಶ್ವ ಮಿತವ್ಯಯ ದಿನ
31 ಅಕ್ಟೋಬರ್ - ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಏಕತಾ ದಿನ
31 ಅಕ್ಟೋಬರ್ - ಹ್ಯಾಲೋವೀನ್

Sunday, September 29, 2024

ಸಾಮಾನ್ಯ ಜ್ಞಾನ

*_🌺ಸಾಮಾನ್ಯ ಜ್ಞಾನ ✍🏻_*🍀ಇತ್ತೀಚೆಗೆ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಯಾವ ರಾಜ್ಯ ಸರ್ಕಾರ ಘೋಷಿಸಿದೆ.?*ಉತ್ತರ:- ಕರ್ನಾಟಕ*🍀ಇತ್ತೀಚೆಗೆ 'ನೋಟರಿ ಪೋರ್ಟಲ್' ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ.?*ಉತ್ತರ:- ಕಾನೂನು ಮತ್ತು ನ್ಯಾಯ ಸಚಿವಾಲಯ*🍀ಇತ್ತೀಚೆಗೆ,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವ ಕಾನೂನು ಆಯೋಗದ ರಚನೆಗೆ ಅನುಮೋದನೆ ನೀಡಿದ್ದಾರೆ?*ಉತ್ತರ:- 23ನೇ*🍀ಇತ್ತೀಚೆಗೆ, ಭಾರತೀಯ ನೌಕಾಪಡೆಯು ಯಾವ ದೇಶದೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮ 'ವರುಣ' ನಡೆಸಿತು.?*ಉತ್ತರ:- ನವದೆಹಲಿ*🍀ಇತ್ತೀಚೆಗೆ,"ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ" ಎಲ್ಲಿ ನಡೆಯಿತು.?*ಉತ್ತರ:- ನವದೆಹಲಿ* 🍀 ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾದ ಸ್ಥಳ*ಉತ್ತರ:- ಬಳ್ಳಾರಿ ಜಿಲ್ಲೆಯ ಹೊಸಪೇಟೆ*🍀 ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರು *ಉತ್ತರ:- ಪಂಪಸಾಗರ*🍀ಇವು ತುಂಗಭದ್ರಾ ಅಣೆಕಟ್ಟೆಯಿಂದ ಪ್ರಮುಖ ನೀರಾವರಿ ಲಾಭ ಪಡೆಯುವ ಪ್ರಮುಖ ಭಾಗಗಳು*ಉತ್ತರ:- ಆಂಧ್ರದ ಅನಂತಪುರ & ಕರ್ನೂಲ್, ಕರ್ನಾಟಕದ ಬಳ್ಳಾರಿ & ರಾಯಚೂರು*🍀ಭಾಕ್ರಾನಂಗಲ್ ಜಲವಿದ್ಯುತ್ ಯೋಜನೆ ಇರುವುದು ಇಲ್ಲಿ*ಉತ್ತರ:- ಹಿಮಾಚಲ ಪ್ರದೇಶ* 🍀ತುಂಗಭದ್ರಾ ಯೋಜನೆಯು ಈ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ *ಉತ್ತರ:- ಕರ್ನಾಟಕ ಮತ್ತು ಆಂಧ್ರಪ್ರದೇಶ*🍀ತುಂಗಭದ್ರಾ ಯೋಜನೆಯ ಪ್ರಮುಖ ಉದ್ದೇಶ*ಉತ್ತರ:- ನೀರಾವರಿ ಮತ್ತು ಜಲವಿದ್ಯುಚ್ಛಕ್ತಿಯ ಉತ್ಪಾದನೆ*🍀ನೀರಿನಲ್ಲಿರುವ ಗಾಳಿಯ ಗುಳ್ಳೆಯು ಹೊಳೆಯುವುದಕ್ಕೆ ಕಾರಣ *ಉತ್ತರ:- ಸಂಪೂರ್ಣ ಆಂತರಿಕ ಪ್ರತಿಫಲನ*🍀ನೀರಿಗಿಂತ ಪಾದರಸವನ್ನು ಉಷ್ಣತಾ ಮಾಪಕದಲ್ಲಿ ಉಪಯೋಗಿಸಲು ಕಾರಣ *ಉತ್ತರ:- ಪಾದರಸವು ನೀರಿಗಿಂತ ಹೆಚ್ಚು ಪಾರದರ್ಶಕ*🍀ಸ್ಪಟಿಕದ ರಾಸಾಯನಿಕ ಹೆಸರು *ಉತ್ತರ:- ಸೋಡಿಯಂ ಸಿಲಿಕೇಟ್*

ಗ್ರಂಥಿಗಳು

🛑ಗ್ರಂಥಿಗಳು🛑

➡️ ಮಾನವನ ದೇಹದ ದೊಡ್ಡ ಗ್ರಂಥಿ
 *ಲಿವರ್* 

➡️ ಮಾನವನ ದೇಹದ ಚಿಕ್ಕ ಗ್ರಂಥಿ
 *ಪೀನಿಯಲ್ ಗ್ರಂಥಿ* 

➡️ ಮಾನವನ ದೇಹದ ದೊಡ್ಡ ಅಂಗ
 *ಚರ್ಮ* 

➡️ ಮಾನವನ ದೇಹದ ಮಿಶ್ರ ಗ್ರಂಥಿ 
 *ಮೇದೋಜಿರಕ ಗ್ರಂಥಿ* 

➡️ ಮಾನವನ ದೇಹದ ಮಾಸ್ಟರ್ ಗ್ರಂಥಿ
 *ಪಿಟ್ಯುಟರಿ ಗ್ರಂಥಿ* 

➡️ ಮಾನವನ ದೇಹದ ಬೆಳವಣಿಗೆಯ ಗ್ರಂಥಿ
 *ಪಿಟ್ಯುಟರಿ ಗ್ರಂಥಿ* 

➡️ಮಾನವನ ದೇಹದ ವ್ಯಕ್ತಿತ್ವ ಹಾರ್ಮೋನ್
 *ಥೈರಾಕ್ಸಿನ್* 

➡️ಮಾನವನ ದೇಹದ ತುರ್ತು ಪರಿಸ್ಥಿತಿಯ ಹಾರ್ಮೋನ್
 *ಅಡ್ರಿನಲಿನ್* 

➡️ಪುರುಷ ಸಂಬಂಧಿ ಹಾರ್ಮೋನ್
 *ಟೆಸ್ಟೋಸ್ಟಿರಾನ್* 

➡️ಸ್ತ್ರೀ ಸಂಬಂಧಿ ಹಾರ್ಮೋನ್
 *ಈಸ್ಟ್ರೋಜನ್* 

➡️ಮಾನವನ ದೇಹದ ಜನನ ಹಾರ್ಮೋನ್
 *ಆಕ್ಸಿಟೋಸಿನ್* 

➡️ಮಾನವನ ದೇಹದ ಗ್ರಂಥಿಗಳು ಮತ್ತು ಹಾರ್ಮೋನ್ ಗಳನ್ನು ನಿಯಂತ್ರಿಸುವ ವ್ಯವಸ್ಥೆ
 *ಎಂಡೋಕ್ರೈನ್ ವ್ಯವಸ್ಥೆ*

FDA/SDA". *1991 ರಿಂದ 2019* ರವರೆಗೆ ಪರೀಕ್ಷೆಯಲ್ಲಿ ಕೇಳಿರುವ *ವಿರುದಾರ್ಥಕ ಪದಗಳು

*ಮುಂಬರುವ VAO ಕಡ್ಡಾಯ ಕನ್ನಡ ಪರೀಕ್ಷೆಗೆ ...*
=============
✍️"FDA/SDA". *1991 ರಿಂದ 2019* ರವರೆಗೆ ಪರೀಕ್ಷೆಯಲ್ಲಿ ಕೇಳಿರುವ *ವಿರುದಾರ್ಥಕ ಪದಗಳು* 
🔰🔰🔰🔰🔰
🌸 *ವಿರುದಾರ್ಥಕ ಪದಗಳು*
👇👇👇👇
1) ಆತಂಕ× *ನಿರಾತಂಕ*
2) ಹಿಗ್ಗು × *ಕುಗ್ಗು*
3) ಶ್ವೇತ× *ಕೃಷ್ಣ* 
4) ನಾಕ× *ನರಕ*
5) ಆದಿ× *ಅಂತ್ಯ*
6) ನಿರ್ಗಮನ× *ಆಗಮನ*
7) ಸೃಷ್ಟಿ× *ಲಯ*
8) ಪ್ರೀತಿ× *ದ್ವೇಷ*
9) ತೆಂಕಣ× *ಬಡಗಣ*
10) ಯೋಚನೆ× *ನಿರ್ಯೋಚನೆ*
11) ರವ× *ನಿರವ*
12) ಗರತಿ× *ಗಯ್ಯಾಳಿ*
13) ಊರ್ಜಿತ× *ಅನೂರ್ಜಿತ*
14) ಸ್ಥಾಪಕ× *ಭಂಜಕ*
15) ಆಕಸ್ಮಿಕ× *ನಿರೀಕ್ಷಿತ*
16) ಸ್ವಾತಂತ್ರ್ಯ× *ಪಾರತಂತ್ರ್ಯ*
17) ನೇರ× *ವಕ್ರ*
18) ಮುನ್ನುಡಿ× *ಹಿನ್ನುಡಿ*
19) ಉನ್ನತ× *ಅವನತ*
20) ಅನನ್ಯ× *ಸಾಮಾನ್ಯ*
21) ದೊರಗು× *ಕೋಮಲ*
22) ಕೊರತೆ× *ಹೆಚ್ಚಳ*
23) ಅಸ್ತಿತ್ವ× *ನಾಸ್ತಿತ್ವ*
24) ಆಕೃತಿ× *ನಿರಾಕೃತಿ*
25) ರಚನೆ× *ನಿರಚನೆ*
26) ಶೋಕ× *ಸಂತೋಷ*
27) ಸಾರ್ಥಕ× *ನಿರರ್ಥಕ*
28) ಉತ್ಸರ್ಪಿಣಿ× *ಅವಸರ್ಪಿಣಿ*
29) ಸದಾಚಾರ× *ದುರಾಚಾರ*
30) ಪಿಂದೆಸೆ× *ಮುಂದೆಸೆ*
31) ಅಪರಾಧಿ× *ನಿರಪರಾಧಿ*
32) ಸಾಮ್ರಾಜ× *ಸಾಮ್ರಾಜ್ಞೆ*
33) ವಾಹಕ× *ಅ ವಾಹಕ*
34) ವಚನೀಯ× *ಅ ವಚಾನೀಯ*
35) ಬಿಳಿಯ× *ಕರಿಯ*
36) ಮಾನ× *ಅಪಮಾನ*
37) ವಿವೇಕಿ× *ಅ ವಿವೇಕಿ*
38) ದುರ್ಬಲ× *ಸಬಲ*
39) ಸಶೇಷ× *ನಿಶ್ಯಷ*
40) ಅಂತರರ್ವಾಣಿ× *ಬಹಿ ವಾರ್ಣಿ*
41) ದುರ್ದೈವ× *ಸುದೈವ* 
42) ಸಂಯೋಗ× *ವಿಯೋಗ*
43) ಕೃತಜ್ಞ× *ಕೃತಘ್ನ*
44) ಸಾಮಾನ್ಯತೆ× *ಅಸಾಮಾನ್ಯತೆ*
45) ಪ್ರಾಚೀನ× *ಅರ್ವಾಚೀನ*
46) ಅಗತ್ಯ× *ಅನಗತ್ಯ*
47) ಸಾಕ್ಷರತೆ× *ನಿರಕ್ಷರತೆ*
48) ಅನುಮತಿಸು× *ನಿರಾಕರಿಸು*
49) ಆರೋಹಣ× *ಅವರೋಹಣ*
50) ಆಯುಧ× *ನಿರಾಯುಧ*
51) ಶಮನ× *ಉಲ್ಬನ*
52) ವೃದ್ಧ× *ಬಾಲ*
53) ಇಹ× *ಪರ*
54) ಅಂಕುರಾರ್ಪಣ× *ಸಮಾರೋಪನ*
55) ಉಗಮ× *ಅಸ್ತಮ*
56) ಅಗಣ್ಯ× *ಗಣ್ಯ*
57) ಎಳೆಯ ಪ್ರಾಯ× *ಮುದಿ ಪ್ರಾಯ*
58) ಸಾಮ್ರಾಟ× *ಸಾಮ್ರಾಟನಿ*
59) ಉತ್ಕರ್ಷ× *ಅಪಕರ್ಷ*
60) ವೃದ್ಧಿ× *ಕ್ಷಯ*
61) ಅನುಕೂಲ× *ಅನನುಕೂಲ*
62) ವಿಖ್ಯಾತ× *ಕುಖ್ಯಾತ*
63) ಅಭಿಮುಖ× *ವಿಮುಖ*
64) ಊರ್ದ್ವ ಮುಖ× *ಅದೋಮುಖ*
65) ಶಾಮಕ× *ಉಲ್ಬಣಕ*
66) ತುಮುಲ× *ನಿರಾಳ*
67) ಚೇತನ× *ಅಚೇತನ*
68) ಭೃತ್ಯ× *ಪ್ರಭು*
69) ತಿಟ್ಟು× *ತಗ್ಗು*
70) ಸಾತ್ವಿಕ× *ತಾಮಸ*
72) ವಿಜೇತ× *ಪರಾಜಿತ*
73) ಶೀತಲ× *ದಗ್ದ*
74) ಮೂಲೋತ್ಪಾಟನ× *ಪ್ರತಿಷ್ಠಾಪನ*
75) ಕ್ಷುದೆ × *ಸಂತೃಪ್ತಿ*
76) ಯೊಚಕ× *ದಾನಿ*
77) ಸೊರಗು× *ಸೊಕ್ಕು*
78) ಅರಳು× *ಮುದುಡು*
79) ಮಿಲನ× *ವಿಚ್ಛೇದನ*
80) ಪಕ್ಷಪಾತ× *ನೀಪಕ್ಷಪಾತ*
81) ಕನಿಷ್ಠ× *ಗರಿಷ್ಠ*
82) ನಲಿವು× *ನೋವು*
🔰🔰🔰🔰🔰🔰
✍️"FDA/SDA". 1991 ರಿಂದ 2019 ರವರೆಗೆ ಪರೀಕ್ಷೆಯಲ್ಲಿ ಕೇಳಿರುವ ಸಮನಾರ್ಥಕ ಪದಗಳು  ಬಗ್ಗೆ ಇಲ್ಲಿ ಕೊಡಲಾಗಿದೆ.
👇👇👇👇👇👇👇

 🌸 *ಸಮನಾರ್ಥಕ ಪದಗಳು*🌺

1) ಕಡಸು= ಹಸು
2) ಬಾನ್= ಆಕಾಶ
3) ಕುರುಳ= ಕೂದಲು
4) ಕರಿಮುಖ= ಗಣಪತಿ
5) ಬೆನ್ನೀರು= ಬಿಸಿ ನೀರು
6) ಭ್ರಮರ= ದುಂಬಿ
7) ಕೇತನ= ಬಾವುಟ
8) ಒಲುಮೆ= ಪ್ರೀತಿ
9) ಕೌಸ್ತುಭದರ= ವಿಷ್ಣು
10) ಮೀನ್= ಹೊಳೆಯುವ
11) ಒಸಗೆ= ಉತ್ಸವ
12) ಚಾರಣ= ಸಂಚಾರ
13) ತಂಗದಿರ= ಚಂದ್ರ ( ತಿಂಗಳು= ಚಂದ್ರ )
14) ದುರಂಧರ= ಹೊಣೆಗಾರ
15) ಬಾದರಾಯಣ ಸಂಬಂಧ= ಪ್ರಾಚೀನ ಸಂಬಂಧ
16) ಬೋಳೇಶಂಕರ= ಮೋಸ ಹೋಗುವನು
17) ಅಮೂರ್ತ= ಆಕಾರವಿಲ್ಲದ
18) ಇಂಚರ= ಇಂಪಾದ ಸ್ವರ
19) ಕನಸುಣಿ= ಕನಸು ಕಾಣುವವನು
20) ಕರತಾಲಮಲಕ= ಅಂಗೈ ಮೇಲಿನ ನಲ್ಲಿಕಾಯಿ
21) ಆದಿ= ಮನೋರೋಗ
22) ಕೊಲ್ಲೂರು= ದೇವಸ್ಥಾನದ ಊರು
23) ವಿಕ್ಷಿಪ್ತ ಮನಸು= ಹೊರಚೆಲ್ಲಿದ ಮನಸ್ಸು
24) ವಿಜಗೀಷು= ಗೆಲುವನ್ನು ಬಯಸುವವನು
25) ಅರಿಲ್= ನಕ್ಷತ್ರ
26) ವಿವೇಚನೆ= ಓದುವಿಕೆಯ ವಿಧಾನ,  ಅರ್ಥೈಸುವ ಒಂದು ತತ್ವ
27) ಪುಲ್ಲವಡಿಗ= ಹೂವು ಮಾರುವವನು
28) ವಿಸರ= ಗುಂಪು
29) ಕೆಥಾರ್ಸಿಸ್= ಭಾವವಿರೇಚನ
30) ತುಕಡಿ= ಒಂದು ಚಿಕ್ಕ ಸೇನಾ ವಿಭಾಗ
31) ಸ್ಪುರಿಸುವುದು= ಹೊಳೆಯುವುದು
32) ದುರ್ಯೋಧನ= ಛಲ ಹಿಡಿದ ಮನುಷ್ಯ
33) ವ್ಯಷ್ಠಿ  ಪ್ರಜ್ಞೆ= ವಿಶಿಷ್ಟವಾದ ತಿಳಿವಳಿಕೆ
34) ಸುಸಂಗತ್ಯ= ಜೊತೆಗೂಡಿ ಬರುವಿಕೆ
35) ಕಾವ್ಯಮೀಮಾಂಸೆ= ಕಾವ್ಯದ ಹುಟ್ಟು,
36) ವಿಕಿರಣ= ಹರಡುವಿಕೆ
37) ಕೆಂಗದಿರ= ಸೂರ್ಯ
38) ವೈಜ್ಞಾನಿಕ= ವಿಜ್ಞಾನಕ್ಕೆ ಸಂಬಂಧಿಸಿದ
39) ಹರಿ= ಪ್ರವಹಿಸು / ಚುರು ಮಾಡು.
40) ಸಹೃದಯ= ಸಮಾನ ಮನಸ್ಸುಳ್ಳ
41) ಚದುರ= ಬುದ್ಧಿವಂತ / ಜಾಣ.
42) ಮಹಲ= ಸೌಧ
43) ವರ್ಣನಿಯ= ಬಣ್ಣಿಸಲು ಸಾಧ್ಯವಿಲ್ಲದ
44) ಚಿಪ್ಪಿಗ= ಬಟ್ಟೆ ಹೊಲಿಯುವ
45) ಒಳತೋಟ= ಮನಸ್ಸಿನ ಹೊಯ್ದಾಟ
46) ಕಟ್ಟಳಲು= ಅತಿಯಾದ ದುಃಖ
47) ಕನ್ನಡವಕ್ಕಿ= ಗಿಳಿ
48) ಅನುಪಮಾ= ಹೋಲಿಕೆಯಿಲ್ಲದ
49) ಕಾಕತಾಳಿಯ= ಆಕಸ್ಮಾತದ
50) ಗೌಳಿಗ= ಹಸು ಸಾಕಿ ಹಾಲು ಮಾರುವವನು
51) ಆಕಾಶ= ಬಾನು
52) ಭವಾಣೆ= ಕಷ್ಟ
53) ಪೋಡವಿ= ಪೃಥ್ವಿ
54) ಪನಿ= ಹನಿ
55) ನೇತಾರ= ಮುಖಂಡ
56) ಸೂಜಿಗ= ಆಚಾರ್ಯ
57) ದುಗುಡ= ದುಃಖ
58) ಜಕಾತಿ= ಸುಂಕ
59) ಉತ್ತಾರಣ= ದಾಟುವಿಕೆ
60) ಬವರ= ಯುದ್ಧ
61) ಸಾಕೋತ= ಅಭಿಪ್ರಾಯ ಸಹಿತವಾದ
62) ಮದೀನಿ= ಭೂಮಿ
63) ಆವು= ಹಸು
64) ಪ್ರಮೋದ= ಸಂತೋಷ
65) ತಂಡುಲ= ಅಕ್ಕಿ
66) ಮುಖರ= ಕನ್ನಡಿ
67) ಮೀನ್= ಹೊಳೆಯುವ
68) ಪ್ರಚನ್ನ= ಗುಪ್ತ
69) ಜರ= ಮುಪ್ಪು
70) ಕೆಪಿಗ= ಹಕ್ಕಿ
71) ಕಾನನ= ಕಾಡು
72) ಹಾವುಗೆ= ಪಾದಕೆ
73) ಕಾಂತಾರ= ಕಾನನ
74) ಸಮುದ್ರ= ಕಡಲು,  ಸಾಗರ
75) ಅಗ್ಗಿಣಿ= ನೀರು
76) ಹರೀಲ್= ನಕ್ಷತ್ರ...
===============

ವಿಟಮಿನ್ಸ್

🌺 *ಜೀವಸತ್ವ :—  ಜೀವಸತ್ವ A* 
• ಕೊರತೆಯ ರೋಗ : ನಿಕ್ಟಾಲೋಪಿಯಾ
• ರೋಗ ಲಕ್ಷಣಗಳು : ರಾತ್ರಿ ಕುರುಡುತನ 

🌺 *ಜೀವಸತ್ವ :—  ಜೀವಸತ್ವ B1* 
• ಕೊರತೆಯ ರೋಗ : ಬೆರಿ ಬೆರಿ
• ರೋಗ ಲಕ್ಷಣಗಳು : ನರಗಳ ಅವ್ಯವಸ್ಥೆ 

🌺 *ಜೀವಸತ್ವ :—  ಜೀವಸತ್ವ B5* 
• ಕೊರತೆಯ ರೋಗ : ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
• ರೋಗ ಲಕ್ಷಣಗಳು : ಅತಿಬೇಧಿ 

🌺 *ಜೀವಸತ್ವ :—  ಜೀವಸತ್ವ B12* 
• ಕೊರತೆಯ ರೋಗ : ಪರ್ನಿಸಿಯಸ್
• ರೋಗ ಲಕ್ಷಣಗಳು : ರಕ್ತಹೀನತೆ, RBC ಯ ಹಾನಿ 

🌺 *ಜೀವಸತ್ವ :—  ಜೀವಸತ್ವ C* 
• ಕೊರತೆಯ ರೋಗ : ಸ್ಕರ್ವಿ
• ರೋಗ ಲಕ್ಷಣಗಳು : ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ 

🌺 *ಜೀವಸತ್ವ :—  ಜೀವಸತ್ವ D* 
• ಕೊರತೆಯ ರೋಗ : ರಿಕೆಟ್ಸ್
• ರೋಗ ಲಕ್ಷಣಗಳು : ಮೂಳೆಗಳ ನ್ಯೂನ ಕ್ಯಾಲ್ಸೀಕರಣ 

🌺 *ಜೀವಸತ್ವ :—  ಜೀವಸತ್ವ E* 
• ಕೊರತೆಯ ರೋಗ : ಬಂಜೆತನ
• ರೋಗ ಲಕ್ಷಣಗಳು : ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ 

🌺 *ಜೀವಸತ್ವ :—  ಜೀವಸತ್ವ K* 
• ಕೊರತೆಯ ರೋಗ : ರಕ್ತಸ್ರಾವ
• ರೋಗ ಲಕ್ಷಣಗಳು : ರಕ್ತಹೀನವಾಗುವುದು.

ಮನೆತನಗಳು ಲಾಂಛನ

ರಾಜ ಮನೆತನಗಳು ಮತ್ತು ಲಾಂಛನಗಳು

ಮನೆತನಗಳು                   ಲಾಂಛನ

1. ಕದಂಬರು            -             ಸಿಂಹ

2. ಮೌರ್ಯರು         -             ಧರ್ಮಚಕ್ರ

3. ಶಾತವಾಹನರು     -            ಅಶ್ವದಳ

4. ಗಂಗರು                -            ಮದಗಜ

5. ಬಾದಾಮಿ ಚಾಲುಕ್ಯರು  -      ವರಾಹ

6. ರಾಷ್ಟ್ರಕೂಟರು       -             ಗರುಡ

7. ಕಲ್ಯಾಣ ಚಾಲುಕ್ಯರು  -          ವರಾಹ

8. ವಿಜಯನಗರ ಸಾಮ್ರಾಜ್ಯ  -    ವರಾಹ

9. ಮೈಸೂರ ಒಡೆಯರು  -     ಗಂಡಭೇರುಂಡ

10. ಚೋಳರು          -             ಹುಲಿ

11. ಪಲ್ಲವರು          -              ನಂದಿ

12. ಚೇರರು            -               ಮೀನು

ಪ್ರಮುಖ ಕಾಯ್ದೆಗಳು

ಪ್ರಮುಖ ಕಾಯ್ದೆಗಳು :

🌳 ಪ್ರಥಮ ಅರಣ್ಯ ನೀತಿ 1894
🏭ಕಾರ್ಖಾನೆಗಳ ಕಾಯ್ದೆ 1948
🫒ಪ್ರಥಮ ವನ ಮಹೋತ್ಸವ 1950
🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954
🌀ಅಂತರಾಜ್ಯ ಜಲ ಕಾಯ್ದೆ. 1956
🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
🦁 ಸಿಂಹ ಯೋಜನೆ. 1972
🐯ಹುಲಿ ಯೋಜನೆ. 1973
🐊ಮೆಾಸಳೆ ಯೋಜನೆ. 1974
🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
🌳ಅರಣ್ಯ ಸಂರಕ್ಷಣಾ ಕಾಯ್ದೆ. 1980
🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
🌴ಪರಿಸರ ಸಂರಕ್ಷಣಾ ಕಾಯ್ದೆ. 1986
🦏ಘೆಂಡಾಮ್ರಗ ಯೋಜನೆ. 1987
🪴ಭಾರತದ ಹೊಸ ಅರಣ್ಯ ನೀತಿ. 1988
🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
🍀ಕರಾವಳಿ ಸಂರಕ್ಷಣಾ ಯೋಜನೆ. 1989
🐘ಆನೆ ಯೋಜನೆ 1992
🌾ಹಿಮ ಚಿರತೆ ಯೋಜನೆ. 2009

ಪ್ರಮುಖ ಕಾಯ್ದೆಗಳು

ಪ್ರಮುಖ ಕಾಯ್ದೆಗಳು :

🌳 ಪ್ರಥಮ ಅರಣ್ಯ ನೀತಿ 1894
🏭ಕಾರ್ಖಾನೆಗಳ ಕಾಯ್ದೆ 1948
🫒ಪ್ರಥಮ ವನ ಮಹೋತ್ಸವ 1950
🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954
🌀ಅಂತರಾಜ್ಯ ಜಲ ಕಾಯ್ದೆ. 1956
🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
🦁 ಸಿಂಹ ಯೋಜನೆ. 1972
🐯ಹುಲಿ ಯೋಜನೆ. 1973
🐊ಮೆಾಸಳೆ ಯೋಜನೆ. 1974
🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
🌳ಅರಣ್ಯ ಸಂರಕ್ಷಣಾ ಕಾಯ್ದೆ. 1980
🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
🌴ಪರಿಸರ ಸಂರಕ್ಷಣಾ ಕಾಯ್ದೆ. 1986
🦏ಘೆಂಡಾಮ್ರಗ ಯೋಜನೆ. 1987
🪴ಭಾರತದ ಹೊಸ ಅರಣ್ಯ ನೀತಿ. 1988
🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
🍀ಕರಾವಳಿ ಸಂರಕ್ಷಣಾ ಯೋಜನೆ. 1989
🐘ಆನೆ ಯೋಜನೆ 1992
🌾ಹಿಮ ಚಿರತೆ ಯೋಜನೆ. 2009

ಕನ್ನಡದ ಬಿರುದು→ ಬಿರುದಾಂಕಿತರು..

ಕನ್ನಡದ ಬಿರುದು→ ಬಿರುದಾಂಕಿತರು..
=====================
ಮುಂಬರುವ VAO PDO SDA & FDA PSI PC ಪರೀಕ್ಷೆಗೆ ...
=====================
1 ದಾನ ಚಿಂತಾಮಣಿ→ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯk
3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು
6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್
10 ನಾಟಕರತ್ನ→ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ→ ದಿನಕರ ದೇಸಾಯಿ

12 ಅಭಿನವ ಪಂಪ→ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ
15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ→ ಶಾಂತಕವಿ

18 ಕಾದಂಬರಿ ಪಿತಾಮಹ→ ಗಳಗನಾಥ
19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ
20 ಸಂತಕವಿ→ ಪು.ತಿ.ನ.
21 ಷಟ್ಪದಿ ಬ್ರಹ್ಮ→ ರಾಘವಾಂಕ
22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ→ ಶ್ರೀಪಾದರಾಯ
27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ

28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ
29 ಕವಿ ಚಕ್ರವರ್ತಿ→ ರನ್ನ
30 ಆದಿಕವಿ→ ಪಂಪ
31 ಉಭಯ ಚಕ್ರವರ್ತಿ→ ಪೊನ್ನ
32 ರಗಳೆಯ ಕವಿ→ ಹರಿಹರ
33 ಕನ್ನಡದ ಕಣ್ವ→ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ→ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು→ ಕೆಂಪೇಗೌಡ
37 ವರಕವಿ→ ಬೇಂದ್ರೆ
38 ಕುಂದರ ನಾಡಿನ ಕಂದ→ ಬಸವರಾಜ ಕಟ್ಟೀಮನಿ
39 ಪ್ರೇಮಕವಿ→ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ→ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು→ ಡಿ.ಎಲ್.ನರಸಿಂಹಾಚಾರ್
42 ದಲಿತಕವಿ→ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ→ ಮುಮ್ಮಡಿ ಕೃಷ್ಣರಾಜ ಒಡೆಯರು

*ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮಲ್ಲಿರುವ ಎಲ್ಲಾ ಗ್ರೂಪ್ ಗಳಿಗೆ ತಪ್ಪದೇ ನಮ್ಮ ಚಾನಲ್ ಲಿಂಕ್ ಅನ್ನು ಶೇರ್ ಮಾಡಿ* 🙏🙏🙏
🙏𝐏𝐋𝐄𝐀𝐒𝐄 𝐒𝐇𝐀𝐑𝐄🙏
==============
📚📚📚📚📚📚📚📚

ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳು

🌲 ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳು 👇
🌳 ವಾಘಾ ಗಡಿ - ಪಂಜಾಬ್ (ಭಾರತ-ಪಾಕಿಸ್ತಾನ್)

🌳 ಮೊರೆಹ್ - ಮಣಿಪುರ (ಭಾರತ-ಮ್ಯಾನ್ಮಾರ್)

🌳 ನಾಥು ಲಾ ಪಾಸ್ - ಸಿಕ್ಕಿಂ (ಭಾರತ-ಚೀನಾ)

🌳 ಲೋಂಗವಾಲಾ - ರಾಜಸ್ಥಾನ (ಭಾರತ-ಪಾಕಿಸ್ತಾನ್)

🌳 ಡಾಕಿ ತಮಾಬಿಲ್ - ಮೇಘಾಲಯ (ಭಾರತ-ಬಾಂಗ್ಲಾದೇಶ)

🌳 ರನ್ ಆಫ್ ಕಚ್ - ಗುಜರಾತ್ (ಭಾರತ-ಪಾಕಿಸ್ತಾನ್)

🌳 ಜೈಗಾಂವ್ - ಪಶ್ಚಿಮ ಬಂಗಾಳ (ಭಾರತ-ಭೂತಾನ್)

🌳 ಪ್ಯಾಂಗೊಂಗ್ ಸರೋವರ - ಲಢಾಕ (ಭಾರತ-ಚೀನಾ)

🌳 ಸುನೌಲಿ ಗಡಿ - ಉತ್ತರ ಪ್ರದೇಶ (ಭಾರತ-ನೇಪಾಳ)

🌳 ಧನುಷ್ಕೋಡಿ - ತಮಿಳುನಾಡು (ಭಾರತ-ಶ್ರೀಲಂಕಾ)

*ಕನ್ನಡ ಸಾಹಿತ್ಯದ ಪ್ರಶ್ನೋತ್ತರಗಳು*

*ಕನ್ನಡ ಸಾಹಿತ್ಯದ ಪ್ರಶ್ನೋತ್ತರಗಳು*

*"ಕನ್ನಡ ಸಾಹಿತ್ಯ"*
=============
*ಮುಂಬರುವ VAO ಕಡ್ಡಾಯ ಕನ್ನಡ ಪರೀಕ್ಷೆಗೆ ...*
=============
1) ಕನ್ನಡದ ಕಾವ್ಯ ಪಿತಾಮಹ ಯಾರು.?
☄ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☄ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☄ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☄ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☄ವೈಶಂಪಾಯನ

6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☄ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☄ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☄ ಸುಭದ್ರೆ

9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☄ ಪಂಪ ಭಾರತ

10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☄ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☄ ಭೀಷ್ಮ

12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☄ಕರ್ಣ

13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☄ ಭೀಷ್ಮ

14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☄ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☄ ಪಂಪ ಭಾರತ

16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☄ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☄14 ಆಶ್ವಾಸಗಳು

18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☄ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☄ ಪಂಪ ಭಾರತ

20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☄ ಟಿ.ಎಸ್.ವೆಂಕಣಯ್ಯ

21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☄ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☄ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☄ ಕುವೆಂಪು

24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☄ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☄ಸತ್ಯಾಶ್ರಯ ಇರಿವ ಬೆಡಂಗ

26) " ನೆಲಕಿರಿವೆನೆಂದು ಬಗೆದರೆ.? ಛಲಕಿರಿವೆಂ ಪಾಂಡು ಸುತರೋಳಿ ಕೋಲ್ಲಿಸಿದ ನೆಲನಿದು ಪಾಳ್ನೆಲನೆನಗೆ "
ಎಂಬ ಸಾಲು ಬರುವ ಕಾವ್ಯ ಯಾವುದು.?
☄ಗದಾಯುದ್ಧ (ದುರ್ಯೋಧನ)

27) ಸಾಹಿತ್ಯ ಸಂಶೋಧನ ಕೃತಿಯಲ್ಲಿ " ಭೀಮನೇ ನಾಯಕ ರೌದ್ರವೇ " ಮುಖ್ಯ ರಸ ಎಂದವರು ..?
☄ದ.ರಾ.ಬೇಂದ್ರೆ

28) ರನ್ನನು ಸಿಂಹಾವಲೋಕನ ಕ್ರಮದಿಂದ ಬರೆದ ಕಾವ್ಯ ಯಾವುದು,?
☄ ಗದಾಯುದ್ಧ

29) " ಕೃತಿ ಪರೀಕ್ಷಿಪಂಗೆಂಟೆರ್ದೆಯೆ "
ಎಂದು ಸವಾಲು ಹಾಕಿದ ರನ್ನನ ಕೃತಿ ಯಾವುದು..?
☄ಗದಾಯುದ್ಧ

30) 'ರನ್ನ ವರ ಕವಿ , ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ ' ಈ ಹೇಳಿಕೆಯನ್ನು ನೀಡಿರುವವರು..?
☄ ಬಿ.ಎಂ.ಶ್ರೀ

31) " ನಾಟಕೀಯತೆಯಲ್ಲಿ ರನ್ನನು
ಪಂಪನಿಗಿಂತಲೂ ಒಂದು ಕೈ ಮೇಲು " ಎಂದು ಹೇಳಿದವರು .?
☄ರಂ.ಶ್ರೀ.ಮುಗಳಿ

32) ಜೋಳದ ಪಾಳಿ ಎಂದರೆ..?
☄ ಅನ್ನದ ಹಂಗು(ಋಣ)

33) " ನೀರೊಳಗಿರ್ದುಂ
ಬೆಮರ್ತನುರಗಪತಾಕಂ " ಎಂಬ ಉಕ್ತಿ ಬರುವ ಕೃತಿ..?
☄ ಗದಾಯುದ್ಧ

34) ಗದಾಯುದ್ಧ ಸಂಗ್ರಹ ಕೃತಿ ಬರೆದ ಕವಿ ಯಾರು.?
☄ ತಿ.ನಂ.ಶ್ರೀ

35) ರನ್ನನ ದುರ್ಯೋಧನ ಮಹಾನುಭಾವ ಎಂದವರು ಯಾರು,?
☄ಅನಂತ ರಂಗಚಾರ್

36) " ಬ್ರಹ್ಮ ಗಣ " ವನ್ನು ಜಯಕೀರ್ತಿ
ಹೀಗೆ ಕರೆದಿದ್ದಾರೆ..?
☄ರತಿ

37) ವಡಿಯ ಪ್ರಸ್ತಾಪ ಕನ್ನಡದಲ್ಲಿ ಮೊದಲಿಗೆ ಮಾಡಿದ ಕೃತಿ ಯಾವುದು..?
☄ಕವಿ ಜಿಹ್ವಾಬಂಧನ

38) ಕಂದ ಪದ್ಯದ ಎಷ್ಟನೇ ಗಣದ ಮೇಲೆ ' ಯತಿ ' ಬರುತ್ತದೆ..?
☄6 ನೇ ಗಣ

39) ಸಂಸ್ಕೃತದ ಆರ್ಯಾಗೀತಿ ; ಪ್ರಾಕೃತದ ' ಸ್ಕಂಧಕ 'ಎಂದಕ್ಕೆ ಕನ್ನಡ ಸಂವಾದ ಪದ ಯಾವುದು,?
☄ಕಂದ ಪದ್ಯ

40) " ಖ್ಯಾತ ಕರ್ನಾಟಕ ವೃತ್ತಗಳು " ಎಂದು ಹೆಸರಿಸಿದವರು.?
☄1ನೇ ನಾಗವರ್ಮ

41) ಅಚ್ಚಗನ್ನಡ ಛಂದಸ್ಸಿನ ಹತ್ತು ಮಟ್ಟುಗಳಲ್ಲಿ ಮೊದಲನೆಯದು,?
☄ಮದನವತಿ

42) ಗೀತಿಕೆಯ ಮೊದಲ ಪ್ರಯೋಗ ಕಂಡು ಬರುವ ಕೃತಿ ಯಾವುದು.. ?
☄ಕವಿರಾಜಮಾರ್ಗ

43) ಪೊಸಗನ್ನಡದಿಂ ವ್ಯಾವರ್ಣಿಸುವೆಂ
ಸತ್ಕೃತಿಯಂ ಎಂದು ಹೇಳಿದವನು ..?
☄ಚಂದ್ರರಾಜ

44) ಕನ್ನಡ ಮೊದಲನೆಯ ವ್ಯಾಕರಣ '
ಶಬ್ಧಸ್ಮೃತಿ ' ಮತ್ತು ಸಂಸ್ಕೃತದಲ್ಲಿ ಕನ್ನಡ ವ್ಯಾಕರಣ" ಕರ್ಣಾಟಕ ಭಾಷಾಭೂಷಣ " ಬರೆದ ಕವಿ ಯಾರು .?
☄2 ನೇ ನಾಗವರ್ಮ

45) ಆಗಮ ಲೌಕಿಕ ವಿರೋಧಮಂ ಕಳೆದು , ಸಾರಾಂಶಮಂ ಕೊಂಡಾ ಹಲವು ಮತಂಗಳನೊಂದು ಮಾಡಿ ಬರೆದ ಕಾವ್ಯ ಯಾವುದು..?
☄ಮದನ ತಿಲಕ

46) 24ನೇ ತೀರ್ಥಕರ ಮಹಾವೀರನ ಕುರಿತು ಚಂಪೂ ಕಾವ್ಯ ಬರೆದ ಕವಿ ಯಾರು,?
☄2ನೇ ನಾಗವರ್ಮ -ವರ್ಧಮಾನ ಪುರಾಣ

47) ಕವಿರಾಜ ಮಾರ್ಗದಲ್ಲಿ ಪ್ರಾಸಾಕ್ಷರವನ್ನು ಹೀಗೆ ಕರೆಯಲಾಗಿದೆ..?
☄ಶಬ್ದಾಲಂಕಾರ

48) ಸುಭಟರ್ಕಳ್, ಕವಿಗಳ್ ,ಸುಪ್ರಭುಗಳ್ ಎಂದು
ವರ್ಣಿಸುವುದಕ್ಕೆ ಕವಿರಾಜಮಾರ್ಗದ ಪ್ರಕಾರ ಯಾವುದು,?
☄ಬಹುವಿಶೇಷಣ

49) ಅಕ್ಷರ ಗಣ ಕನ್ನಡಕ್ಕೆ ಯಾವ ಭಾಷೆಯ ಕೊಡುಗೆ ಯಾಗಿದೆ .?
☄ಸಂಸ್ಕೃತ

50) ಪ್ರಾಸಾಕ್ಷರವು ವಿಸರ್ಗದಿಂದ ಕೊಡಿದ್ದರೆ...?
☄ಅಜಪ್ರಾಸ

Thursday, September 26, 2024

2024ನೇ ಸಾಲಿನ `ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' ಪ್ರಕಟ : ಪ್ರೊ. ಜಿ.ಬಿ. ಶಿವರಾಜು, ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗೌರವ

2024ನೇ ಸಾಲಿನ `ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' ಪ್ರಕಟ : ಪ್ರೊ. ಜಿ.ಬಿ. ಶಿವರಾಜು, ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗೌರವ




ಕರ್ನಾಟಕ ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರತಿವರ್ಷ ನೀಡುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಗಾಂಧಿವಾದಿ ಪ್ರೊ. ಜಿ.ಬಿ. ಶಿವರಾಜು ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗಳು ಆಯ್ಕೆಯಾಗಿವೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಗ್ರಾಮಸ್ವರಾಜ್, ಅಸ್ಪøಶ್ಯತೆ ನಿವಾರಣೆ, ಆರ್ಥಿಕ ಚಿಂತನೆಗಳು, ಖಾದಿ ಚಟುವಟಿಕೆ, ಜೀವನ ಶಿಕ್ಷಣ ಮತ್ತಿತರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆ ಮಾಡಿದ ಮಹನೀಯರು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲು ಕರ್ನಾಟಕ ರಾಜ್ಯ ಸರ್ಕಾರವು 2014 ರಲ್ಲಿ ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ಸ್ಥಾಪಿಸಿ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಶಸ್ತಿ ಫಲಕ ಹಾಗೂ ರೂ.5 ಲಕ್ಷ ನಗದು ಒಳಗೊಂಡಿರುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು 2014 ರಿಂದ ಪ್ರದಾನ ಮಾಡುತ್ತಾ ಬಂದಿದೆ. 2023 ರ ವರೆಗೆ 8 ವ್ಯಕ್ತಿಗಳು ಹಾಗೂ 2 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2024ನೇ ಸಾಲಿನ ಪ್ರಶಸ್ತಿಯು ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರಿಗೆ ಮತ್ತು ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಸಂಸ್ಥೆಗೆ ವಿಂಗಡಿಸಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತವನ್ನು ತಲಾ ರೂ.2.5 ಲಕ್ಷಗಳಂತೆ ಸಮನಾಗಿ ಪುರಸ್ಕಾರ ನೀಡಿ ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಬರುವ ಅಕ್ಟೋಬರ್ 02 ಗಾಂಧಿ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಸನತ್ಕುಮಾರ್ ಬೆಳಗಲಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೂಡೆ ಪಿ.ಕೃಷ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಅವರು ಸದಸ್ಯರಾಗಿದ್ದರು.


ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತರು


ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ


ನಿವೃತ್ತ ಉಪನ್ಯಾಸಕರಾಗಿರುವ ಪ್ರೊ. ಜಿ.ಬಿ. ಶಿವರಾಜು ಅವರು ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಗಾಂಧಿ ವಿಚಾರಧಾರೆಯನ್ನು ರೂಪಿಸಲು ಶ್ರಮಿಸಿದ್ದಾರೆ. 73 ವರ್ಷದ ಇವರು ತಮ್ಮ ನಿವೃತ್ತಿ ವೇತನವನ್ನು ಗಾಂಧೀ ವಿಚಾರಗಳನ್ನು ಯುವ ಜನರಿಗೆ ತಲುಪಿಸಲು ವಿನಿಯೋಗಿಸುತ್ತಿದ್ದಾರೆ. ಗಾಂಧಿ ಪ್ರಣೀತ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮದ್ಯಪಾನ ಸಂಯಮ ಮಂಡಳಿಗಳ ಸಮನ್ವಯದ ಮೂಲಕ ಗಾಂಧಿ ವಿಚಾರಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಅರಸೀಕೆರೆಯಲ್ಲಿನ ಕಸ್ತೂರ ಬಾ ಗಾಂಧಿ ಆಶ್ರಮದ ಪುನರುಜ್ಜೀವನಗೊಳಿಸಿದ್ದಾರೆ. ಮೂಡಿಗೆರೆಯ ಭಾರತಿ ಬೈಲ್ ಕೇಂದ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆ ಮಾರ್ನೋಮಿದೊಡ್ಡಿ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಟ್ರಸ್ಟ್ನ ಉಪಕೇಂದ್ರವನ್ನು ಸ್ಥಳೀಯರ ಸಹಕಾರದಿಂದ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಕಾರ್ಯಾಗಾರವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಂಸ್ಥೆಯ 20 ಎಕರೆಗೂ ಹೆಚ್ಚು ಭೂಮಿಯಲ್ಲಿ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಸ್ಥಳೀಯರ ಸಹಕಾರದೊಂದಿಗೆ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಬರಮತಿ ಮಾದರಿಯ ಆಶ್ರಮ ನಿರ್ಮಾಣ. ಗದಗ ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ ಆಶ್ರಮದ ಮಾದರಿಯನ್ನು ನಿರ್ಮಿಸಿ ಗಾಂಧೀಜಿಯವರ ಬದುಕು ಸಾಧನೆಗಳನ್ನು ಯುವಜನರು ಹಾಗೂ ಗ್ರಾಮೀಣ ಭಾಗದ ಜನರಿಗೆ ಆಕರ್ಷಕವಾಗಿ ಅನಾವರಣಗೊಳಿಸಿದ್ದಾರೆ. ಗಾಂಧೀ ಸಾಹಿತ್ಯ ಸಂಘ, ಹರಿಜನ ಸೇವಕ ಸಂಘ ಮೊದಲಾದ ಸಂಸ್ಥೆಗಳನ್ನು ಪುನರಜ್ಜೀವಗೊಳಿಸಿದ್ದಾರೆ.


ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ


1984 ರ ಅಕ್ಟೋಬರ್ 02 ರಂದು ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದಲ್ಲಿ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನವು ಸ್ಥಾಪಿಸಿದ ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯು ಕಳೆದ 39 ವರ್ಷಗಳಿಂದ ಗಾಂಧಿ ವಿಚಾರಗಳನ್ನು ಹೊಸ ಪೀಳಿಗೆಯಲ್ಲಿ ಅಳವಡಿಸಲು ಅಹರ್ನಿಶಿ ದುಡಿಯುತ್ತಿದೆ. ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 5 ರಿಂದ 10 ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳು ಸೇರಿದಂತೆ ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.


ಇಲ್ಲಿನ ವಿದ್ಯಾರ್ಥಿಗಳು ತಾವೇ ನೇಯ್ದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ಬೆಳೆದ ಕೃಷಿ ಬೆಳೆಗಳಿಂದ ತಯಾರಿಸಿದ ಆಹಾರ ಸೇವಿಸುತ್ತಾರೆ. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯ ಪಠ್ಯಕ್ರಮದ ಜೊತೆಗೆ ಗಾಂಧೀ ವಿಚಾರಧಾರೆಯ ಅನುಸಾರ ಕೃಷಿ, ನೂಲು ಮತ್ತು ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ ಮುಂತಾದ ಸ್ವಾವಲಂಬಿ, ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯು ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.






Sunday, September 15, 2024

Daily GK Quiz: ವಿಶ್ವಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು?

ಪ್ರಶ್ನೆ 1: ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು?

ಉತ್ತರ: 1930

ಪ್ರಶ್ನೆ 2: ಚೌರಿ ಚೌರಾ ಗ್ರಾಮವು ಭಾರತದ ಯಾವ ರಾಜ್ಯದಲ್ಲಿದೆ?

ಉತ್ತರ: ಉತ್ತರ ಪ್ರದೇಶ

ಪ್ರಶ್ನೆ 3: ಮೊರಾಕೊದ ರಾಜಧಾನಿ ಯಾವುದು?

ಉತ್ತರ: ಮೊಜಾಂಬಿಕ್

ಪ್ರಶ್ನೆ 4: ಭಾರತದ ಯಾವ ರಾಜ್ಯದಲ್ಲಿ ಹಾರ್ನ್‌ಬಿಲ್ ಹಬ್ಬವನ್ನು ಆಚರಿಸಲಾಗುತ್ತದೆ?

ಉತ್ತರ: ನಾಗಾಲ್ಯಾಂಡ್

ಪ್ರಶ್ನೆ 5: ಭೂಮಿಯ ಮೇಲಿನ ಅತಿ ದೊಡ್ಡ ನದಿ ಯಾವುದು?

ಉತ್ತರ: ಅಮೆಜಾನ್ ನದಿ

ಪ್ರಶ್ನೆ 6: ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು?

ಉತ್ತರ: ಮ್ಯಾಂಡರಿನ್ ಚೈನೀಸ್

ಪ್ರಶ್ನೆ 7: ನಳಂದಾ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು?

ಉತ್ತರ: ಭಕ್ತಿಯಾರ್ ಖಿಲ್ಜಿ

ಪ್ರಶ್ನೆ 8: ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು?

ಉತ್ತರ: ಚಂದ್ರಗುಪ್ತ ಮೌರ್ಯ

ಪ್ರಶ್ನೆ 9: ಭಾರತದ ಮೊದಲ ದೇಶೀಯ ಪತ್ರಿಕೆ ಯಾವುದು?

ಉತ್ತರ: ಸಮಾಚಾರ ದರ್ಪಣ

ಪ್ರಶ್ನೆ 10: ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು?

ಉತ್ತರ: ಕಾಂಚನಜುಂಗಾ

Wednesday, September 11, 2024

5000 ಪಿಂಚಣಿ ಪಡೆಯಲು ಪ್ರತಿ ತಿಂಗಳು 210 ರೂ. ಪಾವತಿಸಬೇಕು

Atal pension yojana: ಪ್ರಸ್ತುತ ನಿಯಮಗಳ ಪ್ರಕಾರ, ನಿವೃತ್ತಿ ನಂತರ ಪ್ರತಿ ತಿಂಗಳು 5000 ರೂ. ಪಿಂಚಣಿ ಪಡೆಯಬೇಕೆಂದರೆ, ನೀವೀಗ 18 ವರ್ಷ ವಯಸ್ಸಿನವರಾದರೆ, ಪ್ರತಿ ತಿಂಗಳು 210 ರೂ. ಪಾವತಿಸಬೇಕು. ಇದೇ ಹಣವನ್ನು ಮೂರು ತಿಂಗಳಿಗೊಮ್ಮೆ ನೀಡಿದರೆ 626 ರೂ. ಪಾವತಿಸಬೇಕು.

ಆರು ತಿಂಗಳಿಗೊಮ್ಮೆ 1,239 ರೂ. ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯಲು, ನೀವು 18 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ, ನೀವು ತಿಂಗಳಿಗೆ 42 ರೂಪಾಯಿ ಪಾವತಿಸಬೇಕಾಗುತ್ತದೆ.

Tuesday, September 10, 2024

Daily GK Quiz: ಅರ್ಜೆಂಟೀನಾದ ರಾಜಧಾನಿ ಯಾವುದು?

ಪ್ರಶ್ನೆ 1: ಪ್ಲಾಸಿ ಕದನ ಯಾವಾಗ ನಡೆಯಿತು?

ಉತ್ತರ: 1757

ಪ್ರಶ್ನೆ 2: ಯಾವ ಮೊಘಲ್ ಚಕ್ರವರ್ತಿ ʼಜಿಂದಾ ಪಿರ್ʼ ಎಂದು ಪ್ರಸಿದ್ಧರಾಗಿದ್ದರು?

ಉತ್ತರ: ಔರಂಗಜೇಬ್

ಪ್ರಶ್ನೆ 3: ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಏಪ್ರಿಲ್ 7

ಪ್ರಶ್ನೆ 4: ಪ್ರಸಿದ್ಧ ರೈಮೋನಾ ರಿಸರ್ವ್ ಅರಣ್ಯ ಎಲ್ಲಿದೆ?

ಉತ್ತರ: ಅಸ್ಸಾಂ

ಪ್ರಶ್ನೆ 5: ಒಂದೇ ಸಮ ಅವಿಭಾಜ್ಯ ಸಂಖ್ಯೆ ಯಾವುದು?

ಉತ್ತರ: 2

ಉತ್ತರ: ಬ್ಯೂನಸ್ ಐರಿಸ್

ಪ್ರಶ್ನೆ 7: "ಉತ್ತರಾಖಂಡದ ಜವಾಹರ್" ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಜಗಮೋಹನ್ ಸಿಂಗ್ ನೇಗಿ

ಪ್ರಶ್ನೆ 8: ಪ್ರಸಿದ್ಧ ಜವಾರ್ ಗಣಿಗಳು ಯಾವ ರಾಜ್ಯದಲ್ಲಿವೆ?

ಉತ್ತರ: ರಾಜಸ್ಥಾನ

ಪ್ರಶ್ನೆ 9: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿ ನಂದನ್ ಬೋರಾ ಅವರು ಯಾವ ಕ್ಷೇತ್ರಕ್ಕೆ ಸೇರಿದವರು?

ಉತ್ತರ: ಸಾಹಿತ್ಯ

ಪ್ರಶ್ನೆ 10: ಶರತ್ಕಾಲದ ವಿಷುವತ್ ಸಂಕ್ರಾಂತಿಯು ಯಾವ ದಿನಾಂಕದಂದು ಸಂಭವಿಸುತ್ತದೆ?

ಉತ್ತರ: ಸೆಪ್ಟೆಂಬರ್ 23

Monday, September 9, 2024

Tips for Success : ಈ ಎಲ್ಲವನ್ನು ಎಲ್ಲರಿಗೂ ಹೇಳ್ಬೇಡಿ , ಇದೇ ನೋಡಿ ಯಶಸ್ಸಿನ ಸೀಕ್ರೆಟ್

ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಬಯಸುತ್ತಾರೆ. ಆದರೆ ಕೆಲವರು ಮಾಡುವ ಈ ತಪ್ಪುಗಳಿಂದ ತಾವಂದುಕೊಂಡಂತೆ ಬದುಕುವುದು ದೂರದ ಮಾತಾಗಿರುತ್ತದೆ. ಆದರೆ ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ಕೆಲವು ನಿಯಮ ಪಾಲಿಸಿಬೇಕು ಎನ್ನಲಾಗಿದೆ. ಹಾಗಾದ್ರೆ ಯಶಸ್ಸಿನ ಸೀಕ್ರೆಟ್ ಏನು, ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರಿಗೂ ಕೂಡ ಕಷ್ಟಪಡದೇ ಯಶಸ್ಸು ಸಿಗುವುದಿಲ್ಲ. ಹೀಗಾಗಿ ಯಶಸ್ವೀ ವ್ಯಕ್ತಿಗಳೆಲ್ಲರ ಜೀವನವನ್ನು ನೋಡಿದಾಗ ಅವರು ಒಂದಷ್ಟು ನಿಯಮಗಳನ್ನು ಪಾಲಿಸುತ್ತಾರೆ. ಅದಲ್ಲದೇ ಈ ಕೆಲವು ವಿಚಾರಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಹಾಗಾದ್ರೆ ನಾವು ಅಂದುಕೊಂಡ ಗುರಿಯನ್ನು ತಲುಪಬೇಕಾದರೆ ಈ ನಿಯಮಗಳನ್ನು ಪಾಲಿಸುವುದು ಬಹುಮುಖ್ಯ.

* ರಹಸ್ಯಗಳನ್ನು ಕಾಪಾಡಿಕೊಳ್ಳಿ: ಕೆಲವರಿಗೆ ಎಲ್ಲವನ್ನು ಹೇಳಿ ಬಿಡುವ ಅಭ್ಯಾಸವಿರುತ್ತದೆ. ಆದರೆ ಯಶಸ್ಸು ಗಳಿಸಬೇಕೆಂದುಕೊಂಡವರು ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಕೆಲವು ವಿಚಾರಗಳನ್ನು ಯಾರಿಗೂ ಕೂಡ ಹೇಳಿಕೊಳ್ಳದೆ ನೀವಂದುಕೊಂಡ ಕೆಲಸವನ್ನು ಮಾಡಿ. ವೈಯುಕ್ತಿಕ ಮಾಹಿತಿಗಳು ನಿಮಗಷ್ಟೇ ತಿಳಿದಿದ್ದರೆ ಸಾಕು. ಇದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.

* ಇತರರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ: ಜೀವನದಲ್ಲಿ ಯಶಸ್ಸು ಗಳಿಸಬೇಕೆಂದರೆ ಮೊದಲು ಬೇರೆಯವರ ಅಭಿಪ್ರಾಯಗಳಿಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಡಬೇಕು. ಅವರು ಹಾಗೆ ಅಂದುಕೊಳ್ಳುತ್ತಾರೆ, ಇವರು ಹೀಗೆ ಮಾತನಾಡುತ್ತಾರೆ ಎಂದು ಗಮನಿಸಿದರೆ ನಿಮ್ಮ ಸಮಯವು ಹಾಳಾಗುತ್ತದೆ. ನಿಮ್ಮ ಯಶಸ್ಸನ್ನು ಸಹಿಸಲಾಗದೇ ಅಭಿಪ್ರಾಯವನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಿರುತ್ತದೆ.

* ವೈಯಕ್ತಿಕ ನಿರ್ಧಾರಗಳ ಕುರಿತು ಚರ್ಚೆ ಬೇಡ: ಯಾವುದಾದರೂ ಕೆಲಸಕ್ಕೆ ಕೈ ಹಾಕುವ ಮುನ್ನ ಅದಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ಕೈ ಗೊಳ್ಳುವುದು ಸಹಜ. ಆದರೆ ಈ ಕೆಲವು ನಿರ್ಧಾರ ಗಳ ಬಗ್ಗೆ ಬೇರೆಯಾವರೊಂದಿಗೆ ಚರ್ಚಿಸುವುದಿದೆ. ಈ ಕೆಲಸವನ್ನು ಮಾಡಲೇಬೇಡಿ. ಕೆಲವೊಮ್ಮೆ ನಿಮ್ಮ ನಿರ್ಧಾರ ಸರಿಯಿದ್ದು, ಇತರರು ಅವರ ಅಭಿಪ್ರಾಯವನ್ನು ತಿಳಿಸಿ ನಿಮ್ಮ ಕೆಲಸವು ಪೂರ್ಣಗೊಳ್ಳದ ರೀತಿ ಮಾಡಬಹುದು.

* ಆರೋಗ್ಯದ ಬಗ್ಗೆ ಕಾಳಜಿಯಿರಲಿ : ನಾವು ಅಂದುಕೊಂಡದ್ದನ್ನು ಸಾಧಿಸಬೇಕೆನ್ನುವ ಭರದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಆರೋಗ್ಯಕ್ಕಿಂತ ದೊಡ್ಡದಾದ ಸಿರಿ ಸಂಪತ್ತು ಮತ್ತೊಂದಿಲ್ಲ. ಹೀಗಾಗಿ ಊಟ ತಿಂಡಿ, ನಿದ್ದೆ, ವಿಶ್ರಾಂತಿ ಈ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ಆರೋಗ್ಯವಿದ್ದರೆ ಯಾವಾಗ ಬೇಕಾದರೂ ಗುರಿಯನ್ನು ಮುಟ್ಟಬಹುದು

* ಅದೃಷ್ಟವನ್ನೇ ನಂಬಿ ಕೂರುವುದು ಸರಿಯಲ್ಲ : ಕೆಲವರು ಅದೃಷ್ಟವನ್ನೇ ನಂಬಿ ಕೂರುತ್ತಾರೆ. ಆದರೆ ಈ ಅದೃಷ್ಟವು ಎಲ್ಲಾ ಸಮಯದಲ್ಲಿಯೂ ಕೈಹಿಡಿಯುವುದಿಲ್ಲ. ಕಷ್ಟ ಪಟ್ಟು ದುಡಿಯುವುದು ಕೂಡ ಯಶಸ್ಸಿನ ಮೂಲ ನಿಯಮ. ಕೆಲವೊಮ್ಮೆ ಅದೃಷ್ಟ ಜೊತೆಗಿಲ್ಲದಿದ್ದರೂ ಶ್ರಮ ವಹಿಸಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು.

* ಬೇರೆಯವರ ಅನುಮತಿ, ನಿರ್ಧಾರಕ್ಕೆ ಕಾಯಬೇಡಿ : ನೀವು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ, ಶ್ರಮವಹಿಸಿ ಮಾಡುವುದು ಮುಖ್ಯ. ಬೇರೆಯವರ ಅನುಮತಿ ಹಾಗೂ ನಿರ್ಧಾರದ ಬಗ್ಗೆ ಕೇಳುವುದು ಸರಿಯಲ್ಲ. ಇದರಿಂದ ನಿಮ್ಮ ನಿರ್ಧಾರಗಳು ಹಾಗೂ ಬೇರೆಯವರ ನಿರ್ಧಾರಗಳಲ್ಲಿ ಕೇಳಿ ಕೊಂಡು ಗೊಂದಲ ಉಂಟಾಗಬಹುದು. ಇದರಿಂದ ಸುಮ್ಮನೆ ಸಮಯ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚು.

* ಹಣದ ಹಿಂದೆ ಹೋಗಬೇಡಿ : ಯಶಸ್ವಿ ಜೀವನದ ನಿಯಮಗಳಲ್ಲಿ ಇದನ್ನು ಮುಖ್ಯವಾಗಿ ಪಾಲಿಸಬೇಕು. ಹಣದ ಹಿಂದೆ ಹೋಗುವವರು ಕೆಲವೇ ಹಣಕ್ಕೆ ಮಾತ್ರ ಬೆಲೆ ಕೊಡುತ್ತಾರೆ. ದುಡ್ಡು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಶ್ರಮವಹಿಸಿ ಪ್ರಾಮಾಣಿಕವಾಗಿ ಗುರಿಯತ್ತ ಮುನ್ನುಗ್ಗಿ ದುಡ್ಡು ತಾನಾಗಿಯೇ ನಿಮ್ಮ ಹಿಂದೆ ಬರುತ್ತದೆ.

* ಸಂಬಳದ ಬಗ್ಗೆ ಯಾರೊಂದಿಗೂ ಹೇಳಬೇಡಿ : ನಿಮ್ಮ ಗಳಿಕೆಯ ಬಗ್ಗೆ ಯಾರೊಂದಿಗೂ ಹೇಳಬಾರದಂತೆ. ನಿಮ್ಮ ಸಂಬಳದ ಬಗ್ಗೆ ತಿಳಿದರೆ ಕೆಲವರಿಗೆ ಸಹಿಸಿ ಕೊಳ್ಳಲು ಸಾಧ್ಯವಾಗದೇ ನಿಮ್ಮ ಜೀವನದ ಯಶಸ್ಸಿಗೆ ಮುಳುವಾಗುವ ಸಾಧ್ಯತೆಯೇ ಅಧಿಕವಂತೆ. ಹೀಗಾಗಿ ಈ ವಿಷಯಗಳ ಬಗ್ಗೆ ಹೇಳಿಕೊಳ್ಳುವ ಮುನ್ನ ಎಚ್ಚರವಹಿಸಿ.


 https://bcwdhostel.blogspot.com/?m=1
  https://upparcommunitykar.blogspot.com/?m=1


 https://somalinggovernmentemployees76.blogspot.com/?m=1

 https://bcwdhostelchincholi713.blogspot.com/?m=1

 kawalgasomu.blogspot.com/?m=1


 https://kawalgasomu.blogspot.com/?m=1

 https://somalingmuppar76.blogspot.com/?m=1

Sunday, September 1, 2024

ರಾಜ್ಯ ಸರ್ಕಾರದಿಂದ 'ಅತಿಥಿ ಉಪನ್ಯಾಸಕ'ರ ನೇಮಕಾತಿಗೆ ಅರ್ಜಿ ಆಹ್ವಾನ : ಸೆ.7 ಲಾಸ್ಟ್ ಡೇಟ್ | Guest Lecturer Recruitment

ಕಾಲೇಜು ಶಿಕ್ಷಣ ಇಲಾಖೆಯಿಂದ 2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಸೆಪ್ಟೆಂಬರ್.7 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. 15 ವರ್ಷಗಳಿಗೂ ಹೆಚ್ಚು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದಂತ ಅನುಭವ, UGC ನಿಗದಿತ ವಿದ್ಯಾರ್ಹತೆ ಹೊಂದಿರುವವರಿಗೆ 40,000 ವರೆಗೆ ವೇತನ ಸಿಗಲಿದೆ.
ಈ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ) ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಈ ಕೆಳಕಂಡಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದಿದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 31-08-2024ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-09-2024 ಆಗಿದೆ. ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ದಿನಾಂಕ 08-09-2024ರಂದು ಪ್ರಕಟಿಸಲಾಗುತ್ತದೆ. ಅರ್ಜಿಯಲ್ಲಿ ಏನಾದರೂ ಎಡಿಟ್ ಮಾಡುವುದಿದ್ದರೇ ಸೆ.9 ಮತ್ತು 10ರಂದು ಅವಕಾಶ ನೀಡಲಾಗುತ್ತಿದೆ. ಕಾರ್ಯಭಾರವನ್ನು ಸೆ.11, 2024ರಂದು ಪ್ರಕಟಿಸಲಾಗುತ್ತದೆ. ಮೆರಿಟ್ ಪಟ್ಟಿಯನ್ನು ಕಾಲೇಜು ಆಯ್ಕೆ ಕೌನ್ಸಿಲಿಂಗ್ ನಡೆಸುವ ದಿನಾಂಕ 17-09-2024 ಆಗಿದೆ.

ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು www.dce.karnataka.gov.in ಗೆ ಭೇಟಿ ನೀಡಿ. ಅಲ್ಲದೇ ಹೆಚ್ಚಿನ ಮಾಹಿತಿಯನ್ನು ಇದೇ ಲಿಂಕ್ ನಲ್ಲಿ ಪಡೆಯಬಹುದಾಗಿದೆ

ಗೌರವಧನದ ಮೊತ್ತ

5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ -35,000/-
5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ - 31,000/-
5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ - 38,000/-
5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 10 ವರ್ಷಕ್ಕಿಂತ ಕಡಿಮೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ -34,000/-
10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 15 ವರ್ಷಕ್ಕಿಂತ ಕಡಿಮೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ -39,000/-
10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಹೊಂದಿಲ್ಲದವರಿಗೆ - 39,000/-
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ - 40,000/-
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ - 36,000/-
ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ಭಾಷಾ ವಿಷಯಗಳಿಗೆ ಗರಿಷ್ಠ 15 ಗಂಟೆಗಳ ಹಾಗೂ ವಿಜ್ಞಾನ ವಿಷಯಗಳು/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ಮಾತ್ರ ಹಂಚಿಕೆ ಮಾಡಲಾಗುವುದು ಹಾಗೂ 15/19 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನವನ್ನು ಪರಿಗಣಿಸಲಾಗುವುದು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Teachers Day 2024: ಶಿಕ್ಷಕರ ದಿನ ಆಚರಿಸುವ ಉದ್ದೇಶ, ಮಹತ್ವವೇನು, ಬೇರೆ ದೇಶಗಳಲ್ಲಿ ಟೀಚರ್ಸ್‌ ಡೇ ಯಾವಾಗ; ಇಲ್ಲಿದೆ ಮಾಹಿತಿ

ನಮ್ಮೆಲ್ಲರ ಜೀವನದಲ್ಲಿ ತಂದೆ-ತಾಯಿಗಳಂತೆ ಶಿಕ್ಷಕರ ಪಾತ್ರವು ಬಹಳ ಮಹತ್ವದ್ದು. ಕೈಹಿಡಿದು ಅಕ್ಷರ ತಿದ್ದಿ, ಓದಿ-ಬರೆಯಲು ಕಲಿಸುವುದಷ್ಟೇ ಬದುಕಿನ ಕೌಶಲಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಒಂದರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ ಶಿಲ್ಪಿಗಳು.

ಬದುಕಿನಲ್ಲಿ ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವವರೇ ಶಿಕ್ಷಕರು. ಇಂತಹ ದೈವಸ್ವರೂಪಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ದಿನವನ್ನು ನಿಗದಿ ಪಡಿಸಲಾಗಿದೆ, ಅದುವೇ ಶಿಕ್ಷಕರ ದಿನಾಚರಣೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮದಿನ 

ಭಾರತದಾದ್ಯಂತ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹುಟ್ಟಿದ ದಿನ. ಗೌರವಾನ್ವಿತ ಶಿಕ್ಷಣತಜ್ಞರಾಗಿದ್ದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರ ಅದ್ಭುತ ಗುಣಗಳು, ವರ್ಚಸ್ಸಿನಿಂದ ವಿದ್ಯಾರ್ಥಿಗಳು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ವ್ಯಕ್ತಿತ್ವವು ಅವರ ವಿದ್ಯಾರ್ಥಿಗಳಿಂದ ಅಪಾರ ಗೌರವವನ್ನು ಹುಟ್ಟುಹಾಕಿತು. ಅವರ ಜನ್ಮದಿನವನ್ನು ಆಚರಿಸಲು ಉತ್ಸುಕರಾಗಿದ್ದ ವಿದ್ಯಾರ್ಥಿಗಳ ಗುಂಪಿಗೆ ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಸೂಚಿಸಿದರು.

ಡಾ. ರಾಧಾಕೃಷ್ಣನ್ ಅವರು 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದಾಗ, ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆಕೇಳಿಕೊಂಡರು. ಅವರು ಆಡಂಬರದ ಆಚರಣೆಗೆ ಒಪ್ಪಲಿಲ್ಲ, ಆದರೆ ಆ ದಿನವಾದರೆ ನಾನು ಹೆಚ್ಚು ಸಂತೋಷವಾಗಿರುತ್ತೇನೆ ಎಂದು ಡಾ ರಾಧಾಕೃಷ್ಣನ್ ಹೇಳಿದರು. ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. 

ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ಎಂದು ಆಚರಿಸಿದರೂ ವಿಶ್ವ ಶಿಕ್ಷಕರ ದಿನ ಎಂದು ಪ್ರಪಂಚದ ಕೆಲವು ಭಾಗಗಳಲ್ಲಿ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ವದ ಹಾಗೂ ಶಾಶ್ವತ ಬದಲಾವಣೆ ತರುವ, ಶಿಕ್ಷಕರ ಶಿಕ್ಷಕರಿಗೆ ಗೌರವ ಸಲ್ಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಮನಗಂಡ ಯುನೆಸ್ಕೊ 1994ರಲ್ಲಿ ಅಕ್ಟೋಬರ್ 5 ಅನ್ನು ವಿಶ್ವ ಶಿಕ್ಷಕರ ದಿನ ಎಂದು ಘೋಷಿಸಿತು.

ಶಿಕ್ಷಕರ ದಿನದ ಇತಿಹಾಸ ಮಹತ್ವ

ಮೊದಲೇ ಹೇಳಿದಂತೆ ಶಿಕ್ಷಕರ ದಿನ ಎಂದರೆ ನಮಗೆ ವಿದ್ಯೆ, ಬುದ್ಧಿ ಕಲಿಸಿ ಬದುಕಿನ ಮಾರ್ಗ ತೋರಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನ. ಪ್ರತಿ ವಿದ್ಯಾರ್ಥಿಗಳ ಬಾಳಿನಲ್ಲೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಶಿಕ್ಷಕರ ಸ್ಥಾನಮಾನದ ಕುರಿತು 1966 ರಲ್ಲಿ ಶಿಫಾರಸು ಒಂದನ್ನು ಮುಂದಿರಿಸುತ್ತದೆ.

ಯುನೆಸ್ಕೊ ಶಿಫಾರಸು ಶಿಕ್ಷಣತಜ್ಞರ ಹಕ್ಕುಗಳು ಮತ್ತು ಕಟ್ಟುಪಾಡುಗಳಿಗೆ ಮಾನದಂಡಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಅವರ ಆರಂಭಿಕ ತರಬೇತಿ, ಮುಂದುವರಿದ ಶಿಕ್ಷಣ, ನೇಮಕಾತಿ ಮತ್ತು ಕೆಲಸದ ಪರಿಸ್ಥಿತಿಗಳ ಅವಶ್ಯಕತೆಗಳ ಮೇಲೆ ಇದು ಕನ್ನಡಿ ಹಿಡಿಯುತ್ತದೆ.

ಶಿಕ್ಷಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಮೂಲಭೂತ ತತ್ವಗಳನ್ನು ಸ್ಥಾಪಿಸುವುದು, ಅವರ ಆರಂಭಿಕ ಮತ್ತು ನಡೆಯುತ್ತಿರುವ ಶಿಕ್ಷಣದ ಮಾನದಂಡಗಳು, ಶಿಕ್ಷಕರನ್ನು ನೇಮಿಸಿಕೊಳ್ಳುವ ನೀತಿಗಳು, ಉದ್ಯೋಗ ಪರಿಸ್ಥಿತಿಗಳು ಮತ್ತು ಬೋಧನೆ ಮತ್ತು ಕಲಿಕೆಯ ಪರಿಸರದ ಗುಣಮಟ್ಟ ಹೇಗಿದೆ ಈ ಎಲ್ಲದರ ಮೇಲೆ ಯುನೆಸ್ಕೊ ಶಿಫಾರಸು ಬೆಳಕು ಚೆಲ್ಲುತ್ತದೆ.

ಭಾರತದಲ್ಲಿ ಶಿಕ್ಷಕರ ದಿನಾಚರಣೆ 

ಭಾರತದಲ್ಲಿ 1962ರಿಂದಲೇ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಶಾಲೆ, ಕಾಲೇಜುಗಳಲ್ಲಿ ಈ ದಿನ ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ಗೌರವಿಸುವ ಜೊತೆಗೆ ಶಿಕ್ಷಕರನ್ನ ಗೌರವಿಸಿ, ಸ್ಮರಿಸುವ ಕೆಲಸಗಳು ನಡೆಯುತ್ತವೆ. ಈ ದಿನ ಶಾಲಾ, ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ.