Search This Blog

Tuesday, December 31, 2024

PPF, NSC ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ' : ಕೇಂದ್ರ ಸರ್ಕಾರ

PPF, NSC ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ' : ಕೇಂದ್ರ ಸರ್ಕಾರ


ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿಗಳು 8.2% ಬಡ್ಡಿಯನ್ನ ಗಳಿಸುವುದನ್ನು ಮುಂದುವರಿಸುತ್ತವೆ.


ಮೂರು ವರ್ಷಗಳ ಅವಧಿಯ ಠೇವಣಿ ದರವು 7.1% ರಷ್ಟಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೊಂದಿರುವವರಿಗೆ 7.1% ಮತ್ತು ಪೋಸ್ಟ್ ಆಫೀಸ್ ಉಳಿತಾಯ ಠೇವಣಿ ಖಾತೆಗಳಿಗೆ 4% ಆದಾಯ ಸಿಗುತ್ತದೆ.


ಕಿಸಾನ್ ವಿಕಾಸ್ ಪತ್ರದ ಬಡ್ಡಿದರವು 7.5% ರಷ್ಟಿದ್ದು, ಹೂಡಿಕೆಗಳು 115 ತಿಂಗಳಲ್ಲಿ ಮುಕ್ತಾಯಗೊಳ್ಳುತ್ತವೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್ಸಿ) 7.7% ಮತ್ತು ಮಾಸಿಕ ಆದಾಯ ಯೋಜನೆ 7.4% ನಲ್ಲಿ ಮುಂದುವರಿಯುತ್ತದೆ.


ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಕಳೆದ ಮೂರು ತ್ರೈಮಾಸಿಕಗಳಲ್ಲಿ ಬದಲಾಗದೆ ಉಳಿದಿವೆ. ಹಿಂದಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸರ್ಕಾರವು ದರಗಳಿಗೆ ಇತ್ತೀಚಿನ ಹೊಂದಾಣಿಕೆಯನ್ನು ಮಾಡಿತು.


ಜನವರಿ-ಮಾರ್ಚ್ ತ್ರೈಮಾಸಿಕದ ಬಡ್ಡಿದರಗಳು ಈ ಕೆಳಗಿನಂತಿವೆ.!

ಉಳಿತಾಯ ಯೋಜನೆ ಬಡ್ಡಿ ದರ

ಪೋಸ್ಟ್ ಆಫೀಸ್ ಉಳಿತಾಯ ಖಾತೆ 4%

ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ 6.7%

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ 7.4%

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (1 ವರ್ಷ) 6.9%

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (2 ವರ್ಷಗಳು) 7%

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (3 ವರ್ಷಗಳು) 7.1%

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (5 ವರ್ಷಗಳು) 7.5%

ಕಿಸಾನ್ ವಿಕಾಸ್ ಪತ್ರ (ಕೆವಿಪಿ) 7.5%

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) 7.1%

ಸುಕನ್ಯಾ ಸಮೃದ್ಧಿ ಯೋಜನೆ 8.2%

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 7.7%

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್‌ಎಸ್) 8.2%


ಏಪ್ರಿಲ್ 2020 ರಲ್ಲಿ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ವಿವಿಧ ಸಾಧನಗಳ ಮೇಲಿನ 0.5% ರಿಂದ 1.4% ಕ್ಕೆ ಇಳಿಸಿತು, ಸಾರ್ವಜನಿಕ ಭವಿಷ್ಯ ನಿಧಿ (PPF) ಉಳಿತಾಯದ ಮೇಲಿನ ಆದಾಯವನ್ನು 7.9% ರಿಂದ 7.1% ಕ್ಕೆ ಇಳಿಸಿತು. ಅಂದಿನಿಂದ ಪಿಪಿಎಫ್ ದರವು ಬದಲಾಗಿಲ್ಲವಾದರೂ, ಕೇಂದ್ರವು ಅಕ್ಟೋಬರ್ 2022 ರಿಂದ ಇತರ ಸಣ್ಣ ಉಳಿತಾಯ ಸಾಧನಗಳ ಮೇಲಿನ ದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತು.

ಮರೆಯದ ಮಾಣಿಕ್ಯಗಳು

ಡಾ.ಮನಮೋಹನ್ ಸಿಂಗ್

ಭಾರತದ ಆರ್ಥಿಕ ಉದಾರೀಕರಣದ ಹರಿಕಾರನೆಂದೇ ಖ್ಯಾತರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಡಿಸೆಂಬರ್ 26ರಂದು ನಿಧನರಾದರು. 2004ರಿಂದ 2014ರವರೆಗೆ ಎರಡು ಬಾರಿ ಪ್ರಧಾನಿಯಾಗಿದ್ದ ಅರ್ಥಶಾಸ್ತ್ರಜ್ಞ ಸಿಂಗ್, ಹಲವು ಆರ್ಥಿಕ ಸುಧಾರಣೆಗಳಿಗೆ ಮುನ್ನುಡಿ ಬರೆದರು. ಆರ್​ಬಿಐ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ, ಕೇಂದ್ರ ಹಣಕಾಸು ಸಚಿವ ಮುಂತಾದ ಹುದ್ದೆಗಳನ್ನು ನಿರ್ವಹಿಸಿದರು. ಐದು ಸಂಪುಟಗಳಲ್ಲಿ ಪ್ರಕಟವಾದ 'ಚೇಂಜಿಂಗ್ ಇಂಡಿಯಾ', ಸಿಂಗ್​ರ ಮಹತ್ವದ ಕೃತಿ.

ಸೀತಾರಾಮ್ ಯೆಚೂರಿ

ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್​ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (72) ಅಲ್ಪಕಾಲದ ಅನಾರೋಗ್ಯದಿಂದ ಆಗಸ್ಟ್ 12ರಂದು ನವದೆಹಲಿಯಲ್ಲಿ ನಿಧನರಾದರು. ಪ್ರತಿಷ್ಠಿತ ಜೆಎನ್​ಯುು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಯೆಚೂರಿ, ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿ ಸಂಸದೀಯ ಪಟುವಾಗಿಯೂ ಛಾಪು ಮೂಡಿಸಿದ್ದರು.

ರಾಮೋಜಿ ರಾವ್

ಭಾರತದ ಮಾಧ್ಯಮ ಹಾಗೂ ಸಿನಿಮಾ ರಂಗದ ಖ್ಯಾತ ಉದ್ಯಮಿ, ರಾಮೋಜಿ ಗ್ರೂಪ್ ಅಧ್ಯಕ್ಷ ಚೇರುಕುರಿ ರಾಮೋಜಿ ರಾವ್ (87) ಜೂನ್ 8ರಂದು ಇಹಲೋಕ ತ್ಯಜಿಸಿದರು. ಜಗತ್ತಿನ ಅತ್ಯಂತ ದೊಡ್ಡ ಸಿನಿಮಾ ಚಿತ್ರೀಕರಣ ಸೌಕರ್ಯಗಳುಳ್ಳ ರಾಮೋಜಿ ಫಿಲ್ಮ ಸಿಟಿಯ ಮಾಲೀಕರಾಗಿದ್ದ ರಾವ್, ಹಲವು ಪತ್ರಿಕೆ ಹಾಗೂ ವಾಹಿನಿಗಳನ್ನು ನಡೆಸಿದ್ದರು. ಸಮಾಜಕ್ಕೆ ಇವರ ಕೊಡುಗೆಯನ್ನು ಪರಿಗಣಿಸಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಇವರ ಮಾಲೀಕತ್ವದ ಉಷಾಕಿರಣ್ ಮೂವೀಸ್ ಅನೇಕ ಸಿನಿಮಾಗಳನ್ನು ನಿರ್ವಿುಸಿದೆ.

ನಟವರ್ ಸಿಂಗ್

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ (93), ಆ.10ರಂದು ನಿಧನರಾದರು. ಜೀವನದ ಬಹುಭಾಗ ಕಾಂಗ್ರೆಸ್​ನಲ್ಲಿದ್ದರೂ 2006ರಲ್ಲಿ ಆ ಪಕ್ಷದಿಂದ ಅಮಾನತುಗೊಂಡರು. ಭಾರತೀಯ ವಿದೇಶಾಂಗ ಸೇವೆಗೆ (ಐಎಫ್​ಎಸ್) ಸೇರಿದವರಾದ ಸಿಂಗ್, ರಾಜತಾಂತ್ರಿಕರಾಗಿ ಅನುಭವ ಹೊಂದಿದ್ದರು. 'ಒನ್ ಲೈಫ್ ಈಸ್ ನಾಟ್ ಇನಫ್'- ಇದು ಸಿಂಗ್​ರ ಆತ್ಮಕಥನ ಕೃತಿಯಾಗಿದೆ.

ಡಾ.ಕಮಲಾ ಹಂಪನಾ

ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯಾಗಿದ್ದ ಡಾ. ಕಮಲಾ ಹಂಪನಾ (88) ಜೂನ್22ರಂದು ನಿಧನರಾದರು. ವಯೋಸಹಜ ಸಮಸ್ಯೆ ಎದುರಿಸುತ್ತಿದ್ದ ಇವರು ಹೃದಯಾಘಾತದಿಂದ ಕೊನೆಯುಸಿರೆಳೆದರು.

ಭಾರತೀಯ ಕೈಗಾರಿಕಾ ರಂಗದ 'ರತ್ನ' ಎಂದೇ ಖ್ಯಾತರಾಗಿದ್ದ ದಿಗ್ಗಜ ಹಾಗೂ ಪರೋಪಕಾರಿ, ಟಾಟಾ ಸಮೂಹ ಹಾಗೂ ಟಾಟಾ ಸನ್ಸ್​ನ ಅಧ್ಯಕ್ಷರಾಗಿದ್ದ ರತನ್ ನವಲ್ ಟಾಟಾ (86), ಅಕ್ಟೋಬರ್ 9ರಂದು ಮುಂಬೈಯಲ್ಲಿ ನಿಧನರಾದರು. ಭಾರತದ ಕೈಗಾರಿಕಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ರತನ್, ಒಬ್ಬ ಮಾದರಿ ಕೈಗಾರಿಕೋದ್ಯಮಿಯಾಗಿ ಸ್ಪೂರ್ತಿಯ ಚಿಲುಮೆಯಾಗಿದ್ದರು. ಪದ್ಮ ಭೂಷಣ, ಪದ್ಮ ವಿಭೂಷಣ ಸಹಿತ ಹಲವು ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ಜಾಕಿರ್ ಹುಸೇನ್

ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ (73) ತೀವ್ರ ಅನಾರೋಗ್ಯದಿಂದ ಡಿಸೆಂಬರ್ 5ರಂದು ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ನಿಧನರಾದರು. ತಾಳವಾದ್ಯಗಾರ, ಸಂಗೀತಗಾರ, ಸಂಗೀತ ನಿರ್ವಪಕ, ಸಿನಿಮಾ ನಟ- ಹೀಗೆ ಬಹುಮುಖ ಪ್ರತಿಭೆಯ ಹುಸೇನ್, ಮೂರೂ ಪದ್ಮ ಪ್ರಶಸ್ತಿಗಳಿಗೆ (ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ) ಭಾಜನರಾಗಿದ್ದರು. ಉತ್ತಮ ಜಾಗತಿಕ ಸಂಗೀತಕ್ಕಾಗಿ ಗ್ರಾಮಿ ಪುರಸ್ಕೃತರೂ ಆಗಿದ್ದರು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಹಿರಿಮೆಯ ಇವರು ಹಲವು ಸಂಗೀತ ಬ್ಯಾಂಡ್​ಗಳ ಭಾಗವಾಗಿದ್ದರು.

ರಾಜೀವ್ ತಾರಾನಾಥ್

ಬೆಂಗಳೂರಿನಲ್ಲಿ ಜನಿಸಿದ, ಭಾರತೀಯ ಶಾಸ್ತ್ರೀಯ ಸಂಗೀತಗಾರರಾದ ರಾಜೀವ್ ತಾರಾನಾಥ್ ಸರೋದ್ ವಾದನದಲ್ಲಿ ಛಾಪನ್ನು ಮೂಡಿಸಿದ್ದರು. ಅಲಿ ಅಕ್ಬರ್ ಖಾನ್​ರ ಶಿಷ್ಯರಾಗಿದ್ದ ರಾಜೀವ್ (91) ಜೂನ್ 11ರಂದು ಮೈಸೂರಿನಲ್ಲಿ ನಿಧನರಾದರು. ಬಾಲ್ಯದಿಂದಲೇ ಸಂಗೀತದಲ್ಲಿ ಒಲವಿದ್ದ ಇವರು, ಇಂಗ್ಲಿಷ್ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಸಂಗೀತವನ್ನೇ ಜೀವನದ ಉಸಿರಾಗಿಸಿಕೊಂಡವರು. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮೊದಲಾದ ಗೌರವಗಳಿಂದ ಪುರಸ್ಕೃತರಾಗಿದ್ದರು.

ಪ್ರಭಾ ಅತ್ರೆ

ಭಾರತೀಯ ಶಾಸ್ತ್ರೀಯ ಹಾಡುಗಾರ್ತಿ ಪ್ರಭಾ ಅತ್ರೆ (91), ಭಾರತ ಸರ್ಕಾರದ ಮೂರೂ ಪದ್ಮ ಪ್ರಶಸ್ತಿಗಳಿಂದ ಪುರಸ್ಕೃತರಾದ ಪ್ರಖ್ಯಾತ ಗಾಯಕಿ. ಉಸಿರಾಟದ ತೊಂದರೆಗೆ ಒಳಗಾದ ಅತ್ರೆ, ಜನವರಿ 13ರಂದು ಪುಣೆಯಲ್ಲಿ ನಿಧನರಾದರು. ಇವರು ಹಿಂದುಸ್ತಾನಿ ಸಂಗೀತಕ್ಕಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೂ ಪಾತ್ರರಾದರು. ಪ್ರಭಾ ಅತ್ರೆ, ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮರಾಠಿ ರಂಗಭೂಮಿಯ ಸಂಗೀತ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದರು.

ಶ್ಯಾಮ್ ಬೆನಗಲ್

ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕ, ಚಿತ್ರ ಸಾಹಿತಿ ಹಾಗೂ ಸಾಕ್ಷ್ಯಚಿತ್ರ ನಿರ್ವಪಕ ಶ್ಯಾಮ್ ಬೆನಗಲ್ (90), ಪರ್ಯಾಯ ಸಿನಿಮಾದ ಪ್ರವರ್ತಕ ಎಂಬ ಖ್ಯಾತಿ ಪಡೆದವರು. 18 ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ಒಂದು ಫಿಲ್ಮಫೇರ್ ಪ್ರಶಸ್ತಿ ಮತ್ತು ನಂದಿ ಪ್ರಶಸ್ತಿ ಪುರಸ್ಕೃತರಾದ ಬೆನಗಲ್, ಡಿಸೆಂಬರ್ 23ರಂದು ಮುಂಬೈಯಲ್ಲಿ ನಿಧನರಾದರು. ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಇವರ ಮುಡಿಗೇರಿತ್ತು. ಡಿ

ಅಪರ್ಣಾ ವಸ್ತಾರೆ

ನಟಿ ಹಾಗೂ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ (57) ಶ್ವಾಸಕೋಶದ ಕ್ಯಾನ್ಸರ್​ನಿಂದ ಜುಲೈ 11ರಂದು ನಿಧನರಾದರು. 'ಮಸಣದ ಹೂವು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ಇನ್ಸ್​ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ, ಕಿರುತೆರೆಯ ಕೆಲ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು.

ಮನೋಹರ್ ಜೋಷಿ

ಶಿವಸೇನೆಯ ಹಿರಿಯ ನಾಯಕರಾಗಿದ್ದ ಮನೋಹರ್ ಗಜಾನನ ಜೋಷಿ, 1995ರಿಂದ 1999ರ ವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 2002ರಿಂದ 2004ರ ವರೆಗೆ ಲೋಕಸಭೆಯ ಸ್ಪೀಕರ್ ಕೂಡ ಆಗಿದ್ದ ಜೋಷಿ (86), ಫೆಬ್ರವರಿ 23ರಂದು ಮುಂಬೈಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ದ್ವಾರಕೀಶ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ವಪಕ ದ್ವಾರಕೀಶ್ (81) ಏಪ್ರಿಲ್ 16ರಂದು ನಿಧನ ಹೊಂದಿದರು. ಚಿತ್ರ ನಿರ್ವಣ, ನಿರ್ದೇಶನದಲ್ಲೂ ಹೆಸರು ಮಾಡಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

ಸುಬ್ರಹ್ಮಣ್ಯ ಧಾರೇಶ್ವರ

ಬಡಗುತಿಟ್ಟು ಯಕ್ಷಗಾನ ಕಲಾವಿದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಯಕ್ಷಗಾನ ರಂಗ ಕಂಡ ಅತ್ಯಂತ ಪ್ರಯೋಗಶೀಲ ಭಾಗವತರಾಗಿದ್ದ ಇವರು ಅಪಾರ ಅಭಿಮಾನಿ ಬಳಗ ಹೊಂದಿದ್ದರು.

ಪಂಕಜ್ ಉದಾಸ್

ಸುವಿಖ್ಯಾತ ಗಝುಲ್ ಮತ್ತು ಹಿಂದಿ ಸಿನಿಮಾ ಹಾಗೂ ಪಾಪ್ ಗಾಯಕ ಪಂಕಜ್ ಉದಾಸ್ (72), ಫೆಬ್ರವರಿ 26ರಂದು ಇಹಲೋಕ ತ್ಯಜಿಸಿದರು. ಗಝುಲ್ ಹಾಡುಗಾರಿಕೆ ಕ್ಷೇತ್ರ ಹಾಗೂ ಕ್ಯಾನ್ಸರ್ ರೋಗಿಗಳು ಮತ್ತು ಥಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, 2006ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಶಶಿ ರೂಯ

ರೂಯ ಸೋದರರೆಂದೇ ಪ್ರಸಿದ್ಧರಾದ ಶಶಿ ರೂಯ ಮತ್ತು ರವಿ ರೂಯ ಪೈಕಿ ಶಶಿ ಹಿರಿಯರು. ಬಿಲಿಯಾಧಿಪತಿಗಳಾದ ಇವರು ಎಸ್ಸಾರ್ ಸಮೂಹದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಶಶಿ ರೂಯ 80ನೇ ವಯಸ್ಸಿನಲ್ಲಿ ನವೆಂಬರ್ 25ರಂದು ನಿಧನರಾದರು. ರೂಯ ಸೋದರರು ಜಗತ್ತಿನ ಅತಿ ಶ್ರೀಮಂತ ಭಾರತೀಯರು ಎಂದು 2012 ರಲ್ಲಿ ಫೋರ್ಬ್ಸ್ ಪತ್ರಿಕೆ ಪಟ್ಟಿ ಮಾಡಿತ್ತು.

ಸುಶೀಲ್ ಕುಮಾರ್ ಮೋದಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಶೀಲ್ ಕುಮಾರ್ ಮೋದಿ (72), ಬಿಹಾರದಿಂದ ರಾಜ್ಯಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಬಿಹಾರ ವಿತ್ತ ಸಚಿವ ಹಾಗೂ ಉಪ ಮುಖ್ಯಮಂತ್ರಿಯೂ ಆಗಿದ್ದ ಮೋದಿ, ಮೇ 13ರಂದು ನಿಧನರಾದರು.

ಎಸ್.ಎಂ.ಕೃಷ್ಣ

ಕರ್ನಾಟಕದ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ (92) ಅವರು ಮುಖ್ಯಮಂತ್ರಿ, ರಾಜ್ಯಪಾಲ, ವಿದೇಶಾಂಗ ಸಚಿವ ಸ್ಥಾನಗಳನ್ನು ಅಲಂಕರಿಸಿ ಆ ಹುದ್ದೆಗಳಿಗೆ ಘನತೆ ತಂದುಕೊಟ್ಟರು. ವಯೋಸಹಜ ಕಾಯಿಲೆಯಿಂದ ಅವರು ಡಿಸೆಂಬರ್ 10ರಂದು ನಿಧನರಾದರು.

ಅಗಲಿದ ಇತರ ಪ್ರಮುಖರು

ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್.

ರಾಜ್ಯದ ಮಾಜಿ ಸಚಿವರಾದ ಕೆ.ಎಚ್.ಶ್ರೀನಿವಾಸ್, ಮನೋಹರ್ ತಹಸೀಲ್ದಾರ್, ನಾಗಮ್ಮ ಕೇಶವಮೂರ್ತಿ.

ಮಾಜಿ ಶಾಸಕರಾದ ಎ.ಎಸ್.ಬಸವರಾಜ್, ವಸಂತ ಬಂಗೇರಾ, ಸೈಯದ್ ಶಾ ಖುಸ್ರೋ ಹುಸೇನ್.

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ.

ಚಲನಚಿತ್ರ ನಿರ್ದೇಶಕ ಗುರುಪ್ರಸಾದ್.

ರಾಜಕೀಯ, ವ್ಯಾಪಾರ, ಉದ್ಯಮ, ಸಂಸ್ಕೃತಿ, ಮನರಂಜನೆ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಅನೇಕ ಗಣ್ಯರು ಇಲ್ಲದಿರಬಹುದು. ಆದರೆ ಅವರು ಸಲ್ಲಿಸಿದ ಸೇವೆ ಸದಾ ಸರಣೀಯ.


ಡಾ. ಮನಮೋಹನ್ ಸಿಂಗ್:

ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ 1971ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರನ ಸ್ಥಾನದೊಂದಿಗೆ ಭಾರತ ಸರ್ಕಾರದಲ್ಲಿ ತಮ ಪ್ರಯಾಣವನ್ನು ಪ್ರಾರಂಭಿಸಿದರು. ಈ ವರ್ಷದ ಆರಂಭದಲ್ಲಿ ಸದನದಲ್ಲಿ 33 ವರ್ಷಗಳ ಸುದೀರ್ಘ ಸೇವೆಯ ನಂತರ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.


ಭಾರತದ ಮಾಜಿ ಪ್ರಧಾನಿ, ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ದೀರ್ಘಕಾಲದ ಉಸಿರಾಟ ಸಮಸ್ಯೆಯಿಂದ 2024ರ ಡಿ.26ರಂದು ದೆಹಲಿಯ ಏಮ್ಸೌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್‌್ಸ (ಯುಪಿಎ) ಅಡಿಯಲ್ಲಿ ಸಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಸತತ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.


ಅವರು 1991 ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿಯಾಗಿದ್ದರು. 2005ರಲ್ಲಿ ಮನಮೋಹನ್ ಸಿಂಗ್ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಜಾರಿಗೊಳಿಸಿದರು. ಇದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತ್ತು.


ನರಸಿಂಹ ರಾವ್ ನೇತೃತ್ವದ ಆಡಳಿತದಲ್ಲಿ ಹಣಕಾಸು ಸಚಿವರಾಗುವ ಮೊದಲು ಮನಮೋಹನ್ ಸಿಂಗ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು.1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ನ ಹಳ್ಳಿಯೊಂದರಲ್ಲಿ ಜನಿಸಿದ ಮನಮೋಹನ್ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು ನಂತರ ಆಕ್ಸ್ಫರ್ಡ್ ಡಿ.ಫಿಲ್. ಪಡೆಯುವ ಮೊದಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು


ರತನ್ ಟಾಟಾ:

ರಾಷ್ಟ್ರೀಯ ಐಕಾನ್ ಎಂದು ಕರೆಯಲ್ಪಡುವ ರತನ್ ಟಾಟಾ ಅವರು 20 ವರ್ಷಗಳಿಗೂ ಹೆಚ್ಚು ಕಾಲ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದರು. ಸರಳ ವ್ಯಕ್ತಿತ್ವದ ಖ್ಯಾತ ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ 2024ರ ಅ.09ರಂದು ಅನಾರೋಗ್ಯದಿಂದ ವಿಧಿವಶರಾದರು. ಟಾಟಾ ಗ್ರೂಪ್ ಹಾಗೂ ಟಾಟಾ ಸನ್‌್ಸನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅನೇಕ ಸಾಮಾಜಿಕ ಸೇವೆಗಳಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಸೇವೆಗಳನ್ನು ಗುರುತಿಸಿ 2000ನೇ ಇಸವಿಯಲ್ಲಿ ಭಾರತ ಸರ್ಕಾರ ಪದಭೂಷಣ ಹಾಗೂ 2008ರಲ್ಲಿ ಪದವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.


ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದ ನಂತರ, ರತನ್ ಟಾಟಾ ಭಾರತಕ್ಕೆ ಮರಳಿದರು. 1962ರಲ್ಲಿ ಅವರ ಮುತ್ತಜ್ಜ ಜಮ್ಷೆಡ್ಜಿ ಟಾಟಾ ಸ್ಥಾಪಿಸಿದ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು 1991ರಲ್ಲಿ ತಮ ಚಿಕ್ಕಪ್ಪ ಜೆಆರ್ಡಿ ಟಾಟಾ ಅವರಿಂದ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಬಳಿಕ ಟಾಟಾ ಗ್ರೂಪ್ ಅನ್ನು ಸಂಪೂರ್ಣ ಹೊಸ ಎತ್ತರಕ್ಕೆ ಕೊಂಡೊಯ್ದರು. ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನ್ಯಾನೋವನ್ನು ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಪದಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ರತನ್ ಟಾಟಾ ಅವರ ಕೊಡುಗೆ ಕೈಗಾರಿಕೋದ್ಯಮಿಯಾಗಿ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ಗಮನಾರ್ಹವಾದುದು.


ಎಸ್‌ಎಂ ಕೃಷ್ಣ:

ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ಮನ್ನಣೆ ದೊರಕಿಸಿಕೊಟ್ಟ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಡಿಸೆಂಬರ್ 10ರಂದು ನಿಧನರಾದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾಗಿದ್ದ ಎಸ್‌ಎಂ.ಕೃಷ್ಣ ಅವರು 6 ತಿಂಗಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರು. ಮೂಲತಃ ಮಂಡ್ಯ ಜಿಲ್ಲೆಯವರಾದ ಕೃಷ್ಣ 1932ರ ಮೇ.1ರಂದು ಜನಿಸಿದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಎಸ್‌ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.


ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್‌ಎಂ ಕೃಷ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಆದರೆ, ತಮ ರಾಜಕೀಯ ಜೀವನದ ಕೊನೆಯ ವರ್ಷಗಳನ್ನು ಬಿಜೆಪಿಯಲ್ಲಿ ಕಳೆದರು. 1932ರ ಮೇ 1ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಎಸ್‌ಎಂ ಕೃಷ್ಣ ಮೈಸೂರಿನ ಮಹಾರಾಜ ಕಾಲೇಜಿನಿಂದ ಪದವಿ ಪಡೆದರು. ಶಾಸಕರಾಗಿ, ಸಂಸದರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಎಸ್‌ಎಂ ಕೃಷ್ಣ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಬೆಳವಣಿಗೆಗೆ ನೀಡಿದ ಕೊಡುಗೆ ಗಣನೀಯವಾದುದು.


ಸೀತಾರಾಮ್ ಯೆಚೂರಿ:

ಹಿರಿಯ ರಾಜಕಾರಣಿ ಹಾಗೂ ಸಿಪಿಐ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ 2024ರ ಸೆ.12ರಂದು ನಿಧನರಾದರು. 1974ರಲ್ಲಿ ಸ್ಟೂಡೆಂಟ್‌್ಸ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರಿದಾಗ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಆ ಬಳಿಕ ರಾಜಕೀಯದ ಮೆಟ್ಟಿಲುಗಳನ್ನು ಅತ್ಯಂತ ಶೀಘ್ರವಾಗಿ ಏರಿದ್ದರು. ಮೂರು ಬಾರಿ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಸೀತಾರಾಮ್ ಯೆಚೂರಿ ಬಳಿಕ, ಎಸ್‌ಎಫ್‌ಐನ ಅಖಿಲ ಭಾರತ ಅಧ್ಯಕ್ಷರಾಗಿದ್ದರು. 1984ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು ಬಳಿಕ ಶಾಶ್ವತ ಆಹ್ವಾನಿತರೆನಿಸಿಕೊಂಡಿದ್ದರು. 1992ರ ಹೊತ್ತಿಗೆ, ಅವರು ಪಾಲಿಟ್ಬ್ಯೂರೋ ಸದಸ್ಯರಾಗಿದ್ದರು, ಅವರು ಮೂರು ದಶಕಗಳ ಕಾಲ ಈ ಸ್ಥಾನವನ್ನು ಹೊಂದಿದ್ದರು.


ರೋಹಿತ್ ಬಾಲ್:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಖ್ಯಾತ ವಸ್ತ್ರ ವಿನ್ಯಾಸಕ ರೋಹಿತ್ ಬಾಲ್ ನ.1ರ ತಡರಾತ್ರಿ ಅಸುನೀಗಿದರು. ಭಾರತದ ಮೊದಲ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರಾಗಿದ್ದ ರೋಹಿತ್ ಬಾಲ್, 1990ರ ದಶಕದಲ್ಲಿ ವಸ್ತ್ರವಿನ್ಯಾಸ ವೃತ್ತಿಯನ್ನು ಕೈಗೆಟುಕುವ ಹಾಗೂ ಗ್ಲಾಮರಸ್ ವೃತ್ತಿಯಾಗಿ ಜನಪ್ರಿಯಗೊಳಿಸಿದ್ದರು. ಭಾರತದ ಮೊದಲ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರಾಗಿದ್ದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಟ್ರೆಂಡ್ನೊಂದಿಗೆ ಸಂಯೋಜಿಸುವಲ್ಲಿ ಅವರು ಹೆಸರುವಾಸಿಯಾಗಿದ್ದರು.


ಜಾಕೀರ್ ಹುಸೇನ್:

ಜಾಕೀರ್ ಹುಸೇನ್ 1951ರ ಮಾರ್ಚ್ 9ರಂದು ಮುಂಬೈನಲ್ಲಿ ಜನಿಸಿದರು. ತನ್ನ ಕಲೆಯ ಪತಾಕೆಯನ್ನು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹಾರಿಸಿದ್ದರು. ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ಭಾರತವು ಪದವಿಭೂಷಣ, ಪದಭೂಷಣ ಮತ್ತು ಪದಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ಗೆ ಪಾತ್ರರಾಗಿದ್ದರು. ಜಾಕೀರ್ ಹುಸೇನ್ಗೆ 2009ರಲ್ಲಿ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1988ರಲ್ಲಿ ಪದಶ್ರೀ ಮತ್ತು 2002ರಲ್ಲಿ ಪದಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಬಲಾ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಇವರು 2024ರ ಡಿ.15ರಂದು ಇಹಲೋಕ ತ್ಯಜಿಸಿದರು.


ಶ್ಯಾಮ್ ಬೆನಗಲ್:

ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಅನಂತ್ನಾಗ್ ನಟನೆಯ ಅಂಕುರ್, ಗಿರೀಶ್ ಕಾರ್ನಾಡ್ ಅಭಿನಯದ ನಿಶಾಂತ್, ಸಿತಾ ಪಾಟೀಲ್ ನಟನೆಯ ಮಂಥನ್, ಭೂಮಿಕಾ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು.


18 ಬಾರಿ ಶ್ಯಾಮ್ ಬೆನಗಲ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಅವರಿಗೆ ಗೌರವಿಸಲಾಗಿತ್ತು. ಫಿಲ್ ಫೇರ್, ನಂದಿ ಅವಾರ್ಡ್ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದಶ್ರೀ, ಪದ ಭೂಷಣ ಪ್ರಶಸ್ತಿಗಳು ಸಹ ಶ್ಯಾಮ್ ಬೆನಗಲ್ ಅವರ ಮುಡಿಗೇರಿದ್ದವು. ರಿಯಲಿಸ್ಟಿಕ್ ಸಿನಿಮಾಗಳ ಮೂಲಕ ಶ್ಯಾಮ್ ಬೆಗನಲ್ ಅವರು ಹೆಸರುವಾಸಿ ಆಗಿದ್ದರು. ಡಿ.23ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ದ್ವಾರಕೀಶ್:

ಕರ್ನಾಟಕದ ಕುಳ್ಳ ಎಂದೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಏ.16ರಂದು ಇಹಲೋಕ ತ್ಯಜಿಸಿದರು. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವತ್‌್ಥ, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. 1964ರಲ್ಲಿ ವೀರಸಂಕಲ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.


ವರನಟ ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಚಿತ್ರರಂಗದಲ್ಲಿ ಅವರ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು.


ಅಪರ್ಣಾ:

ಅಪ್ಪಟ ಕನ್ನಡ ದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಗೆ ಮಾರು ಹೋಗ ದವರೇ ಇಲ್ಲ. ನನ್ನ ಗುರುತು ಕನ್ನಡ, ನನ್ನ ಅಸ್ತಿತ್ವ ಕನ್ನಡ ಎಂದು ಹೆಮೆಯಿಂದ ಹೇಳುತ್ತಿದ್ದ ಅಪರ್ಣಾ 2024ರ ಜುಲೈ 11ರಂದು ಶ್ವಾಸಕೋಶದ ಕ್ಯಾನ್ಸರ್ನಿಂದ ನಿಧನರಾದರು.


ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ಪೆಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.ನಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು.


ರಾಮೋಜಿರಾವ್:

ಆಂಧ್ರ ಪ್ರದೇಶದ ಗುಂಟೂರಿನ ಸಮೀಪದ ಪೆದಪರುಪುಡಿ ಗ್ರಾಮದಲ್ಲಿ 1936 ನವೆಂಬರ್ 16ರಂದು ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಸಾಧನೆ ಅಾಮಾನ್ಯ ವಾದದ್ದು. 2024 ಜೂನ್ 8ರಂದು ತಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ತಾವು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರಕ್ಕೂ ತಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಶಾಶ್ವತ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. 1962ರಲ್ಲಿ ಮಾರ್ಗದರ್ಶಿ ಚಿಟ್ಫಂಡ್, 1974ರಲ್ಲಿ ಈನಾಡು, 1980ರಲ್ಲಿ ಪ್ರಿಯಾ ಫುಡ್‌್ಸ, 1980ರಲ್ಲಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌್ಸ, 1983ರಲ್ಲಿ ಉಷಾಕಿರಣ್ ಮೂವೀಸ್, 1995ರಲ್ಲಿ ಈಟಿವಿ ವಾಹಿನಿಗಳು, 1996ರಲ್ಲಿ ರಾಮೋಜಿ ಫಿಲ್ ಸಿಟಿ, 2002ರಲ್ಲಿ ರಮಾದೇವಿ ಪಬ್ಲಿಕ್ ಸ್ಕೂಲ್ ಮತ್ತು 2019ರಲ್ಲಿ ಈಟಿವಿ ಭಾರತ್ ಸ್ಥಾಪಿಸಿದರು. ಇಂದಿಗೂ ಈ ಎಲ್ಲಾ ಸಂಸ್ಥೆಗಳು ಯಶಸ್ವಿಯಾಗಿ ನಡೆಯುತ್ತಿವೆ.

ಸಾಮಾನ್ಯ ಜ್ಞಾನ ಪ್ರಶ್ನೆಗಳು

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಭಾರತದ ಮೊದಲ ಸಂವಿಧಾನದ ವಸ್ತುಸಂಗ್ರಹಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?

ಉತ್ತರ: ಹರಿಯಾಣ

ಪ್ರಶ್ನೆ 2: ಪ್ರಸಿದ್ಧ ದುರ್ಗೇಶ್ ಅರಣ್ಯ ಝೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?

ಉತ್ತರ: ಹಿಮಾಚಲ ಪ್ರದೇಶ

ಪ್ರಶ್ನೆ 3: ಮೊದಲ ಬಾರಿಗೆ ಅಂತರಿಕ್ಷಾ ಅಭ್ಯಾಸ 2024ರ ಬಾಹ್ಯಾಕಾಶ ವ್ಯಾಯಾಮವನ್ನು ಯಾವ ನಗರ ಆಯೋಜಿಸಿದೆ?

ಉತ್ತರ: ನವದೆಹಲಿ

ಪ್ರಶ್ನೆ 4: 2024ರ G20 ಶೃಂಗಸಭೆಯನ್ನು ಯಾವ ದೇಶ ಆಯೋಜಿಸಿದೆ?

ಉತ್ತರ: ಬ್ರೆಜಿಲ್

ಪ್ರಶ್ನೆ 5: ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು?

ಉತ್ತರ: Botswana


ಪ್ರಶ್ನೆ 6: ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಸಂಸದ ಯಾರು?

ಉತ್ತರ: ತೆಜಸ್ವಿ ಸೂರ್ಯ

ಪ್ರಶ್ನೆ 7: ಟೈಫೂನ್ ಕಾಂಗ-ರೇ ಇತ್ತೀಚೆಗೆ ಯಾವ ಪ್ರದೇಶವನ್ನು ಅಪ್ಪಳಿಸಿದೆ?

ಉತ್ತರ: ತೈವಾನ್

ಪ್ರಶ್ನೆ 8: ದಸರಾ ಆಚರಣೆಯು ಅಸ್ತಿತ್ವಕ್ಕೆ ಬಂದಿದ್ದು ಯಾವ ರಾಜರ ಕಾಲದಲ್ಲಿ?

ಉತ್ತರ: ರಾಜ ಒಡೆಯರ್

ಪ್ರಶ್ನೆ 9: ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದ ಸ್ಥಳ ?

ಉತ್ತರ: ಲಂಡನ್ ನಗರ

ಪ್ರಶ್ನೆ 10: ಗಾಂಧಿ ಇರ್ವಿನ್ ಒಪ್ಪಂದ ಯಾರ ನಡುವೆ ನಡೆಯಿತು ?

ಉತ್ತರ: ಡಾ.ಬಿ.ಆರ್‌.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ





.

Monday, December 30, 2024

ಭಾರತದ ಬಾಹ್ಯ ಸಾಲದಲ್ಲಿ ಭಾರೀ ಏರಿಕೆ : ಹಣಕಾಸು ಸಚಿವಾಲಯದ ವರದಿ

ಭಾರತದ ಬಾಹ್ಯ ಸಾಲದಲ್ಲಿ ಭಾರೀ ಏರಿಕೆ : ಹಣಕಾಸು ಸಚಿವಾಲಯದ report

ಭಾರತದ ಬಾಹ್ಯ ಸಾಲವು ಈ ವರ್ಷದ ಸೆಪ್ಟೆಂಬರ್‌ನಲ್ಲಿ $ 711.8 ಶತಕೋಟಿಗೆ ಏರಿದೆ, ಇದು ಜೂನ್ 2024 ಕ್ಕಿಂತ 4.3 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದುಬಂದಿದೆ.


ಸೆಪ್ಟೆಂಬರ್ 2023 ರ ಅಂತ್ಯದ ವೇಳೆಗೆ, ಬಾಹ್ಯ ಸಾಲವು $ 637.1 ಬಿಲಿಯನ್ ಆಗಿತ್ತು.ಸೆಪ್ಟೆಂಬರ್ 2024 ರಲ್ಲಿ, ಭಾರತದ ಬಾಹ್ಯ ಸಾಲವನ್ನು $ 711.8 ಶತಕೋಟಿಯಲ್ಲಿ ಇರಿಸಲಾಯಿತು, ಜೂನ್ ಅಂತ್ಯದ 2024 ರ ಮಟ್ಟಕ್ಕಿಂತ $ 29.6 ಶತಕೋಟಿ ಹೆಚ್ಚಳವನ್ನು ದಾಖಲಿಸಿದೆ ಎಂದು ಭಾರತದ ತ್ರೈಮಾಸಿಕ ಬಾಹ್ಯ ಸಾಲ ವರದಿ ತಿಳಿಸಿದೆ.


GDP ಅನುಪಾತಕ್ಕೆ ಬಾಹ್ಯ ಸಾಲವು ಸೆಪ್ಟೆಂಬರ್ 2024 ರಲ್ಲಿ 19.4 ಪ್ರತಿಶತದಷ್ಟಿತ್ತು, ಜೂನ್ 2024 ರ ವೇಳೆಗೆ 18.8 ಪ್ರತಿಶತದಷ್ಟಿದೆ ಎಂದು ಅದು ಸೇರಿಸಿದೆ. 2024 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ US ಡಾಲರ್ ಮೌಲ್ಯದ ಸಾಲವು 53.4 ಶೇಕಡಾ ಪಾಲನ್ನು ಹೊಂದಿರುವ ಭಾರತದ ಬಾಹ್ಯ ಸಾಲದ ಅತಿದೊಡ್ಡ ಅಂಶವಾಗಿ ಉಳಿದಿದೆ, ನಂತರ ಭಾರತೀಯ ರೂಪಾಯಿ (31.2 ಶೇಕಡಾ), ಜಪಾನೀಸ್ ಯೆನ್ (6.6 ಶೇಕಡಾ), SDR (5.0 ಪ್ರತಿ ಶೇಕಡಾ) ಮತ್ತು ಯುರೋ (3.0 ಶೇಕಡಾ)," ಎಂದು ಅದು ಹೇಳಿದೆ.


ಸಾಮಾನ್ಯ ಸರ್ಕಾರ ಮತ್ತು ಸರ್ಕಾರೇತರ ವಲಯದ ಬಾಕಿ ಉಳಿದಿರುವ ಬಾಹ್ಯ ಸಾಲವು 2024 ರ ಸೆಪ್ಟೆಂಬರ್-ಅಂತ್ಯಕ್ಕೆ ಜೂನ್ 2024 ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಅದು ಗಮನಿಸಿದೆ.


ಸಾಲಗಳು ಬಾಹ್ಯ ಸಾಲದ ಅತಿದೊಡ್ಡ ಅಂಶವಾಗಿದ್ದು, 33.7 ಶೇಕಡಾ ಪಾಲನ್ನು ಹೊಂದಿದ್ದು, ನಂತರ ಕರೆನ್ಸಿ ಮತ್ತು ಠೇವಣಿಗಳು (23.1 ಶೇಕಡಾ), ವ್ಯಾಪಾರ ಕ್ರೆಡಿಟ್ ಮತ್ತು ಮುಂಗಡಗಳು (18.3 ಶೇಕಡಾ) ಮತ್ತು ಸಾಲ ಭದ್ರತೆಗಳು (17.2 ಶೇಕಡಾ) .


ಜೂನ್ 2024 ರಲ್ಲಿ 6.6 ಪ್ರತಿಶತಕ್ಕೆ ಹೋಲಿಸಿದರೆ 2024 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾಲ ಸೇವೆ (ಪ್ರಧಾನ ಮರುಪಾವತಿಗಳು ಮತ್ತು ಬಡ್ಡಿ ಪಾವತಿಗಳು) ಪ್ರಸ್ತುತ ರಸೀದಿಗಳ ಶೇಕಡಾ 6.7 ರಷ್ಟಿದೆ ಎಂದು ಅದು ಸೇರಿಸಿದೆ.

dr vishnuvardhan cinema

 
ಸಾಹಸ ಸಿಂಹ
ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ, ಸಿನಿಮಾ ಪೂರ್ತಿಯಾಗಿ ಪೊಲೀಸ್ ಆಫೀಸರ್ ಆಗಿರುವಂತಹ ಪ್ರತಾಪ್ ಆಕ್ಷನ್ ಕಾಣಬಹುದು. ಒಂದು ಕೊಲೆ ಕೇಸ್ ಬಿಡಿಸುತ್ತಾ ಹೋಗಿ, ಕೊನೆಗೆ ಕುತೂಹಲಕಾರಿ ಘಟ್ಟ ತಲುಪುವಂತಹ ಕಥೆ ಈ ಸಿನಿಮಾದ್ದಾಗಿದೆ.
 
ಮುತ್ತಿನಹಾರ
ದೇಶ ಭಕ್ತಿಯನ್ನು ಸಾರುವಂತಹ ಅದ್ಭುತವಾದ ಕಥಾ ಹಂದರವನ್ನು ಹೊಂದಿರುವ ಚಿತ್ರ. ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ (Vishnuvardhan) ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ. ಯುದ್ಧಭೂಮಿಯಲ್ಲಿ ನಡೆಯುವ ಹೋರಾಟ, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.

 
ಸೂರ್ಯವಂಶ
ಈ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಬಂದಿದ್ದರೂ, ಕನ್ನಡದಲ್ಲೂ ಸೂಪರ್ ಹಿಟ್ ಆಗಿದ್ದಂತಹ ಸಿನಿಮಾ ಇದು. ವಿದ್ಯಾಭ್ಯಾಸವೇ ಇಲ್ಲದ ವ್ಯಕ್ತಿ, ತಂದೆಯನ್ನೇ ದೇವರೆಂದು ಪೂಜಿಸುವ ವ್ಯಕ್ತಿ, ನಂತರ ಶ್ರಮಪಟ್ಟು, ತನ್ನ ಹೆಂಡತಿಯನ್ನು ಡಿಸಿ ಮಾಡಿ, ತಾನು ಬಸ್ ಮಾಲೀಕನಾಗಿ, ಆಸ್ಪತ್ರೆಯನ್ನು ಕಟ್ಟಿಸಿ, ಕೊನೆಗೆ ತಂದೆಯ ಪ್ರೀತಿಯನ್ನು ಪಡೆಯುವ ಅದ್ಭುತವಾದ ಕಥೆ ಇದಾಗಿದೆ.
 
ಭೂತಯ್ಯನ ಮಗ ಅಯ್ಯು
ವಿಷ್ಣುವರ್ಧನ್, ಲೋಕೇಶ್ (Lokesh) ಹಾಗೂ ಎಂಪಿ ಶಂಕರ್ ಅಭಿನಯದ ಉತ್ತಮ ಚಿತ್ರ. ಅಯ್ಯುವಾಗಿ ಲೋಕೇಶ್ ಮತ್ತು ಗುಲ್ಲನಾಗಿ ವಿಷ್ಣುವರ್ಧನ್ ಅಭಿನಯ ಮನೋಜ್ಞವಾಗಿದೆ. ಶತ್ರುಗಳು ಹೇಗೆ ಸ್ನೇಹಿತರಾಗ್ತಾರೆ ಅನ್ನೋದು ಸಿನಿಮಾ ಕಥೆ.
 
ಗಂಧದ ಗುಡಿ
ವಿಷ್ಣುವರ್ಧನ್ ಹಾಗೂ ರಾಜ್ ಕುಮಾರ್ (Dr Rajkumar) ನಟಿಸಿದ ಸಿನಿಮಾ ಇದು. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ನೀವು ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ ಇದು.

 
ಬಂಧನ
ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಸುಂದರವಾದ ಆದರೆ ಟ್ರಾಜಿಕ್ ಲವ್ ಸ್ಟೋರಿ ಇರುವಂತಹ ಸಿನಿಮಾ. ವಿಷ್ಣುವರ್ಧನ್ ವೈದ್ಯರಾಗಿ ನಟಿಸಿದ್ದು, ಕೊನೆಗೆ ಸಾವನ್ನಪ್ಪುತ್ತಿರುವ ಕಥೆ ತುಂಬಾನೆ ಅದ್ಭುತವಾಗಿದೆ.
 
ಆಪ್ತಮಿತ್ರ
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡಿದಂತಹ ಹಾರರ್ ಥ್ರಿಲ್ಲರ್ (Horror Thriller)ಸಿನಿಮಾ ಇದು. ವಿಷ್ಣುವರ್ಧ ಅಮೋಘ ಅಭಿನಯ. ಸೌಂದರ್ಯ ನಟನೆ. ವಾವ್ ಅದ್ಭುತವಾದ ಚಿತ್ರ. ಈ ಚಿತ್ರವನ್ನು ನೀವು ಮಿಸ್ ಮಾಡಿದೇ ನೋಡ್ಲೇಬೇಕು.
 
ಆಪ್ತರಕ್ಷಕ
ವಿಷ್ಣುವರ್ಧನ್ ಕೊನೆಯ ಸಿನಿಮಾ ಇದು. ಆಪ್ತಮಿತ್ರ ಸಿನಿಮಾದ ಮುಂದುವರೆದ ಭಾಗ. ಆಪ್ತಮಿತ್ರ ಸಿನಿಮಾದ ಒಂದೆಳೆಯನ್ನು ಹಿಡಿದುಕೊಂಡು ತಯಾರಾದಂತಹ ಹಾರರ್ ಥ್ರಿಲ್ಲರ್ ಕಥೆ ಇದು. ಕುತೂಹಲ ಮೂಡಿಸುವ ಈ ಸಿನಿಮಾ, ಮುಂದೇನಾಗುತ್ತೆ ಎಂದು ನಿಮ್ಮನ್ನು ಕಾಯುವಂತೆ ಮಾಡುತ್ತೆ.

 
ಕರ್ಣ
ಫುಟ್ ಬಾಲ್ ಆಟಗಾರನಾಗಿ ಗುರುತಿಸಿಕೊಳ್ಳಲು ಹೊರಟ ಕರ್ಣ, ಕೊನೆಗೆ ಮನೆಯ ಕಷ್ಟಕ್ಕೆ ಬೆನ್ನೆಲುಬಾಗಲು ಕಿಡ್ನಿಯನ್ನೇ ಕೊಡುವಂತಹ ಕಥೆ ಇದಾಗಿದ್ದು. ದಾನಶೂರ ಕರ್ಣನಂತೆ ವಿಷ್ಣುವರ್ಧನ್ ಕಾಣಿಸುತ್ತಾರೆ.
 
ನಾಗರಹಾವು
ಪುಟ್ಟಣ್ಣ ಕಣಗಾಲ್ (Puttanna Kanagal)ಅವರ ಈ ಸಿನಿಮಾ ಇವತ್ತಿಗೂ ಜನಪ್ರಿಯವಾಗಿರೋದಕ್ಕೆ ಕಾರಣ ರಾಮಾಚಾರಿಯಾಗಿ ವಿಷ್ಣುವರ್ಧನ್ ಅಭಿನಯ. ಆ ದ್ವೇಷ, ರೋಷ, ಚಾಮಯ್ಯ ಮೇಷ್ಟ್ರು ಜೊತೆಗಿನ ಸಂಬಂಧ, ಅಲಮೇಲು ಜೊತೆಗಿನ ಪ್ರೀತಿ, ಮಾರ್ಗರೇಟ್ ಪ್ರೇಮ. 1972 ರಲ್ಲಿ ಹೊಸತನದ ಕಿಚ್ಚು ಹಚ್ಚಿದ ಸಿನಿಮಾ ಇದು.

ಚಲನಚಿತ್ರಗಳು ಮತ್ತು ಮನರಂಜನೆ

central government holiday list

ಗೆಜೆಟೆಡ್ ರಜಾದಿನಗಳು ಮೂಲಭೂತವಾಗಿ ಸಾರ್ವಜನಿಕ ರಜಾದಿನಗಳಾಗಿವೆ. ಆದಾಗ್ಯೂ, ನಿರ್ಬಂಧಿತ ರಜೆ ನಿಯಮಗಳೊಂದಿಗೆ ಬರುತ್ತದೆ. ಸಂಸ್ಥೆ ಮತ್ತು ರಾಜ್ಯದಿಂದ ಅವು ಬದಲಾಗುತ್ತವೆ ಎಂಬುದನ್ನು ಸಹ ಗಮನಿಸಿ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು 17 ಗೆಜೆಟೆಡ್ ಮತ್ತು 34 ಐಚ್ಛಿಕ ರಜಾದಿನಗಳನ್ನು ಘೋಷಿಸುವ ಸುತ್ತೋಲೆಯನ್ನು ಪ್ರಕಟಿಸಿದೆ. ಈ ರಜಾದಿನಗಳು ದೇಶದ ಎಲ್ಲಾ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಉದ್ಯೋಗಿಗಳಿಗೆ ಅನ್ವಯಿಸುತ್ತವೆ. ಈ ಪಟ್ಟಿಯ ಪ್ರಕಾರ.. ಮುಂದಿನ ವರ್ಷ 2025 ರಲ್ಲಿ ಯಾವ ತಿಂಗಳಲ್ಲಿ ಎಷ್ಟು ದಿನ ರಜೆಗಳಿವೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

ಕೇಂದ್ರ ಸರ್ಕಾರದ `ಸಾರ್ವತ್ರಿಕ ರಜೆ' ದಿನಗಳ ಪಟ್ಟಿ ಇಲ್ಲಿದೆ

☛ ಜನವರಿ 26 (ಭಾನುವಾರ)- ಗಣರಾಜ್ಯೋತ್ಸವ

☛ ಫೆಬ್ರವರಿ 26 (ಬುಧವಾರ) - ಮಹಾಶಿವರಾತ್ರಿ

☛ ಮಾರ್ಚ್ 14 (ಶುಕ್ರವಾರ) ಹೋಳಿ

☛ ಮಾರ್ಚ್ 31 (ಸೋಮವಾರ) - ಈದ್-ಉಲ್-ಫಿತರ್

☛ ಏಪ್ರಿಲ್ 10 (ಗುರುವಾರ) - ಮಹಾವೀರ ಜಯಂತಿ

☛ ಏಪ್ರಿಲ್ 18 (ಶುಕ್ರವಾರ) - ಶುಭ ಶುಕ್ರವಾರ

☛ ಮೇ 12 (ಸೋಮವಾರ) - ಬುದ್ಧ ಪೂರ್ಣಿಮಾ

☛ ಜೂನ್ 7 (ಶನಿವಾರ) - ಬಕ್ರೀದ್

☛ ಜುಲೈ 6 (ಭಾನುವಾರ)- ಮೊಹರಂ

☛ ಆಗಸ್ಟ್ 15 (ಶುಕ್ರವಾರ)- ಸ್ವಾತಂತ್ರ್ಯ ದಿನ

☛ ಆಗಸ್ಟ್ 16 (ಶನಿವಾರ) - ಜನ್ಮಾಷ್ಟಮಿ

☛ ಸೆಪ್ಟೆಂಬರ್ 5 (ಗುರುವಾರ) -ಮಿಲಾದ್-ಎನ್-ನಬಿ

☛ ಅಕ್ಟೋಬರ್ 2 (ಗುರುವಾರ) - ದಸರಾ

☛ ಅಕ್ಟೋಬರ್ 20 (ಸೋಮವಾರ) ದೀಪಾವಳಿ

☛ ನವೆಂಬರ್ 5 (ಬುಧವಾರ) - ಗುರುನಾನಕ್ ಜಯಂತಿ

☛ ಡಿಸೆಂಬರ್ 25 (ಗುರುವಾರ) - ಕ್ರಿಸ್ಮಸ್

2025 ಐಚ್ಛಿಕ ರಜಾದಿನಗಳು

☛ ಜನವರಿ 1 (ಬುಧವಾರ) - ಹೊಸ ವರ್ಷ

☛ ಜನವರಿ 16 (ಸೋಮವಾರ) ಗುರು ಗೋಬಿಂದ್ ಸಿಂಗ್ ಜಯಂತಿ

☛ ಜನವರಿ 14 (ಮಂಗಳವಾರ) - ಮಕರ ಸಂಕ್ರಾಂತಿ, ಪೊಂಗಲ್

☛ ಫೆಬ್ರವರಿ 2 (ಭಾನುವಾರ) - ಬಸಂತ ಪಂಚಮಿ

☛ ಫೆಬ್ರವರಿ 12 (ಬುಧವಾರ) - ಗುರು ರವಿದಾಸ್ ಜಯಂತಿ

☛ ಫೆಬ್ರವರಿ 19 (ಬುಧವಾರ) - ಶಿವಾಜಿ ಜಯಂತಿ

☛ ಫೆಬ್ರವರಿ 23 (ಭಾನುವಾರ) - ಸ್ವಾಮಿ ದಯಾನಂದ ಸ್ವಾಮಿ ಜಯಂತಿ

☛ ಮಾರ್ಚ್ 13 (ಗುರುವಾರ) - ಹೋಲಿಕಾ ದಹನ್

☛ ಮಾರ್ಚ್ 14 (ಶುಕ್ರವಾರ) - ಡೋಲಿಯಾತ್ರಾ

☛ ಏಪ್ರಿಲ್ 16 (ಭಾನುವಾರ) - ರಾಮ ನವಮಿ

☛ ಆಗಸ್ಟ್ 15 (ಶುಕ್ರವಾರ) - ಜನ್ಮಾಷ್ಟಮಿ

☛ ಆಗಸ್ಟ್ 27 (ಬುಧವಾರ) - ಗಣೇಶ ಚತುರ್ಥಿ (ವಿನಾಯಕ ಚವಿತಿ)

☛ ಸೆಪ್ಟೆಂಬರ್ 5 (ಶುಕ್ರವಾರ) ಓಣಂ (ತಿರುವೋಣಂ)

☛ ಸೆಪ್ಟೆಂಬರ್ 29 (ಸೋಮವಾರ) - ದಸರಾ (ಸಪ್ತಮಿ)

☛ ಸೆಪ್ಟೆಂಬರ್ 30 (ಮಂಗಳವಾರ) - ದಸರಾ (ಮಹಾಷ್ಟಮಿ)

☛ ಅಕ್ಟೋಬರ್ 1 (ಬುಧವಾರ) - ದಸರಾ (ಮಹಾನವಮಿ)

☛ ಅಕ್ಟೋಬರ್ 7 (ಮಂಗಳವಾರ) - ಮಹರ್ಷಿ ವಾಲ್ಮೀಕಿ ಜಯಂತಿ

☛ ಅಕ್ಟೋಬರ್ 10 (ಶುಕ್ರವಾರ) - ಕರಕ ಚತುರ್ಥಿ (ರಾರ್ವಾ ಚೌತ್)

☛ ಅಕ್ಟೋಬರ್ 20 (ಸೋಮವಾರ) - ನರಕ ಚತುರ್ಥಿ

☛ ಅಕ್ಟೋಬರ್ 22 (ಬುಧವಾರ) - ಗೋವರ್ಧನ ಪೂಜೆ

☛ ಅಕ್ಟೋಬರ್ 23 (ಗುರುವಾರ) ಭಾಯಿ ದೂಜ್

☛ ಅಕ್ಟೋಬರ್ 28 (ಮಂಗಳವಾರ) - ಪ್ರತಿಹಾರ ಷಷ್ಠಿ ಅಥವಾ ಸೂರ್ಯ ಷಷ್ಠಿ

☛ ನವೆಂಬರ್ 24 (ಸೋಮವಾರ) - ಗುರು ಬಹದ್ದೂರ್ ಶಹೀದ್ ದಿನವನ್ನು ತೆಗೆದುಕೊಳ್ಳಿ

☛ ಡಿಸೆಂಬರ್ 24 (ಬುಧವಾರ) - ಕ್ರಿಸ್ಮಸ್

general knowledge quiz

ಪ್ರಶ್ನೆ 1: ಭಾರತದ ರಾಷ್ಟ್ರೀಯ ಲಾಂಛನ ಯಾವುದು?

ಉತ್ತರ: ಅಶೋಕ ಚಕ್ರ

ಪ್ರಶ್ನೆ 2: ಭಾರತದ ರಾಷ್ಟ್ರೀಯ ಲಾಂಛನವನ್ನು ವಿನ್ಯಾಸಗೊಳಿಸಿದವರು ಯಾರು?

ಉತ್ತರ: ದೀನಾನಾಥ್ ಭಾರ್ಗವ

ಪ್ರಶ್ನೆ 3: ಭಾರತದ ಮೊದಲ ಮಹಿಳಾ ಕ್ಯಾಬಿನೆಟ್ ಮಂತ್ರಿ ಯಾರು?

ಉತ್ತರ: ರಾಜಕುಮಾರಿ ಅಮೃತ್ ಕೌರ್

ಪ್ರಶ್ನೆ 4: ಭಾರತದ ಮೊದಲ ಮಹಿಳಾ ಗವರ್ನರ್ ಯಾರು?

ಉತ್ತರ: ಸರೋಜಿನಿ ನಾಯ್ಡು

ಪ್ರಶ್ನೆ 5: ಭಾರತದ ಮೊದಲ ಮಹಿಳಾ ಆಡಳಿತಗಾರ್ತಿ ಯಾರು?

ಉತ್ತರ: ರಜಿಯಾ ಸುಲ್ತಾನ

ಪ್ರಶ್ನೆ 6: ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು?

ಉತ್ತರ: ಇಂದಿರಾ ಗಾಂಧಿ

ಪ್ರಶ್ನೆ 7: ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಸಮುದ್ರಗುಪ್ತ

ಪ್ರಶ್ನೆ 8: ಭಾರತದ 29ನೇ ರಾಜ್ಯ ಯಾವುದು?

ಉತ್ತರ: ತೆಲಂಗಾಣ

ಪ್ರಶ್ನೆ 9: ಭಾರತದ ಪರಮಾಣು ರಿಯಾಕ್ಟರ್‌ನ ಧ್ರುವ ಎಲ್ಲಿದೆ?

ಉತ್ತರ: ಟ್ರಾಂಬೆ, ಮುಂಬೈ

ಪ್ರಶ್ನೆ 10: ಭಾರತದ ಮೊದಲ ಗಗನಯಾತ್ರಿ ಯಾರು?

ಉತ್ತರ: ರಾಕೇಶ್ ಶರ್ಮಾ

ಉದ್ಯೋಗ ಮಾಹಿತಿ

2024ರ ಪ್ರಮುಖ ಘಟನೆಗಳು ಪ್ರಶಸ್ತಿ ಮತ್ತು ದಿನಾಚರಣೆಗಳು
















 

ಸೂಪಾ ಅಣೆಕಟ್ಟು ಕಾಳಿ ನದಿಯ ಮೇಲಿದೆ

Q - ಸೂಪಾ ಅಣೆಕಟ್ಟು ಯಾವ ನದಿಯ ಮೇಲಿದೆ ??

A - ಕಾಳಿ ✅

B - ಕಾವೇರಿ

C - ತುಂಗಭದ್ರಾ

D - ಕೃಷ್ಣ


 *ಸರಿಯಾದ ಉತ್ತರ : A - ಕಾಳಿ* 

⮕ ಕಾಳಿ : ಈ ನದಿಯು ಉತ್ತರ ಕನ್ನಡ ಜಿಲ್ಲೆಯ ಕುಶಾವಲಿ ಎಂಬ ಪುಟ್ಟ ಹಳ್ಳಿಯ ಬಳಿ ಹುಟ್ಟುತ್ತದೆ.

-------------------------------------------------------        

⮕ ಕಾವೇರಿ ನದಿಗಿರುವ ಅಣೆಕಟ್ಟುಗಳು : ಮೆಟ್ಟೂರು ಅಣೆಕಟ್ಟು (TN), ಕೃಷ್ಣ ರಾಜ ಸಾಗರ (ಮಂಡ್ಯ).

⮕ ಶರಾವತಿ ನದಿಗಿರುವ ಡ್ಯಾಮ್ ಗಳು : ಲಿಂಗನಮಕ್ಕಿ ಜಲಾಶಯ (ಸಾಗರ, ಶಿವಮೊಗ್ಗ)

⮕ ಕೃಷ್ಣಾ ನದಿಗಿರುವ ಪ್ರಮುಖ ಅಣೆಕಟ್ಟುಗಳು : ನಾಗಾರ್ಜುನ ಸಾಗರ ಡ್ಯಾಮ್ (AP), ಬಸವಸಾಗರ (ನಾರಾಯಣಪುರ) ಡ್ಯಾಮ್ (ಯಾದಗಿರಿ), ಪಂಪಸಾಗರ ಡ್ಯಾಮ್ (ವಿಜಯನಗರ), ಲಾಲ್ ಬಹದ್ದೂರ್ ಶಾಸ್ತ್ರಿ/ ಆಲಮಟ್ಟಿ ಡ್ಯಾಮ್ (ವಿಜಯಪುರ).

⮕ ಮಲಪ್ರಭಾ ನದಿಗಿರುವ ಅಣೆಕಟ್ಟುಗಳು : ರೇಣುಕಾ ಸಾಗರ, ನವಿಲುತೀರ್ಥ ಜಲಾಶಯ.

⮕ ಘಟಪ್ರಭಾ ನದಿಗಿರುವ ಅಣೆಕಟ್ಟು : ಹಿಡಕಲ್ ಅಣೆಕಟ್ಟು.

⮕ ಭೀಮಾ ನದಿಗಿರುವ ಅಣೆಕಟ್ಟು : ಉಜ್ಜನಿ ಅಣೆಕಟ್ಟು (ಸೋಲಾಪುರ).

⮕ ಕರ್ನಾಟಕದ ಅತಿ ದೊಡ್ಡ ಡ್ಯಾಮ್ಪಂಪಸಾಗರ ಡ್ಯಾಮ್ (ತುಂಗಭದ್ರ ನದಿ).

Sunday, December 29, 2024

ಪ್ರಯತ್ನಿಸಿ

ಸೋಮಲಿಂಗ್ ಉಪ್ಪಾರ್  ಅವರು ಎಲ್ಲಾ ಮೀಡಿಯಾಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಅವರೆಲ್ಲ ಲಿಂಕ್ ಗಳಿಗಾಗಿ ಕೆಳಗಿನವುಗಳನ್ನು ಸಂಪರ್ಕಿಸಬಹುದು

https://t.me/kestkannada

2 K set examination📲
Kset full information
https://t.me/kestkannada

https://t.me/somalingmuppar

4  https://t.me/bcwdkalaburagi

5 ಗ್ರಾಮ ಪಂಚಾಯತಿ ಕವಲಗಾ
Kawalga in Aland taluk kalaburagi district
https://t.me/Grampanchayatkawalga

6 ಸೋಮು ಮಾಹಿತಿ ವೇದಿಕೆ
ಕನ್ನಡದಲ್ಲಿ
https://t.me/somalingmuppa

7. https://kawalgasomu.blogspot.com/?m=1

https://somalingmuppar76.blogspot.com/?m=1&zx=8ea9acdcb00f4100

http://somalingmuppark76.blogspot.com/?m=1


10 https://bcwdhostel.blogspot.com/?m=1

11 http://upparcommunitykar.blogspot.com/

12 https://youtube.com/channel/UCPJZtsdMQ_Zx9a9kqNx3nnQ

13 https://youtube.com/c/somalinguppar9008032272

ವಿಶ್ವಮಾನವ ರಾಷ್ಟ್ರಕವಿ ಕುವೆಂಪು

*ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ* 💛❤️

• ಜನನ : 29 ಡಿಸೆಂಬರ್ 1904 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ

• ಮರಣ : ನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ

• ಅಂತ್ಯ ಸಂಸ್ಕಾರ ಸ್ಥಳ : ಕುಪ್ಪಳಿ, ಶಿವಮೊಗ್ಗ ಜಿಲ್ಲೆ

• ಕಾವ್ಯನಾಮ : ಕುವೆಂಪು

• ವೃತ್ತಿ : ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ

• ರಾಷ್ಟ್ರೀಯತೆ : ಭಾರತೀಯ

• ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ : 
ಮೈಸೂರು ವಿಶ್ವವಿದ್ಯಾನಿಲಯ

• ಕಾಲ : 20ನೆಯ ಶತಮಾನ

• ಪ್ರಕಾರ/ಶೈಲಿ : ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ


• ಪ್ರಮುಖ ಪ್ರಶಸ್ತಿ(ಗಳು) : ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ.

• ಬಾಳ ಸಂಗಾತಿ : ಹೇಮಾವತಿ

• ಮಕ್ಕಳು : ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ


*ಕೃತಿಗಳು* 📕

 *ಮಹಾಕಾವ್ಯ* ✍️ 

1 - ಶ್ರೀ ರಾಮಾಯಣ ದರ್ಶನಂ (1949)

 *ಖಂಡಕಾವ್ಯಗಳು* ✍️

1 - ಚಿತ್ರಾಂಗದಾ (1936)

 *ಕವನ ಸಂಕಲನಗಳು* ✍️ 

1 - ಕೊಳಲು (1930)
2 - ಪಾಂಚಜನ್ಯ (1933)
3 - ನವಿಲು (1934)
4 - ಕಲಾಸುಂದರಿ (1934)
5 - ಕಥನ ಕವನಗಳು (1937)
6 - ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
7 - ಪ್ರೇಮ ಕಾಶ್ಮೀರ (1946)
8 - ಅಗ್ನಿಹಂಸ (1946)
9 - ಕೃತ್ತಿಕೆ (1946)
10 - ಪಕ್ಷಿಕಾಶಿ (1946)
11 - ಕಿಂಕಿಣಿ (ವಚನ ಸಂಕಲನ) (1946)
12 - ಷೋಡಶಿ (1946)
13 - ಚಂದ್ರಮಂಚಕೆ ಬಾ ಚಕೋರಿ (1957)
14 - ಇಕ್ಷುಗಂಗೋತ್ರಿ (1957)
15 - ಅನಿಕೇತನ (1963)
16 - ಜೇನಾಗುವ (1964)
17 - ಅನುತ್ತರಾ (1965)
18 - ಮಂತ್ರಾಕ್ಷತೆ (1966)
19 - ಕದರಡಕೆ (1967)
20 - ಪ್ರೇತಕ್ಯೂ (1967)
21 - ಕುಟೀಚಕ (1967)
22 - ಹೊನ್ನ ಹೊತ್ತಾರೆ (1976)
23 - ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)


*ಕಥಾ ಸಂಕಲನ* ✍️ 

1 - ಸಂನ್ಯಾಸಿ ಮತ್ತು ಇತರ ಕಥೆಗಳು (1936)

2 - ನನ್ನ ದೇವರು ಮತ್ತು ಇತರ ಕಥೆಗಳು (1940)

 *ಕಾದಂಬರಿಗಳು* ✍️

1 - ಕಾನೂರು ಹೆಗ್ಗಡತಿ (1936)

2 - ಮಲೆಗಳಲ್ಲಿ ಮದುಮಗಳು (1967)

 *ನಾಟಕಗಳು* ✍️

1 - ಯಮನ ಸೋಲು (1928)
2 - ಜಲಗಾರ (1928)
3 - ಬಿರುಗಾಳಿ (1930)
4 - ವಾಲ್ಮೀಕಿಯ ಭಾಗ್ಯ (1931)
5 - ಮಹಾರಾತ್ರಿ (1931)
6 - ಸ್ಶಶಾನ ಕುರುಕ್ಷೇತ್ರಂ (1931)
7 - ರಕ್ತಾಕ್ಷಿ (1933)
8 - ಶೂದ್ರ ತಪಸ್ವಿ (1944)
9 - ಬೆರಳ್‍ಗೆ ಕೊರಳ್ (1947)
10 - ಬಲಿದಾನ (1948)
11 - ಚಂದ್ರಹಾಸ (1963)
12 - ಕಾನೀನ (1974)

 *ಪ್ರಬಂಧ* ✍️

1 - ಮಲೆನಾಡಿನ ಚಿತ್ರಗಳು (1933)

 *ಆತ್ಮಕಥೆ* ✍️

1 - ನೆನಪಿನ ದೋಣಿಯಲ್ಲಿ : ಕುವೆಂಪು ಮದುವೆ ಪ್ರಸಂಗ

 *ಜೀವನ ಚರಿತ್ರೆಗಳು* ✍️

1 - ಸ್ವಾಮಿ ವಿವೇಕಾನಂದ
2 - ರಾಮಕೃಷ್ಣ ಪರಮಹಂಸ

 *ಆಯ್ದ ಸಂಕಲನಗಳು* ✍️ 

1 - ಕನ್ನಡ ಡಿಂಡಿಮ (1968)
2 - ಕಬ್ಬಿಗನ ಕೈಬುಟ್ಟಿ (1973)
3 - ಪ್ರಾರ್ಥನಾ ಗೀತಾಂಜಲಿ (1972)

ಸಾಮಾನ್ಯ ಜ್ಞಾನ

ಪ್ರಶ್ನೆ 1: ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ ಯಾರು?

ಉತ್ತರ: ವಾಸ್ಕೋ ಡ ಗಾಮ

ಪ್ರಶ್ನೆ 2: ಆಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದು ಯಾವಾಗ?

ಉತ್ತರ: 1453

ಪ್ರಶ್ನೆ 3: ವಾಸ್ಕೋ ಡ ಗಾಮ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವರ್ಷ ಯಾವುದು?

ಉತ್ತರ: 1498ರ ಮೇ 17

ಪ್ರಶ್ನೆ 4: ಭಾರತಕ್ಕೆ ವ್ಯಾಪಾರಕ್ಕೆ ಬಂದ ಪ್ರಥಮ ಐರೋಪ್ಯರು ಯಾರು?

ಉತ್ತರ: ಪೋರ್ಚುಗೀಸರು

ಪ್ರಶ್ನೆ 5: ವಾಸ್ಕೋ ಡ ಗಾಮ ಭಾರತಕ್ಕೆ ಕ್ರಿ.ಶ. 1498ರ ಮೇ 17ರಂದು ಬಂದು ತಲುಪಿದ ಬಂದರು ಯಾವುದು?

ಉತ್ತರ: ಕೇರಳದ ಕಲ್ಲಿಕೋಟೆ
ಪ್ರಶ್ನೆ 6: ವಾಸ್ಕೋ ಡ ಗಾಮನಿಗೆ ವ್ಯಾಪಾರಕ್ಕೆ ಅನುಮತಿ ನೀಡಿದ ಕಲ್ಲಿಕೋಟೆಯ ದೊರೆ ಯಾರು?

ಉತ್ತರ: ಜಾಮೋರಿನ್

ಪ್ರಶ್ನೆ 7: ಪೋರ್ಚುಗೀಸರ ಪ್ರಥಮ ವೈಸ್‌ರಾಯ್ ಆಗಿ ಭಾರತಕ್ಕೆ ಬಂದವರು ಯಾರು?

ಉತ್ತರ: ಫ್ರಾನ್ಸಿಸ್ಕೊ ಡ ಆಲ್ಮೇಡ್

ಪ್ರಶ್ನೆ 8: ದುರ್ಗೇಶ್ ಅರಣ್ಯ ಝೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿ..?

ಉತ್ತರ: ಹಿಮಾಚಲ ಪ್ರದೇಶದ ಕಂಗ್ರಾ

ಪ್ರಶ್ನೆ 9: 2019ರಲ್ಲಿ ನಡೆದ ಜಾನುವಾರ ಗಣತಿ ಎಷ್ಟನೇದಾಗಿದೆ?

ಉತ್ತರ: 20

ಪ್ರಶ್ನೆ 10: ಗರುಡ ಶಕ್ತಿ-2024ರ ಸಮರಾಭ್ಯಾಸ ಯಾವ ದೇಶದ ನಡುವೆ ನಡೆಯುತ್ತದೆ..?

ಉತ್ತರ: ಭಾರತ ಮತ್ತು ಇಂಡೋನೆಷ್ಯಾ


ಕ್ರೆಡಿಟ್ ಕಾರ್ಡ್(Credit Card) ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಕ್ರೆಡಿಟ್ ಕಾರ್ಡ್‌ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಅಂತ ಹಲವರಿಗೆ ಗೊತ್ತಿಲ್ಲ. ನೀವು ಕೂಡ ಕ್ರೆಡಿಟ್‌ ಕಾರ್ಡ್‌ ಯೂಸ್ ಮಾಡ್ತಿದ್ದೀರಾ? ಮುಂಬರುವ ದಿನಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ (Electronic Gadgets) ಅನ್ನು ಖರೀದಿಸಲು ನೀವು ಪ್ಲ್ಯಾನ್ ಮಾಡಿಕೊಂಡಿದ್ರೆ ಅದ್ಭುತ ಕ್ಯಾಶ್‌ಬ್ಯಾಕ್ (Cashback) ಕೊಡುಗೆಗಳನ್ನು ಪಡೆಯುವ ಅವಕಾಶಗಳಿವೆ.

ಕ್ರೆಡಿಟ್ ಕಾರ್ಡ್ (Credit Card) ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಕ್ರೆಡಿಟ್ ಕಾರ್ಡ್‌ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಅಂತ ಹಲವರಿಗೆ ಗೊತ್ತಿಲ್ಲ. ನೀವು ಕೂಡ ಕ್ರೆಡಿಟ್‌ ಕಾರ್ಡ್‌ ಯೂಸ್ ಮಾಡ್ತಿದ್ದೀರಾ? ಮುಂಬರುವ ದಿನಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ (Electronic Gadgets) ಅನ್ನು ಖರೀದಿಸಲು ನೀವು ಪ್ಲ್ಯಾನ್ ಮಾಡಿಕೊಂಡಿದ್ರೆ ಅದ್ಭುತ ಕ್ಯಾಶ್‌ಬ್ಯಾಕ್ (Cashback) ಕೊಡುಗೆಗಳನ್ನು ಪಡೆಯುವ ಅವಕಾಶಗಳಿವೆ.

ನಮ್ಮಲ್ಲಿ ಹೆಚ್ಚಿನವರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಆದರೆ ಊಟ (Food), ಚಲನಚಿತ್ರಗಳು (Movies) ಮತ್ತು ಆನ್‌ಲೈನ್ ಶಾಪಿಂಗ್‌ನಂತಹ (Online Shopping) ವಿಷಯಗಳಿಗೆ. ಅವುಗಳನ್ನು ಬಳಸುತ್ತಾರೆ. 


ಆದರೆ ಅದೇ ಸಮಯದಲ್ಲಿ ಕೆಲವು ಕಾರ್ಡ್‌ಗಳು ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯುವುದನ್ನು ಅದ್ಭುತವಾದ ವಿಷಯವನ್ನಾಗಿ ಮಾಡುತ್ತದೆ. ಆ ಸಂದರ್ಭದಲ್ಲಿ, ನೀವು ಆಗಾಗ್ಗೆ ಗ್ಯಾಜೆಟ್-ಕೊಳ್ಳುವವರಾಗಿದ್ದರೆ, ಈ ಆರ್ಟಿಕಲ್‌ ನಿಮಗಾಗಿ.


Amazon Pay ICICI ಕ್ರೆಡಿಟ್ ಕಾರ್ಡ್


ಪ್ರೈಮ್‌ ಸದಸ್ಯರು ಈ ಕ್ರೆಡಿಟ್ ಕಾರ್ಡ್‌ನೊಂದಿಗೆ Amazon ಖರೀದಿಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಅದೇ ಸಮಯದಲ್ಲಿ ನೀವು ಪ್ರೈಮ್ ಸದಸ್ಯರಲ್ಲದಿದ್ದರೆ ನೀವು 3% ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಅಮೆಜಾನ್‌ನಲ್ಲಿ ಎಲೆಕ್ಟ್ರಾನಿಕ್ಸ್ ಖರೀದಿಸುವ ಜನರಿಗೆ ಇದನ್ನು ವಿಶೇಷವಾಗಿ ನೀಡಲಾಗುತ್ತದೆ. ಈ ಕಾರ್ಡ್ ಯಾವುದೇ ವಾರ್ಷಿಕ ಶುಲ್ಕಗಳು ಅಥವಾ ಗುಪ್ತ ಶುಲ್ಕಗಳನ್ನು ಹೊಂದಿಲ್ಲ. ನೀವು ನೂರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಪಾವತಿ ಮಾಡಿದಾಗ 2% ಕ್ಯಾಶ್‌ಬ್ಯಾಕ್ ಪಡೆಯಲು ನೀವು Amazon Pay ನಲ್ಲಿ ಈ ಕಾರ್ಡ್ ಅನ್ನು ಬಳಸಬಹುದು.


ಕ್ಯಾಶ್‌ಬ್ಯಾಕ್‌ SBI ಕಾರ್ಡ್


ಈ ಕಾರ್ಡ್ ನಿಮ್ಮ ಎಲ್ಲಾ ಆನ್‌ಲೈನ್ ಖರ್ಚು ಪಾವತಿಗಳ ಮೇಲೆ 5% ಕ್ಯಾಶ್‌ಬ್ಯಾಕ್ ನೀಡುತ್ತದೆ. ಈ ಕಾರ್ಡ್ ಖರೀದಿಸಲು ನೀವು ರೂ 999 ಪಾವತಿಸಬೇಕು. ನೀವು 2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ, ಮುಂದಿನ ವರ್ಷದಲ್ಲಿ ನಿಮಗೆ ಮರುಪಾವತಿ ಮಾಡಲಾಗುತ್ತದೆ. ಈ ಕಾರ್ಡ್‌ನೊಂದಿಗೆ ನೀವು ಮುಂದಿನ ಸ್ಟೇಟ್‌ಮೆಂಟ್ ಜನರೇಷನ್‌ನ 2 ದಿನಗಳಲ್ಲಿ ನಿಮ್ಮ SBI ಕಾರ್ಡ್ ಖಾತೆಗೆ ದೊಡ್ಡ ಕ್ಯಾಶ್‌ಬ್ಯಾಕ್ ಅನ್ನು ಕ್ರೆಡಿಟ್ ಮಾ

ಡುತ್ತೀರಿ.

HDFC ಬ್ಯಾಂಕ್ ಮಿಲೇನಿಯಮ್ ಕ್ರೆಡಿಟ್ ಕಾರ್ಡ್


ಇದು Amazon, Flipkart, Myntra ಮತ್ತು ಇತರ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಮಾಡುವ ಪಾವತಿಗಳ ಮೇಲೆ 5% ಕ್ಯಾಶ್‌ಬ್ಯಾಕ್ ನೀಡುತ್ತದೆ. ಇತರ ವರ್ಗಗಳಿಗೆ 1% ಕ್ಯಾಶ್‌ಬ್ಯಾಕ್ ಲಭ್ಯವಿದೆ. ಈ ಕಾರ್ಡ್‌ಗೆ ಶುಲ್ಕವು ರೂ 1000 ಮತ್ತು ಅನ್ವಯವಾಗುವ ತೆರಿಗೆಗಳು ಇವೆ. ನೀವು ರೂ 1 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವ ಪ್ರತಿ ತ್ರೈಮಾಸಿಕಕ್ಕೆ ರೂ 1000 ಮೌಲ್ಯದ ವೋಚರ್‌ಗಳನ್ನು ಪಡೆಯಬಹುದು.


Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್


ಫ್ಲಿಪ್‌ಕಾರ್ಟ್‌ನಲ್ಲಿ ನಿಮ್ಮ ಖರೀದಿಗಳ ಮೇಲೆ 5% ಕ್ಯಾಶ್‌ಬ್ಯಾಕ್ ಮತ್ತು Swiggy, PVR, CultFit, Uber ಇತ್ಯಾದಿಗಳಲ್ಲಿ ನಿಮ್ಮ ಪಾವತಿಗಳ ಮೇಲೆ 4% ಕ್ಯಾಶ್‌ಬ್ಯಾಕ್ ಪಡೆಯಿರಿ. ಈ ಕಾರ್ಡ್ ಪಡೆಯಲು 500 ರೂ. ಕಾರ್ಡ್ ಖರೀದಿಸಿದ ಮುಂದಿನ ವರ್ಷದಲ್ಲಿ ನಿಮ್ಮ ಖರ್ಚು 3.5 ಲಕ್ಷ ರೂ.ಗಳನ್ನು ಮೀರಿದರೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.


ಆಕ್ಸಿಸ್ ಬ್ಯಾಂಕ್ ACE ಕ್ರೆಡಿಟ್ ಕಾರ್ಡ್


ಕಾರ್ಡ್ Google Pay ಮೂಲಕ ಬಿಲ್ ಪಾವತಿಗಳು ಮತ್ತು ರೀಚಾರ್ಜ್‌ಗಳ ಮೇಲೆ 5% ಕ್ಯಾಶ್‌ಬ್ಯಾಕ್, Swiggy, Ola ಮತ್ತು Zomato ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ 4% ಕ್ಯಾಶ್‌ಬ್ಯಾಕ್. ನೀವು ಮಾಡುವ ಇತರ ಖರ್ಚುಗಳ ಮೇಲೆ 1.5% ಅನ್ನು ನೀಡುತ್ತದೆ. ಈ ಕಾರ್ಡ್ ಖರೀದಿಸಲು ನೀವು ರೂ.499 ಶುಲ್ಕ ಪಾವತಿಸಬೇಕು. ಕಾರ್ಡ್ ಖರೀದಿಸಿದ ಮುಂದಿನ ವರ್ಷದೊಳಗೆ ನಿಮ್ಮ ಖರ್ಚು 2 ಲಕ್ಷ ರೂಪಾಯಿಗಳನ್ನು ಮೀರಿದರೆ ಈ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

Wednesday, December 25, 2024

cashback mobile recharge app

https://easypewallet.page.link/b5Qwmkk5fSqm7vnD9recharge app

ಸಾಮಾನ್ಯ ಜ್ಞಾನದ ಪ್ರಶ್ನೆಗಳು

ಪ್ರಶ್ನೆ 1: 71ನೇ ವಿಶ್ವ ಸುಂದರಿ 2024 ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?

ಉತ್ತರ: Krystyna Pyszková, Czech Republic

ಪ್ರಶ್ನೆ 2: ಭಾರತದ ಮೊದಲ ಆಯುರ್ವೇದಿಕ್ ರೆಸ್ಟೋರೆಂಟ್ "ಸೋಮ"(Soma)ವನ್ನು ಎಲ್ಲಿ ಪ್ರಾರಂಭಿಸಲಾಗಿದೆ?

ಉತ್ತರ: ನವದೆಹಲಿ

ಪ್ರಶ್ನೆ 3: ಪ್ರಪಂಚದ ಮೊದಲ ʼಓಂʼ ಆಕಾರದ ದೇವಾಲಯವನ್ನು ಎಲ್ಲಿ ಉದ್ಘಾಟಿಸಲಾಗಿದೆ?

ಉತ್ತರ: ಪಾಲಿ, ರಾಜಸ್ಥಾನ

ಪ್ರಶ್ನೆ 4: ಭಾರತದ ಚುನಾವಣಾ ಆಯೋಗದ "ಅಂಗವಿಕಲ ವ್ಯಕ್ತಿಗಳ" ರಾಷ್ಟ್ರೀಯ ಐಕಾನ್ ಯಾರು?

ಉತ್ತರ: ಶೀತಲ್ ದೇವಿ

ಪ್ರಶ್ನೆ 5: ಯಾವ ರಾಜ್ಯದಲ್ಲಿ "ಶಿಗ್ಮೋ ಉತ್ಸವ 2024" ಅನ್ನು ಆಚರಿಸಲಾಗಿದೆ?

ಉತ್ತರ: ಗೋವಾ


ಪ್ರಶ್ನೆ 6: ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ..?

ಉತ್ತರ: ಗದಗ

ಪ್ರಶ್ನೆ 7: 1858ರ ರಾಣಿಯ ಘೋಷಣೆ ಪ್ರಕಾರ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು ಯಾರು?

ಉತ್ತರ: ಲಾರ್ಡ್ ಕ್ಯಾನಿಂಗ್

ಪ್ರಶ್ನೆ 8: ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ

ಉತ್ತರ: ಲಾರ್ಡ್ ಮಿಂಟೊ

ಪ್ರಶ್ನೆ 9: ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ

ಉತ್ತರ: ಸತ್ಯೇಂದ್ರ ಪ್ರಸಾದ ಸಿನ್ಹಾ

ಪ್ರಶ್ನೆ 10: ಗಾಂಧಿ-ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?

ಉತ್ತರ: 1931 ಮಾರ್ಚ್ 5

Tuesday, December 24, 2024

ಇಂದು ಮಾಜಿ ಪ್ರಧಾನಿ `ಅಟಲ್ ಬಿಹಾರಿ ವಾಜಪೇಯಿ' 100ನೇ ಜಯಂತಿ : ಇಲ್ಲಿದೆ ಶಿಕ್ಷಣ, ರಾಜಕೀಯ ಜೀವನದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ | Atal Bihari Vajpayee

ಇಂದು ಮಾಜಿ ಪ್ರಧಾನಿ `ಅಟಲ್ ಬಿಹಾರಿ ವಾಜಪೇಯಿ' 100ನೇ ಜಯಂತಿ : ಇಲ್ಲಿದೆ ಶಿಕ್ಷಣ, ರಾಜಕೀಯ ಜೀವನದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ | Atal Bihari Vajpayee

ಇಂದು (ಡಿಸೆಂಬರ್ 25) ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ. ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಈ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ಆಚರಣೆಗಳು ವಿವಿಧ ಹಂತಗಳಲ್ಲಿ ನಡೆಯಲಿವೆ, ಅದರಲ್ಲಿ ಮೊದಲನೆಯದು ನವದೆಹಲಿಯಲ್ಲಿ ನಡೆಯಲಿದೆ, ಅಲ್ಲಿ 'ಸದೈವ್ ಅಟಲ್' ಸ್ಮಾರಕದಲ್ಲಿ ಭವ್ಯವಾದ ಕಾರ್ಯಕ್ರಮವನ್ನು ಯೋಜಿಸಲಾಗಿದೆ.


ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಮೈತ್ರಿ ಪಾಲುದಾರರ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಕೂಟವು ವಾಜಪೇಯಿಯವರಿಗೆ ಶ್ರದ್ಧಾಂಜಲಿ ಮಾತ್ರವಲ್ಲದೆ ಎನ್‌ಡಿಎ ಸರ್ಕಾರದ ಏಕತೆ ಮತ್ತು ರಾಜಕೀಯ ಶಕ್ತಿಯನ್ನು ಒತ್ತಿಹೇಳುವ ಅವಕಾಶವಾಗಿದೆ.


ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದು ಪ್ರಧಾನಿ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಹೀಗೆ.


ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿನ ಖಜುರಾಹೊದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೆನ್ ಬೇಟ್ವಾ ಯೋಜನೆಯ ಶಂಕುಸ್ಥಾಪನೆಯೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸಾಗಲಿದೆ.


ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. 1153 ಅಟಲ್ ಗ್ರಾಮ ಸುಶಾಸನ ಕಟ್ಟಡಗಳ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಉತ್ತಮ ಆಡಳಿತಕ್ಕಾಗಿ ಗ್ರಾಮ ಪಂಚಾಯಿತಿಗಳ ಕಾರ್ಯಗಳು ಮತ್ತು ಜವಾಬ್ದಾರಿಗಳ ಪ್ರಾಯೋಗಿಕ ಕಾರ್ಯನಿರ್ವಹಣೆಯಲ್ಲಿ ಈ ಕಟ್ಟಡಗಳು ಪ್ರಮುಖ ಪಾತ್ರವಹಿಸುತ್ತವೆ.


ಅಟಲ್ ಬಿಹಾರಿ ವಾಜಪೇಯಿ ಜನನ


ಅಟಲ್ ಬಿಹಾರಿ ವಾಜಪೇಯಿ ಅವರು 25 ಡಿಸೆಂಬರ್ 1924 ರಂದು ಭಾರತದ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್‌ನ ಶಿಂಧೆ ಕಿ ಕಂಟೋನ್ಮೆಂಟ್‌ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶ್ರೀ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ತಾಯಿಯ ಹೆಸರು ಕೃಷ್ಣಾದೇವಿ. ಅವರ ಪ್ರಾಥಮಿಕ ಶಿಕ್ಷಣ ಗ್ವಾಲಿಯರ್‌ನಲ್ಲಿ ಮಾತ್ರ. ಅವರು ವಿಕ್ಟೋರಿಯಾ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ.


ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರದ ಈ ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದಿದ್ದರು.ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರದ ಈ ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದಿದ್ದರು.


ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರದ ಡಿಎವಿ ಕಾಲೇಜಿನಲ್ಲಿ ತಮ್ಮ ತಂದೆಯೊಂದಿಗೆ ಕಾನೂನು ಅಧ್ಯಯನ ಮಾಡಿದರು. ಇಬ್ಬರೂ ಒಂದೇ ತರಗತಿಯಲ್ಲಿ ಕಾನೂನು ಪದವಿ ಪಡೆದರು ಮತ್ತು ಈ ಸಮಯದಲ್ಲಿ ಇಬ್ಬರೂ ಒಂದೇ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಡಿಎವಿ ಕಾಲೇಜಿಗೆ ಬಂದಾಗ ಬ್ರಿಟಿಷರ ವಿರುದ್ಧ ಚಳವಳಿ ಉತ್ತುಂಗ ಸ್ಥಿತಿಯಲ್ಲಿತ್ತು. ಅವರು 1945 ರಲ್ಲಿ ಪ್ರವೇಶ ಪಡೆದಾಗ, ಅವರ ಹಾಸ್ಟೆಲ್ ಕೊಠಡಿ ಸಂಖ್ಯೆ 104 ಆಗಿತ್ತು. ಇಲ್ಲಿಂದ ಅವರು ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. ಇದಾದ ನಂತರ ತಂದೆಯ ಬಳಿ ಎಲ್ ಎಲ್ ಬಿ ಓದಲು ಆರಂಭಿಸಿದರು. ತಂದೆ ಕೂಡ ಮಗನ ಜೊತೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು, ಆದರೆ ರಾಜಕೀಯಕ್ಕೆ ಸೇರಿದ ನಂತರ ಅವರು ತಮ್ಮ ಎಲ್‌ಎಲ್‌ಬಿ ವ್ಯಾಸಂಗವನ್ನು ಮಧ್ಯದಲ್ಲಿಯೇ ಬಿಟ್ಟರು.


ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು


ಅಟಲ್ ಬಿಹಾರಿ ವಾಜಪೇಯಿ ಜಿ ಅವರು ತಮ್ಮ ಆರಂಭಿಕ ಜೀವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. 1942ರ 'ಕ್ವಿಟ್ ಇಂಡಿಯಾ' ಚಳವಳಿಯಲ್ಲೂ ಭಾಗವಹಿಸಿ 24 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದು ನಿಮಗೆ ಗೊತ್ತೇ ಇದೆ. ಅವರು ಭಾರತೀಯ ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಲೋಕಸಭೆಯಲ್ಲಿ 10 ಬಾರಿ ಹಾಗೂ ರಾಜ್ಯಸಭೆಯಲ್ಲಿ ಎರಡು ಬಾರಿ ಸಂಸದರಾಗಿದ್ದರು. ದೆಹಲಿ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಾಲ್ಕು ವಿವಿಧ ರಾಜ್ಯಗಳಿಂದ ಸಂಸದರಾದ ಏಕೈಕ ಸಂಸದ ಅವರು ಎಂದು ನಾವು ನಿಮಗೆ ಹೇಳೋಣ. 6 ಏಪ್ರಿಲ್ 1980 ರಂದು, ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನೇಮಕಗೊಂಡರು.


16 ಮೇ 1996 ರಂದು ದೇಶದ 10 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀ

ಕರಿಸಿದರು

ಅಟಲ್ ಬಿಹಾರಿ ವಾಜಪೇಯಿ ಅವರು 16 ಮೇ 1996 ರಂದು ದೇಶದ 10 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಈ ಬಾರಿ ಸಂಖ್ಯಾಬಲದ ಕಾರಣದಿಂದ ರಾಜೀನಾಮೆ ನೀಡಬೇಕಾಯಿತು. 19 ಮಾರ್ಚ್ 1998 ರಂದು, ಅಟಲ್ ಜಿ ಅವರು ಮತ್ತೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ನಂತರ 13 ಅಕ್ಟೋಬರ್ 1999 ರಂದು, ಅಟಲ್ ಜಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು 1997 ರಲ್ಲಿ ಜನತಾ ಪಕ್ಷದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾದರು ಮತ್ತು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು.


ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದರು


ಅಟಲ್ ಬಿಹಾರಿ ವಾಜಪೇಯಿ ಅವರು ಹಿರಿಯ ನಾಯಕರಾಗಿದ್ದರು ಮತ್ತು ವಿರೋಧ ಪಕ್ಷಗಳ ನಡುವೆಯೂ ವಿಶೇಷ ಸ್ಥಾನವನ್ನು ಗಳಿಸಿದ್ದರು. ಜವಾಹರಲಾಲ್ ನೆಹರೂ ಕೂಡ ಮುಂದೊಂದು ದಿನ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರು ವಿದೇಶಾಂಗ ಸಚಿವರಾದಾಗ, ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದರು ಮತ್ತು ಹಾಗೆ ಮಾಡಿದ ದೇಶದ ಮೊದಲ ನಾಯಕರಾಗಿದ್ದರು.


ಭಾರತದ ಪರಮಾಣು ಶಕ್ತಿ ಜಗತ್ತಿಗೆ ಅರಿವಾಯಿತು


ಭಾರತದ ಪರಮಾಣು ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದವರು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಅನೇಕ ಅಂತರಾಷ್ಟ್ರೀಯ ಒತ್ತಡಗಳ ನಡುವೆಯೂ ಅವರು ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ಮಾಡಿ ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಮಾಡಿದರು. ಮಾಜಿ ಪ್ರಧಾನಿ ನರಸಿಂಹರಾವ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ರಾಜಕೀಯ ಗುರು ಎಂದು ಪರಿಗಣಿಸಿದ್ದರು. ಪಾಕಿಸ್ತಾನದೊಂದಿಗೆ ಬಲವಾದ ಸಂಬಂಧವನ್ನು ನಿರ್ಮಿಸಲು, ಅವರು 19 ಫೆಬ್ರವರಿ 1999 ರಂದು ದೆಹಲಿಯಿಂದ ಲಾಹೋರ್‌ಗೆ ಸದಾ-ಎ-ಸರ್ಹಾದ್ ಹೆಸರಿನ ಬಸ್ ಸೇವೆಯನ್ನು ಪ್ರಾರಂಭಿಸಿದರು, ಅದರಲ್ಲಿ ಅವರು ಒಮ್ಮೆ ಪ್ರಯಾಣಿಸಿದರು.


ಅವರು 1992 ರಲ್ಲಿ ಪದ್ಮವಿಭೂಷಣ ಮತ್ತು ಡಿಸೆಂಬರ್ 2014 ರಲ್ಲಿ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿಯನ್ನು ಪಡೆದರು.

ಅಟಲ್ ಬಿಹಾರಿ ವಾಜಪೇಯಿ ಅವರಿಗೆ 1992 ರಲ್ಲಿ ಪದ್ಮವಿಭೂಷಣ, 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, ಅತ್ಯುತ್ತಮ ಸಂಸದೀಯ ಪ್ರಶಸ್ತಿ ಮತ್ತು ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಲಾಯಿತು. ಅವರು ಡಿಸೆಂಬರ್ 2014 ರಲ್ಲಿ ದೇಶದ ಅತ್ಯುನ್ನತ ಗೌರವ ಭಾರತ ರತ್ನವನ್ನು ಸಹ ಪಡೆದರು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ ಮತ್ತು ಅಟಲ್ ಜಿ ಸ್ವತಃ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅಭಿಮಾನಿಯಾಗಿದ್ದರು.


ಅವರು 16 ಆಗಸ್ಟ್ 2018 ರಂದು ನಿಧನರಾದರು


ಅವರ ಆರೋಗ್ಯವು 2000 ರಲ್ಲಿ ಹದಗೆಡಲು ಪ್ರಾರಂಭಿಸಿತು, ಅವರಿಗೆ 2001 ರಲ್ಲಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು, ಅವರು 2009 ರಲ್ಲಿ ಪಾರ್ಶ್ವವಾಯುವಿಗೆ ಒಳಗಾದರು, ಇದರಿಂದಾಗಿ ಅವರು ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ ಮತ್ತು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರು 16 ಆಗಸ್ಟ್ 2018 ರಂದು ನಿಧನರಾದರು.

'ರಾಷ್ಟ್ರೀಯ ಮಾನವ ಹಕ್ಕು'ಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ನೇಮಕ |V. Ramasubramanian

'ರಾಷ್ಟ್ರೀಯ ಮಾನವ ಹಕ್ಕು'ಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ನೇಮಕ |V. Ramasubramanian


ಸುಪ್ರೀಂ ಕೋರ್ಟ್'ನ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್ಸಿ) ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ಜೂನ್ 2023 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದರು.

ಎನ್‌ಎಚ್‌ಆರ್ಸಿ ಅಧ್ಯಕ್ಷರನ್ನು ಪ್ರಧಾನಿ ನೇತೃತ್ವದ ಸಮಿತಿಯು ಆಯ್ಕೆ ಮಾಡುತ್ತದೆ, ಇದರಲ್ಲಿ ಲೋಕಸಭಾ ಸ್ಪೀಕರ್, ಗೃಹ ಸಚಿವರು, ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು ರಾಜ್ಯಸಭೆಯ ಉಪಾಧ್ಯಕ್ಷರು ಇದ್ದಾರೆ.


ನ್ಯಾಯಮೂರ್ತಿ (ನಿವೃತ್ತ) ಅರುಣ್ ಕುಮಾರ್ ಮಿಶ್ರಾ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಜೂನ್ 1, 2024 ರಿಂದ ಎನ್‌ಎಚ್‌ಆರ್ಸಿ ಅಧ್ಯಕ್ಷರ ಹುದ್ದೆ ಖಾಲಿ ಇತ್ತು. ಎನ್‌ಎಚ್‌ಆರ್ಸಿ ಸದಸ್ಯೆ ವಿಜಯ ಭಾರತಿ ಸಯಾನಿ ಅವರು ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



ಅಧಿವೇಶನ ಅವಧಿ ಲೆಕ್ಕಕ್ಕಷ್ಟೇ! ಈ ಬಾರಿ ನಡೆದಿದ್ದು 29 ದಿನ ಮಾತ್ರ

ಅಧಿವೇಶನ ಅವಧಿ ಲೆಕ್ಕಕ್ಕಷ್ಟೇ! ಈ ಬಾರಿ ನಡೆದಿದ್ದು 29 ದಿನ ಮಾತ್ರ


ವಿಧಾನಸಭಾ ಅಧಿವೇಶನ ವರ್ಷಕ್ಕೆ 60 ದಿನ ನಡೆಯಬೇಕು ಎಂಬುದು ಬಹುವರ್ಷದ ಆಶಯ. ಆದರೆ, ಕಳೆದ 42 ವರ್ಷಗಳಲ್ಲಿ ಈ ಆಶಯ ಈಡೇರಿದ್ದು 2000ನೇ ಇಸವಿಯಲ್ಲಿ ಮಾತ್ರ.

ಆದರೆ 7 ಕೋಟಿ ಜನರ ಧ್ವನಿಯಾಗಬೇಕಾದ ಅಧಿವೇಶನದ ದಿನಗಳು ಮಾತ್ರ ಕುಗ್ಗುತ್ತಿರುವುದು ವಿಪರ್ಯಾಸ. 1952ರಿಂದ 82ವರೆಗೆ ಅತಿಹೆಚ್ಚು 1,999 ದಿನಗಳ ಅಧಿವೇಶನ ನಡೆದಿದೆ. ಅದರಿಂದೀಚೆಗೆ 42 ವರ್ಷಗಳ ಇತಿಹಾಸದಲ್ಲಿ ಒಂದು ವರ್ಷ ಹೊರತುಪಡಿಸಿ ಒಮ್ಮೆಯೂ 60 ದಿನ ಅಧಿವೇಶನ ನಡೆದಿಲ್ಲ. ಈಗಾಗಲೇ 15 ಸರ್ಕಾರಗಳು ಬಂದು ಹೋಗಿವೆ. 16ನೇ ಸರ್ಕಾರ ಚಾಲ್ತಿಯಲ್ಲಿದೆ. ಆದರೆ 60 ದಿನಗಳ ಅಧಿವೇಶನ ಭರವಸೆಯಾಗಿಯೇ ಉಳಿದಿದೆ. 1952ರಿಂದ 72 ವರ್ಷದಲ್ಲಿ ಜನಸಂಖ್ಯೆ 7 ಕೋಟಿ ದಾಟಿದೆ. ಬಜೆಟ್ ಗಾತ್ರವೂ ಲಕ್ಷ ಕೋಟಿ ರೂ.ಮೀರಿದೆ. ಆದರೆ ರಾಜ್ಯದ ಸಮಸ್ಯೆಗಳು ಚರ್ಚೆಯಾಗಬೇಕಾದ ಹಾಗೂ ಅವುಗಳಿಗೆ ಪರಿಹಾರ ಕಲ್ಪಿಸಬೇಕಾದ ಅಧಿವೇಶನದ ಅವಧಿ ಕಡಿಮೆಯಾಗುತ್ತಿದೆ.


ಸದನ ಇತಿಹಾಸ: ಕೇವಲ 99 ಚುನಾಯಿತ ಶಾಸಕರಿದ್ದ ಕಾಲದಲ್ಲಿ 65ರಿಂದ 85 ದಿನಗಳವರೆಗೆ ನಡೆಯುತ್ತಿದ್ದ ಅಧಿವೇಶನ ದಿನಗಳ ಸಂಖ್ಯೆ 224 ಶಾಸಕರಾದ ಮೇಲೆ ಕುಸಿಯುತ್ತಿರುವುದು ವಿಪರ್ಯಾಸ. 1952ರಲ್ಲಿ 99 ಚುನಾಯಿತ ಸದಸ್ಯರು, ಒಬ್ಬರು ನಾಮನಿರ್ದೇಶಿತ ಸದಸ್ಯರು ಇದ್ದರು. 1957ರಲ್ಲಿ ಶಾಸಕರ ಸಂಖ್ಯೆ 208ಕ್ಕೆ ಏರಿತು. 1967ರಲ್ಲಿ 216ಕ್ಕೆ, 1978ರಲ್ಲಿ ಸದನದ ಬಲ 224ಕ್ಕೆ ಮುಟ್ಟಿತು. ಆರಂಭದಿಂದಲೂ ಸದನ ಇಂತಿಷ್ಟು ದಿನ ನಡೆಯಬೇಕೆಂಬ ನಿಯಮ ಇಲ್ಲದಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಮೌಲ್ಯಯುತ ಚರ್ಚೆಗಳು ನಡೆಯುತ್ತಿದ್ದವು

.

1971ರಲ್ಲಿ 4 ದಿನ ಮಾತ್ರ: 1971ರಲ್ಲಿ ಕೇವಲ 4 ದಿನ ಅಧಿವೇಶನ ನಡೆದಿದ್ದರೆ, 1963ರಲ್ಲಿ ಎರಡು ಬಾರಿ ಅಧಿವೇಶನ ನಡೆದಿದ್ದರೂ ಬರೋಬ್ಬರಿ 98 ದಿನ ಕಲಾಪ ನಡೆದಿದೆ. ಸದನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಲುವಾಗಿ 60 ದಿನ ಅಧಿವೇಶನ ನಡೆಸಲು ನಿಯಮ ರೂಪಿಸಲಾಯಿತು. ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪ ನಿರ್ವಹಣೆ ಅಧಿನಿಯಮ 2002ರಂತೆ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು. ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುವ ಅಧಿವೇಶನ 15 ದಿನಗಳು, ಬಜೆಟ್ ಸಂಬಂಧ 20 ದಿನ, ಮಳೆಗಾಲದ ಅಧಿವೇಶನ 15 ದಿನ. ಚಳಿಗಾಲದ ಅಧಿವೇಶನ 10 ದಿನ ನಡೆಸುವ ನಿಯಮ ರೂಪಿಸಲಾಯಿತು. ಅಧಿವೇಶನದ ದಿನಗಳು ಇನ್ನಷ್ಟು ಹೆಚ್ಚಾಗಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಆದರೆ ನಿಯಮ ರೂಪಿಸಿದ ಮೇಲೂ ಯಾವ ವರ್ಷವೂ ಗುರಿ ಮುಟ್ಟದೆ ನಿಯಮಗಳು ಕಡತಕ್ಕೆ ಸೀಮಿತವಾಗಿವೆ.


ವಿಪಕ್ಷ ಶಾಸಕರ ಸಂಖ್ಯೆ ವಿರಳ: 1952ರಿಂದ 82ರ ತನಕ 1999 ದಿನಗಳು ಅಧಿವೇಶನ ನಡೆದಿದೆ. ಈ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕರೇ ತುಂಬಿರುತ್ತಿದ್ದರು. ವಿಪಕ್ಷ ಶಾಸಕರು ಬೆರಳೆಣಿಕೆಯಷ್ಟು ಇರುತ್ತಿದ್ದರು. ಆದರೂ ದಿನಗಟ್ಟಲೆ ಸಮಸ್ಯೆಗಳ ಬಗ್ಗೆ, ಮೌಲ್ಯಯುತ ಚರ್ಚೆಗಳಿಗೆ ವೇದಿಕೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಸಮರ್ಥ ವಿಪಕ್ಷ, ಕೆಲವೊಮ್ಮೆ ಸಮ್ಮಿಶ್ರ ಸರ್ಕಾರ ಇದ್ದರೂ ನಿಗದಿತ ಕಾಲ ಅಧಿವೇಶನ ನಡೆದಿಲ್ಲ. 2014-15ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅಧಿವೇಶನವನ್ನು 60 ದಿನ ನಡೆಸುವ ಬಗ್ಗೆ ಉತ್ಸುಕರಾದರೂ ನಂತರದ 10 ವರ್ಷದಲ್ಲಿ 5 ವರ್ಷ 50 ದಿನಗಳ ಗಡಿ ದಾಟಿತೇ ವಿನಃ 60 ದಿನಗಳ ಗಡಿ ಮುಟ್ಟಿಸಲು ಸಾಧ್ಯವಾಗಿಲ್ಲ.


ರಾಜ್ಯದ ಸಮಸ್ಯೆ, ಜನಸಾಮಾನ್ಯರ ಅಗತ್ಯಗಳು, ಶಾಸನ ರಚನೆ ಸೇರಿ ಎಲ್ಲ ಪರಿಹಾರಗಳಿಗೂ ಬಹುದೊಡ್ಡ ವೇದಿಕೆ ಸದನ. ಔಚಿತ್ಯಪೂರ್ಣ, ಪ್ರಜಾಪ್ರಭುತ್ವದ ಆಶಯದಂತೆ ಚರ್ಚೆ ನಡೆಯುವುದಾದರೆ ವರ್ಷದಲ್ಲಿ 90 ದಿನಕ್ಕೆ ವಿಸ್ತರಿಸಬೇಕು. ಆದರೆ 60 ದಿನ ಕೂಡ ನಡೆಯುತ್ತಿಲ್ಲ. ಅನಗತ್ಯ ವಾದ-ವಿವಾದದಿಂದ ಸಮಯ ವ್ಯರ್ಥವಾಗುತ್ತಿದೆ. ಶಾಸಕರೂ ಸದನಕ್ಕೆ ಹೀಗೆ ಬಂದು ಹಾಗೆ ಹೋಗುವಂತಾಗಿದೆ. ಅಧಿವೇಶನ ದಿನಗಳ ವಿಸ್ತರಣೆ, ಕಲಾಪದ ನಿರ್ವಹಣೆ ಕುರಿತು ಚಿಂತನೆ ಅಗತ್ಯ.


Saturday, December 21, 2024

ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದ


ಪ್ರಶ್ನೆ 1: ಭಾರತ ಸರ್ಕಾರವು ರಚಿಸಿದ 'ಒಂದು ರಾಷ್ಟ್ರ ಒಂದು ಚುನಾವಣೆ' ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?

ಉತ್ತರ: ರಾಮನಾಥ್ ಕೋವಿಂದ್

ಪ್ರಶ್ನೆ 2: ಪ್ರತಿ ವರ್ಷ ಪ್ರವಾಸಿ ಭಾರತೀಯ ದಿನವನ್ನಾಗಿ ಯಾವ ದಿನವನ್ನು ಆಚರಿಸಲಾಗುತ್ತದೆ?

ಉತ್ತರ: ಜನವರಿ 9

ಪ್ರಶ್ನೆ 3: ʼರಿಪಬ್ಲಿಕ್ʼ ಎಂಬ ಮಹಾಕೃತಿಯ ಕರ್ತೃ ಯಾರು?

ಉತ್ತರ: ಪ್ಲೇಟೋ

ಪ್ರಶ್ನೆ 4: ಪ್ರಪಂಚದ ಮೊದಲ ಮರದ ಉಪಗ್ರಹ 'ಲಿಗ್ನೋಸ್ಯಾಟ್'ಅನ್ನು ಇತ್ತೀಚೆಗೆ ಉಡಾವಣೆ ಮಾಡಿದ ದೇಶ ಯಾವುದು.?

ಉತ್ತರ: ಜಪಾನ್

ಪ್ರಶ್ನೆ 5: ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2024ರ ಪ್ರಕಾರ, ಟಿಬಿ ರೋಗಿಗಳ ಪ್ರಕರಣಗಳಲ್ಲಿ ಅಗ್ರ ರಾಷ್ಟ್ರ ಯಾವುದು?

ಉತ್ತರ: ಭಾರತ

ಪ್ರಶ್ನೆ 6: ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ ಎಷ್ಟು..?


ಉತ್ತರ: 6 ವರ್ಷಗಳು


ಪ್ರಶ್ನೆ 7: ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?


ಉತ್ತರ: ಮುಖ್ಯಮಂತ್ರಿ


ಪ್ರಶ್ನೆ 8: ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಳ್ಳುತ್ತಾರೆ..?


ಉತ್ತರ: ರಾಷ್ಟ್ರಪತಿ


ಪ್ರಶ್ನೆ 9: ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ..?


ಉತ್ತರ: ರಾಷ್ಟ್ರಪತಿ


ಪ್ರಶ್ನೆ 10: ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?


ಉತ್ತರ: ಭಾಗ 5

ರಾಜ್ಯ ಸರ್ಕಾರದ 'ಗುತ್ತಿಗೆ ಸಿಬ್ಬಂದಿ'ಗಳಿಗೆ ಸಿಹಿಸುದ್ದಿ: 7ನೇ ವೇತನ ಆಯೋಗದ ಶಿಫಾರಸು 'ಸಂಚಿತ ವೇತನ ಪರಿಷ್ಕರಣೆ' ಯಾರಿಗೆ ಪ್ರಯೋಜನ..?

ರಾಜ್ಯ ಸರ್ಕಾರದ 'ಗುತ್ತಿಗೆ ಸಿಬ್ಬಂದಿ'ಗಳಿಗೆ ಸಿಹಿಸುದ್ದಿ: 7ನೇ ವೇತನ ಆಯೋಗದ ಶಿಫಾರಸು 'ಸಂಚಿತ ವೇತನ ಪರಿಷ್ಕರಣೆ' ಯಾರಿಗೆ ಪ್ರಯೋಜನ..?

   ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ,ಈ ಸಂಬಂಧ ನಡವಳಿಯನ್ನು ಹೊರಡಿಸಿರುವಂತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಮಾನ್ಯ ಮುಖ್ಯಮಂತ್ರಿ / ಮಾನ್ಯ ಉಪ ಮುಖ್ಯಮಂತ್ರಿ / ಮಾನ್ಯ ಸಚಿವರ / ಮಾನ್ಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳ / ಮಾನ್ಯ ಮುಖ್ಯಮಂತ್ರಿಯವರ ಸಲಹೆಗಾರರ / ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸಚಿವರ ಸ್ಥಾನಮಾನ ಪಡೆದ ಪ್ರಾಧಿಕಾರಿಗಳ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು / ಉಪಾಧ್ಯಕ್ಷರುಗಳ ಆಪ್ತ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ರ ಅನುಸಾರ ಸಂವಾದಿ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ, ವೇತನ ಹಂತವನ್ನು ದಿನಾಂಕ 01.11.2024ರಿಂದ ಜಾರಿಗೆ ಬರುವಂತೆ ಸಂಚಿತ ವೇತನವನ್ನಾಗಿ ಪರಿಷ್ಕರಿಸಿ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ‌ ಎಂದು ತಿಳಿಸಿರುತ್ತಾರೆ.

ಈ ಮೂಲಕ ಗುತ್ತಿಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ.


2024ನೇ ಸಾಲಿನ ಪರಿಷ್ಕೃತ ಸಂಚಿತ ವೇತನ (ರೂಪಾಯಿಗಳು) ಈ ರೀತಿಯಾಗಿದೆ.


ವಿಶೇಷಾಧಿಕಾರಿ / ವಿಶೇಷ ಕರ್ತವ್ಯಾಧಿಕಾರಿ


69,250/-


ಸಹಾಯಕ (ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಬದಲಾಗಿ ಸಹಾಯಕ ಹುದ್ದೆಯನ್ನಾಗಿ ಪರಿವರ್ತಿಸಲಾಗಿದೆ)


49,050/-


ಶೀಘ್ರಲಿಪಿಗಾರ


49,050/-


ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ


34,100/-


ಬೆರಳಚ್ಚುಗಾರ


34,100/-


ವಾಹನ ಚಾಲಕ


34,100/-


'ಡಿ' ದರ್ಜೆ ನೌಕರರು


27,000/-


ಈ ಪರಿಷ್ಕರಣೆಯು ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗೆ ಅನ್ವಯಿಸುವುದಿಲ್ಲವೆಂಬ ಪರತ್ತಿಗೊಳಪಟ್ಟು ನಿಗದಿಪಡಿಸಲಾಗಿದೆ ಎಂದು ಸಹ ತಿಳಿಸಿದ್ದಾರೆ.

Current affe

*_🌺ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು ಮತ್ತು ಉತ್ತರಗಳು ✍🏻_*

*🍁ಮೌಂಟ್ ಆಡಮ್ಸ್, ಸ್ಟ್ರಾಟೊವೊಲ್ಕಾನೊ, ಯಾವ ದೇಶದಲ್ಲಿದೆ?*
[A] ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ
[B] ರಷ್ಯಾ
[C] ಇಂಡೋನೇಷ್ಯಾ
[D] ಆಸ್ಟ್ರೇಲಿಯಾ
*Ans: A*

*🍁ಯಾವ ಸಚಿವಾಲಯವು eMigrate V2.0 ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು?*
[A] ಗೃಹ ವ್ಯವಹಾರಗಳ ಸಚಿವಾಲಯ
[B] ವಿದೇಶಾಂಗ ವ್ಯವಹಾರಗಳ ಸಚಿವಾಲಯ
[C] ರಕ್ಷಣಾ ಸಚಿವಾಲಯ
[D] ಪ್ರವಾಸೋದ್ಯಮ ಸಚಿವಾಲಯ
*Ans: B*

*🍁ಭಾರತೀಯ ನೌಕಾಪಡೆಯ ಎರಡು ಬಹುಪಯೋಗಿ ಹಡಗು (MPV) ಯೋಜನೆಯಡಿಯಲ್ಲಿ ಉಡಾವಣೆಗೊಂಡ ಮೊದಲ ಹಡಗಿನ ಹೆಸರೇನು?*
[ಎ] ವಿಕ್ಷಿತ್
[ಬಿ] ಕಾವೇರಿ
[ಸಿ] ಸಮರ್ಥಕ್
[ಡಿ] ಸಮುದ್ರ
*Ans: C*

*🍁ಸುದ್ದಿಗಳಲ್ಲಿ ಕಂಡುಬರುವ ಮರಗಳ ಉಪಕ್ರಮವು ಯಾವ ಪ್ರದೇಶದಲ್ಲಿ ಮರುಭೂಮಿಯ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದೆ?*
[A] ಆಗ್ನೇಯ ಏಷ್ಯಾ
[B] ಉಪ-ಸಹಾರನ್ ಆಫ್ರಿಕಾ
[C] ಆರ್ಕ್ಟಿಕ್ ವೃತ್ತ
[D] ಮೇಲಿನ ಯಾವುದೂ ಇಲ್ಲ
*Ans: B*

*🍁5 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳು 2023 ರಲ್ಲಿ ಯಾವ ರಾಜ್ಯವು ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ?*
[ಎ] ಒಡಿಶಾ
[ಬಿ] ಜಾರ್ಖಂಡ್
[ಸಿ] ಬಿಹಾರ
[ಡಿ] ಗುಜರಾತ್
*Ans: A*

*🍁ಯಾವ ನಗರವು ಇತ್ತೀಚೆಗೆ SCO ಶೃಂಗಸಭೆಯನ್ನು ಆಯೋಜಿಸಿತು?*
[ಎ] ಇಸ್ಲಾಮಾಬಾದ್
[ಬಿ] ನವದೆಹಲಿ
[ಸಿ] ಬೀಜಿಂಗ್
[ಡಿ] ಮಾಸ್ಕೋ
*Ans: A*

*🍁ಚಂದ್ರಯಾನ-3 ಮಿಷನ್‌ಗಾಗಿ ಇತ್ತೀಚೆಗೆ ಯಾವ ಭಾರತೀಯರು IAF ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ಪಡೆದರು?*
[ಎ] ಮನೋಜ್ ಗೋವಿಲ್
[ಬಿ] ಎಸ್. ಸೋಮನಾಥ್
[ಸಿ] ಪಿಕೆ ಮಿಶ್ರಾ
[ಡಿ] ಪವನ್ ಕುಮಾರ್ ಗೋಯೆಂಕಾ
*Ans: B*

*🍁ಗುರುಗ್ರಹದ ಚಂದ್ರನನ್ನು ಅನ್ವೇಷಿಸಲು ಯುರೋಪಾ ಕ್ಲಿಪ್ಪರ್ ಮಿಷನ್ ಅನ್ನು ಯಾವ ಬಾಹ್ಯಾಕಾಶ ಸಂಸ್ಥೆ ಪ್ರಾರಂಭಿಸಿದೆ?*
[A] ISRO
[B] NASA
[C] CNSA
[D] ESA
*Ans: B*

*🍁ಅಪರೂಪದ ಜನ್ಮಜಾತ ಅಸ್ವಸ್ಥತೆಯಾದ ನೆಮಾಲಿನ್ ಮಯೋಪತಿ, ಪ್ರಾಥಮಿಕವಾಗಿ ದೇಹದ ಯಾವ ಭಾಗವನ್ನು ಬಾಧಿಸುತ್ತದೆ?*
[A] ಮೂತ್ರಪಿಂಡಗಳು
[B] ಶ್ವಾಸಕೋಶಗಳು
[C] ಅಸ್ಥಿಪಂಜರದ ಸ್ನಾಯುಗಳು
[D] ಹೃದಯ
*Ans: C*

*🍁ಇತ್ತೀಚೆಗೆ ಭಾರತವು ಯುನೈಟೆಡ್ ಸ್ಟೇಟ್ಸ್‌ನಿಂದ ಸ್ವಾಧೀನಪಡಿಸಿಕೊಂಡ MQ-9B ಪ್ರಿಡೇಟರ್ ಡ್ರೋನ್‌ಗಳ ಪ್ರಾಥಮಿಕ ಉದ್ದೇಶವೇನು?*
[A] ಕಣ್ಗಾವಲು ಮತ್ತು ವಿಚಕ್ಷಣ
[B] ಕೃಷಿ ಮೇಲ್ವಿಚಾರಣೆ
[C] ಹವಾಮಾನ ಮುನ್ಸೂಚನೆ
[D] ಮೇಲಿನ ಯಾವುದೂ ಅಲ್ಲ
*Ans: A*

G K

☘*ರಾಬರ್ಟ್ ಕ್ಲೈವ್* - ಬಂಗಾಳದ ದ್ವಿ ಸರ್ಕಾರ ಪದ್ಧತಿ

☘ *ಲಾರ್ಡ್ ಕಾರ್ನ್‌ವಾಲಿಸ್-* ಖಾಯಂ ಜಮೀನ್ದಾರಿ ಪದ್ಧತಿ

☘ *ಥಾಮಸ್‌ ಮನ್ರೋ-* ರೈತವಾರಿ ಪದ್ಧತಿ

☘ *ವಿಲಿಯಂ ಬೆಂಟಿಂಕ್* - ಮಹಲ್ವಾರಿ ಪದ್ಧತಿ

☘ *ಲಾರ್ಡ್ ಡಾಲ್‌ಹೌಸಿ-* ದತ್ತು ಮಕ್ಕಳಿಗೆ ಹಕ್ಕಿಲ್ಲ

☘ *ಲಾರ್ಡ್ ವೆಲ್ಲೆಸ್ಲಿ-* ಸಹಾಯಕ ಸೈನ್ಯ ಪದ್ಧತಿ

☘ *ಲಾರ್ಡ್ ಕರ್ಜನ್-* ಬಂಗಾಳದ ವಿಭಜನೆ

☘ *ಲಾರ್ಡ್ ಮಿಂಟೋ-* ಮುಸ್ಲಿಂ ಲೀಗ್ ಸ್ಥಾಪನೆ

☘ *ಲಾರ್ಡ್ ಹ್ಯಾಂಡ್ರಿಜ್* - ಬಂಗಾಳ ವಿಭಜನೆ ಹಿಂತೆಗೆದುಕೊಂಡರು


*Note* 

🌳 ಮಾನವನ ದೇಹದ ಅತಿ ದೊಡ್ಡ ಗ್ರಂಥಿ
- *ಯಕೃತ್ ( ಲಿವರ್ )* 

🌳 ಮಾನವನ ದೇಹದ ಅತಿ ದೊಡ್ಡ ಮೂಳೆ
- *ಫೀಮರ್ ( ತೊಡೆ ಮೂಳೆ )* 

🌳 ಮಾನವನ ದೇಹದ ಚಿಕ್ಕ ಮೂಳೆ
- *ಸ್ಪೆಫೀಸ್ ( ಮಧ್ಯ ಕಿವಿ ಮೂಳೆ )* 

🌳 ಮಾನವನ ದೇಹದ ಅತಿ ದೊಡ್ಡ ಅಂಗ 
- *ಚರ್ಮ* .

ಪ್ರಚಲಿತ ವಿದ್ಯಾಮಾನಗಳ ಕ್ವಿಜ್

🔰 *ಪ್ರಚಲಿತ ವಿದ್ಯಾಮಾನಗಳ ಕ್ವಿಜ್ :-* 

1. ಮಹಿಳಾ ಜೂನಿಯರ್ ಏಷ್ಯಾ ಕಪ್ 2024 ರ ಫೈನಲ್‌ನಲ್ಲಿ ಭಾರತ ಯಾವ ತಂಡವನ್ನು ಸೋಲಿಸಿತು?
(ಎ) ರಿಪಬ್ಲಿಕ್ ಆಫ್ ಕೊರಿಯಾ
(ಬಿ) ಜಪಾನ್
(ಸಿ) ಚೀನಾ✅
(ಡಿ) ಮಲೇಷ್ಯಾ

ವಿವರಣೆ:- ಭಾರತವು 15 ಡಿಸೆಂಬರ್ 2024 ರಂದು ಓಮನ್‌ನ ಮಸ್ಕತ್‌ನಲ್ಲಿ ಮಹಿಳಾ ಜೂನಿಯರ್ ಏಷ್ಯಾ ಕಪ್ 2024 ಹಾಕಿ ಚಾಂಪಿಯನ್‌ಶಿಪ್ ಅನ್ನು
ಗೆದ್ದುಕೊಂಡಿತು, ಪೆನಾಲ್ಟಿ ಶೂಟೌಟ್‌ನಲ್ಲಿ ಚೀನಾವನ್ನು 3-2 ರಿಂದ ಸೋಲಿಸಿತು.

2. ಯಾವ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024 ಗೆದ್ದಿದೆ?
(ಎ) ಹಿಮಾಚಲ ಪ್ರದೇಶ
(ಬಿ) ಮಧ್ಯಪ್ರದೇಶ
(ಸಿ) ಮುಂಬೈ✅
(ಡಿ) ಕರ್ನಾಟಕ

ವಿವರಣೆ:- ಮುಂಬೈ 2024 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು
ಗೆದ್ದುಕೊಂಡಿತು, 15 ಡಿಸೆಂಬರ್ 2024 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮಧ್ಯಪ್ರದೇಶವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. 

3. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಮತ್ತು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಪೌರಾಣಿಕ ಕಲಾವಿದ ಜಾಕಿರ್ ಹುಸೇನ್ ಅವರು ಡಿಸೆಂಬರ್ 2024 ರಲ್ಲಿ ನಿಧನರಾದರು. ಅವರು ಯಾವ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ?
(ಎ) ಭಾರತೀಯ ಶಾಸ್ತ್ರೀಯ ನೃತ್ಯ
(ಬಿ) ತಬಲಾ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ✅
(ಸಿ) ಚಿತ್ರಕಲೆ ಮತ್ತು ಶಿಲ್ಪಕಲೆ
(ಡಿ) ಸಾಹಿತ್ಯ ಮತ್ತು ಕಾವ್ಯ

ವಿವರಣೆ:- ಲೆಜೆಂಡರಿ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು 73 ನೇ ವಯಸ್ಸಿನಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ 15 ಡಿಸೆಂಬರ್ 2024 ರಂದು ನಿಧನರಾದರು.

4. NHAI ಪರಿಚಯಿಸಿದ ಹೊಸ ರೂಟ್ ಪೆಟ್ರೋಲಿಂಗ್ ವೆಹಿಕಲ್ಸ್ (RPVs) ಹೆಸರೇನು?
(ಎ) ರಾಜಮಾರ್ಗ್ ಸೇವಾ
(ಬಿ) ರಾಜಮಾರ್ಗ್ ಸಾಥಿ✅
(ಸಿ) ಹೆದ್ದಾರಿ ಸಹಾಯಕ
(ಡಿ) ರಸ್ತೆ ಸಾಥಿ

ವಿವರಣೆ:- ಹೆದ್ದಾರಿ ಸುರಕ್ಷತೆಯನ್ನು ಸುಧಾರಿಸಲು ರಾಜ್ಮಾರ್ಗ್ ಸಾಥಿ ಹೆಸರಿನ ಸುಧಾರಿತ ರೂಟ್ ಪೆಟ್ರೋಲಿಂಗ್ ವೆಹಿಕಲ್ಸ್ (ಆರ್‌ಪಿವಿ) ಅನ್ನು
ಪರಿಚಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜಿಸಿದೆ. 

5. ಪ್ರೀತಿ ಲೋಬಾನಾ ಇತ್ತೀಚೆಗೆ ಯಾವ ಹುದ್ದೆಗೆ ನೇಮಕಗೊಂಡಿದ್ದಾರೆ?
(ಎ) ಗೂಗಲ್ ಇಂಡಿಯಾದ CEO
(ಬಿ) ಗೂಗಲ್ ಇಂಡಿಯಾದ ದೇಶದ ಮ್ಯಾನೇಜರ್✅
(ಸಿ) ಗೂಗಲ್‌ನ ಜಾಗತಿಕ ಮುಖ್ಯಸ್ಥ
(ಡಿ) ಗೂಗಲ್ ಮೇಘದ ನಿರ್ದೇಶಕ

6. ಮಿಖಾಯಿಲ್ ಕವೆಲಾಶ್ವಿಲಿ ಅವರು ಇತ್ತೀಚೆಗೆ ಯಾವ ದೇಶದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
(ಎ) ಅರ್ಜೆಂಟೀನಾ
(ಬಿ) ಇಟಲಿ
(ಸಿ) ಜಾರ್ಜಿಯಾ✅
(ಡಿ) ಬೆಲಾರಸ್

ವಿವರಣೆ:- ಜಾರ್ಜಿಯಾದ ನೂತನ ಅಧ್ಯಕ್ಷರಾಗಿ ಮಿಖಾಯಿಲ್ ಕವೆಲಾಶ್ವಿಲಿ ಆಯ್ಕೆಯಾಗಿದ್ದಾರೆ. 300 ಸದಸ್ಯರ ಎಲೆಕ್ಟೋರಲ್ ಕಾಲೇಜಿನಿಂದ ನೇರ ಮತದಾನದ ಮೂಲಕ ಅವರು ಸಂಸತ್ತಿಗೆ ಅವಿರೋಧವಾಗಿ ಆಯ್ಕೆಯಾದರು, 225 ಸದಸ್ಯರಲ್ಲಿ 224 ಸದಸ್ಯರು ಅವರಿಗೆ ಮತ ಹಾಕಿದರು. ಮಾಜಿ ಫುಟ್ಬಾಲ್ ಆಟಗಾರ ಮಿಖಾಯಿಲ್ ಕ್ವೆಲಾಶ್ವಿಲಿ ಆಡಳಿತಾರೂಢ ಜಾರ್ಜಿಯನ್ ಡ್ರೀಮ್ ಪಕ್ಷದ ಸಂಸತ್ತಿನ ಸದಸ್ಯರಾಗಿದ್ದಾರೆ.

7. ಒಳನಾಡಿನ ಜಲಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿದೆ?
(ಎ) 'ಜಲ ಪರಿವಾಹನ್' ಮಿಷನ್
(ಬಿ) ಜಲವಾಹಕ್ ಯೋಜನೆ✅
(ಸಿ) 'ರಾಷ್ಟ್ರೀಯ ಜಲಮಾರ್ಗ್' ಯೋಜನೆ
(ಡಿ) 'ಹರಿತ್ ಜಲ' ಯೋಜನೆ

ವಿವರಣೆ:- ಭಾರತ ಸರ್ಕಾರವು ಒಳನಾಡಿನ ಜಲಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ಉತ್ತೇಜಿಸಲು ಜಲವಾಹಕ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ಸಾರಿಗೆ ದಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ವಿಶೇಷವಾಗಿ ಭಾರತದ ರಾಷ್ಟ್ರೀಯ ಜಲಮಾರ್ಗಗಳ ಮೂಲಕ ದೂರದ ಸರಕು ಸಾಗಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

8. 'ಡೆಸರ್ಟ್ ನೈಟ್ ಏರ್ ಕಾಂಬ್ಯಾಟ್ ಎಕ್ಸರ್ಸೈಸ್' ನಲ್ಲಿ ಭಾರತದ ಜೊತೆಗೆ ಯಾವ ದೇಶಗಳು ಭಾಗವಹಿಸಿದ್ದವು?
(ಎ) ಕತಾರ್ ಮತ್ತು ಬಹ್ರೇನ್
(ಬಿ) ಫ್ರಾನ್ಸ್ ಮತ್ತು ಕತಾರ್
(ಸಿ) ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್✅
(ಡಿ) ರಷ್ಯಾ ಮತ್ತು ಬೆಲಾರಸ್

ವಿವರಣೆ:- ಭಾರತ, ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಡಿಸೆಂಬರ್ 12 ರಿಂದ ಡಿಸೆಂಬರ್ 14, 2024 ರವರೆಗೆ ಅರೇಬಿಯನ್ ಸಮುದ್ರದ ಮೇಲೆ ಡೆಸರ್ಟ್ ನೈಟ್ ವಾಯು ಯುದ್ಧ ವ್ಯಾಯಾಮವನ್ನು ಯಶಸ್ವಿಯಾಗಿ ನಡೆಸಿದೆ. ಈ ತ್ರಿಪಕ್ಷೀಯ ವ್ಯಾಯಾಮದ ಉದ್ದೇಶವು ಮಿಲಿಟರಿ ಸಹಕಾರವನ್ನು ಹೆಚ್ಚಿಸುವುದು ಮತ್ತು ಬಲಪಡಿಸುವುದು ರಕ್ಷಣಾ ಸಂಬಂಧಗಳು. ಭಾರತೀಯ ವಾಯುಪಡೆಯು (IAF) ಸುಖೋಯ್-30MKI, ಜಾಗ್ವಾರ್ ಮತ್ತು IL-78 ಮಿಡ್-ಏರ್ ರಿಫ್ಯೂಲರ್ ಸೇರಿದಂತೆ ವಿಮಾನಗಳೊಂದಿಗೆ ಭಾಗವಹಿಸಿತು.

9. ಭಾರತದಲ್ಲಿ ಪ್ರತಿ ವರ್ಷ ವಿಜಯ್ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ?
(ಎ) 14 ಡಿಸೆಂಬರ್
(ಬಿ) 15 ಡಿಸೆಂಬರ್
(ಸಿ) 16 ಡಿಸೆಂಬರ್✅
(ಡಿ) 17 ಡಿಸೆಂಬರ್

10. ಡಿಸೆಂಬರ್ 2024 ರಲ್ಲಿ ಬಿಡುಗಡೆಯಾದ 'ದಲೈ ಲಾಮಾಸ್' ಸೀಕ್ರೆಟ್ ಟು ಹ್ಯಾಪಿನೆಸ್' ಪುಸ್ತಕದ ಲೇಖಕರು ಯಾರು?
(ಎ) ದಲೈ ಲಾಮಾ 
(ಬಿ) ಮಾಣಿಕ್ ಕೊತ್ವಾಲ್ 
(ಸಿ) ಸಮಂತಾ ಹಾರ್ವೆ 
(ಡಿ) ಡಾ.ದಿನೇಶ್ ಶಹರಾ✅

11. ಈ ಕೆಳಗಿನ ಯಾವ ರಾಷ್ಟ್ರದ ಅಧ್ಯಕ್ಷರು ಭಾರತಕ್ಕೆ ಎರಡು ದಿನಗಳ ಭೇಟಿಗೆ ಬಂದಿದ್ದಾರೆ?
(ಎ) ಶ್ರೀಲಂಕಾ✅
(ಬಿ) ಮಾಲ್ಡೀವ್ಸ್
(ಸಿ) ಇಂಡೋನೇಷ್ಯಾ
(ಡಿ) ನೇಪಾಳ

12. ಕೆಳಗಿನ ಯಾವ ದೇಶಗಳಲ್ಲಿ ಏಷ್ಯಾದ ಮೊದಲ ಜಿಯೋ ಸೈನ್ಸ್ ಮ್ಯೂಸಿಯಂ ಅನ್ನು ಸಿದ್ಧಪಡಿಸಲಾಗಿದೆ?
(ಎ) ಭಾರತ✅
(ಬಿ) ಜಪಾನ್
(ಸಿ) ಚೀನಾ
(ಡಿ) ಸಿಂಗಾಪುರ

13. ಇತ್ತೀಚೆಗೆ ವಿಶ್ವಪ್ರಸಿದ್ಧ 'ಸೂರಜ್‌ಕುಂಡ್ ಮೇಳ 2025' ಅನ್ನು ಈ ಕೆಳಗಿನ ಯಾವುದರಲ್ಲಿ ಆಯೋಜಿಸಲಾಗುವುದು?
(ಎ) ಅಯೋಧ್ಯೆ
(ಬಿ) ಪ್ರಯಾಗ್ರಾಜ್
(ಸಿ) ವಾರಣಾಸಿ
(ಡಿ) ಫರಿದಾಬಾದ್✅

14. "ಜಲವಾಹಕ್ ಯೋಜನೆ"ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. NITI ಆಯೋಗ್ ಜೊತೆಗೆ ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರ (IWAI) ಈ ಯೋಜನೆಯನ್ನು ಪ್ರಾರಂಭಿಸಿದೆ.

2. ಈ ಯೋಜನೆಯು ಜಲಮಾರ್ಗಗಳ ಮೂಲಕ ಸರಕುಗಳನ್ನು ಸಾಗಿಸುವ ಕಾರ್ಗೋ ಮಾಲೀಕರಿಗೆ ನಿರ್ವಹಣಾ ವೆಚ್ಚದ 50% ವರೆಗೆ ಮರುಪಾವತಿಯನ್ನು ಒದಗಿಸುತ್ತದೆ.

3. ಭಾರತ-ಬಾಂಗ್ಲಾದೇಶ ಪ್ರೋಟೋಕಾಲ್ (IBP) ಮಾರ್ಗದಲ್ಲಿ NW 1 (ಗಂಗಾ ನದಿ), NW 2 (ಬ್ರಹ್ಮಪುತ್ರ ನದಿ), ಮತ್ತು NW 16 (ಬರಾಕ್ ನದಿ) ಜಲಮಾರ್ಗಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
(ಎ) ಕೇವಲ ಒಂದು✅
(ಬಿ) ಕೇವಲ ಎರಡು
(ಸಿ) ಎಲ್ಲಾ ಮೂರು
(ಡಿ) ಯಾವುದೂ ಇಲ್ಲ

ವಿವರಣೆ:- ಇತ್ತೀಚೆಗೆ, ಸರ್ಕಾರವು ಗಂಗಾ, ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ಮೇಲೆ ರಾಷ್ಟ್ರೀಯ ಜಲಮಾರ್ಗಗಳ (NW) ಮೂಲಕ ಒಳನಾಡಿನ ಜಲಮಾರ್ಗಗಳ ಮೂಲಕ ದೀರ್ಘಾವಧಿಯ ಸರಕು ಸಾಗಣೆಯನ್ನು ಹೆಚ್ಚಿಸಲು ಸರಕು ಪ್ರಚಾರಕ್ಕಾಗಿ 'ಜಲ್ವಾಹಕ್' ಎಂಬ ಪ್ರಮುಖ ನೀತಿಯನ್ನು ಅನಾವರಣಗೊಳಿಸಿತು.

👉🏻 ಹೇಳಿಕೆ 1 ತಪ್ಪಾಗಿದೆ: ಜಲವಹಕ್ ಯೋಜನೆಯು ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರ (IWAI) ಮತ್ತು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SCIL) ನ ಅಂಗಸಂಸ್ಥೆಯಾದ ಒಳನಾಡು ಮತ್ತು ಕರಾವಳಿ ಶಿಪ್ಪಿಂಗ್ ಲಿಮಿಟೆಡ್ (ICSL) ನಡುವಿನ ಜಂಟಿ ಉಪಕ್ರಮವಾಗಿದೆ.
ಗುರಿ: ಒಳನಾಡಿನ ಜಲಮಾರ್ಗಗಳ ವ್ಯಾಪಾರ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಲು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡಲು, ರಸ್ತೆ ಮತ್ತು ರೈಲುಮಾರ್ಗಗಳನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಸಾರಿಗೆ ವಿಧಾನಕ್ಕೆ ಹೊಂದಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಯೋಜನೆಯು ಆರಂಭದಲ್ಲಿ 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

👉🏻 ಹೇಳಿಕೆ 2 ತಪ್ಪಾಗಿದೆ: ಒಳನಾಡಿನ ಜಲಮಾರ್ಗಗಳ ಮೂಲಕ ಸರಕುಗಳನ್ನು ಸಾಗಿಸುವಾಗ ಉಂಟಾಗುವ ನಿರ್ವಹಣಾ ವೆಚ್ಚಗಳಿಗೆ ಈ ಯೋಜನೆಯು 35% ವರೆಗೆ ಮರುಪಾವತಿಯನ್ನು ಒದಗಿಸುತ್ತದೆ, 50% ಅಲ್ಲ. ಜಲಮಾರ್ಗಗಳ ಮೂಲಕ 300 ಕಿಮೀಗಿಂತ ಹೆಚ್ಚಿನ ದೂರದವರೆಗೆ ಸರಕುಗಳನ್ನು ಸಾಗಿಸುವ ಕಾರ್ಗೋ ಮಾಲೀಕರು ನಿರ್ವಹಣಾ ವೆಚ್ಚದ ಮೇಲೆ 35 ಪ್ರತಿಶತದಷ್ಟು ಮರುಪಾವತಿಯನ್ನು ಪಡೆಯುತ್ತಾರೆ → NW 1 (ಗಂಗಾ ನದಿ), NW 2 (ಬ್ರಹ್ಮಪುತ್ರ ನದಿ) ಮತ್ತು NW 16 (ಬರಾಕ್ ನದಿ) ನಲ್ಲಿ ಜಲಮಾರ್ಗಗಳ ಮೂಲಕ ಸರಕುಗಳನ್ನು ಸಾಗಿಸುವಾಗ ಉಂಟಾಗುವ ವೆಚ್ಚಗಳು ಇಂಡೋ ಬಾಂಗ್ಲಾದೇಶ ಪ್ರೋಟೋಕಾಲ್ (IBP) ಮಾರ್ಗದ ಮೂಲಕ.

👉🏻 ಹೇಳಿಕೆ 3 ಸರಿಯಾಗಿದೆ: ಯೋಜನೆಯು ಭಾರತ-ಬಾಂಗ್ಲಾದೇಶ ಪ್ರೋಟೋಕಾಲ್ (IBP) ಮಾರ್ಗದ ಅಡಿಯಲ್ಲಿ NW 1 (ಗಂಗಾ ನದಿ), NW 2 (ಬ್ರಹ್ಮಪುತ್ರ ನದಿ), ಮತ್ತು NW 16 (ಬರಾಕ್ ನದಿ) ನಲ್ಲಿ ಜಲಮಾರ್ಗಗಳನ್ನು ಒಳಗೊಂಡಿದೆ.

15. ಡಿಸೆಂಬರ್ 11 ರಂದು, ನಾಲ್ಕು ರಾಜ್ಯಗಳಲ್ಲಿ 1 ಲಕ್ಷ ಮಕ್ಕಳಿಗೆ ಶೈಕ್ಷಣಿಕ ಭೂದೃಶ್ಯವನ್ನು ಪರಿವರ್ತಿಸುವ ಗುರಿಯೊಂದಿಗೆ BMW ಗ್ರೂಪ್ ಮತ್ತು __ ನಿಂದ ಭಾರತದಲ್ಲಿ ಪಾಲುದಾರಿಕೆಯನ್ನು ಘೋಷಿಸಲಾಯಿತು.
(ಎ) UNICEF✅
(ಬಿ) WHO
(ಸಿ) UNESCO
(ಡಿ) ರೆಡ್ ಕ್ರಾಸ್

16. ಗ್ಲೋಬಲ್ ಇನ್‌ಕ್ಯೂಸಿವ್ ಫೈನಾನ್ಸ್ ಶೃಂಗಸಭೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು 'ವರ್ಷದ ಮೈಕ್ರೋಫೈನಾನ್ಸ್‌ ಆರ್ಗನೈಸೇಶನ್ ಪ್ರಶಸ್ತಿ' ಗೆದ್ದಿದೆ?
(ಎ) ಆದಿತ್ಯ ಬಿರ್ಲಾ ಫೈನಾನ್ಸ್‌
(ಬಿ) ಕ್ರಿಸಿಲ್ ಲಿಮಿಟೆಡ್
(ಸಿ) ಎಲ್ & ಟಿ ಫೈನಾನ್ಸ್
(ಡಿ)ಸ್ಯಾಟಿನ್ ಕ್ರೆಡಿಟ್‌ಕೇರ್ ನೆಟ್‌ವರ್ಕ್✅

ವಿವರಣೆ:- ಗ್ಲೋಬಲ್ ಇನ್‌ಕ್ಲೂಸಿವ್ ಫೈನಾನ್ಸ್ ಶೃಂಗಸಭೆಯಲ್ಲಿ ಸ್ಯಾಟಿನ್ ಕ್ರೆಡಿಟ್‌ಕೇರ್ ನೆಟ್‌ವರ್ಕ್ (Satin Creditcare Network) 'ವರ್ಷದ ಮೈಕ್ರೊಫೈನಾನ್ಸ್ ಆರ್ಗನೈಸೇಶನ್ ಪ್ರಶಸ್ತಿ' ಗೆದ್ದಿದೆ. ಸ್ಯಾಟಿನ್ ಕ್ರೆಡಿಟ್‌ಕೇರ್ ನೆಟ್‌ವರ್ಕ್ ಮೈಕ್ರೊಫೈನಾನ್ಸ್ ಅನ್ನು ಒಳಗೊಂಡಂತೆ ಮಾಡಲು ಗೌರವಿಸಲಾಯಿತು.

• ಹೆಚ್ಚಿನ ಸಂಖ್ಯೆಯ ಕುಟುಂಬಗಳ ಮೇಲೆ ಶಾಶ್ವತವಾದ ಪ್ರಭಾವ ಬೀರಲು ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡಲು ಸುಸ್ಥಿರ ಜೀವನೋಪಾಯವನ್ನು ನಿರ್ಮಿಸಲು ಅವರನ್ನು ಸಬಲೀಕರಣಗೊಳಿಸುವುದಕ್ಕಾಗಿ ಇದನ್ನು ಗೌರವಿಸಲಾಯಿತು. ಸ್ಯಾಟಿನ್ ಕ್ರೆಡಿಟ್‌ಕೇರ್ ನೆಟ್‌ವರ್ಕ್ ಪ್ರಮುಖ ಕಿರುಬಂಡವಾಳ ಕಂಪನಿಯಾಗಿದೆ.

17. ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಒಪ್ಪಂದದ 12 ನೇ ಸದಸ್ಯ ರಾಷ್ಟ್ರ ಯಾವುದು?
(ಎ) ಫ್ರಾನ್ಸ್ 
(ಬಿ) ಬ್ರೆಜಿಲ್
(ಸಿ) ಜಪಾನ್
(ಡಿ) ಯುನೈಟೆಡ್ ಕಿಂಗಮ್✅

ವಿವರಣೆ:- ಬ್ರಿಟನ್ ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಒಪ್ಪಂದದ 12 ನೇ ಸದಸ್ಯರಾದರು. ಯುನೈಟೆಡ್ ಕಿಂಗ್‌ಡಮ್ ಟ್ರಾನ್ಸ್-ಪೆಸಿಫಿಕ್ ಸಹಭಾಗಿತ್ವಕ್ಕಾಗಿ (CPTPP) ಸಮಗ್ರ ಮತ್ತು ಪ್ರಗತಿಶೀಲ ಒಪ್ಪಂದದ 12 ನೇ ಸದಸ್ಯರಾದರು.

• 2023 ರಲ್ಲಿ, ಬ್ರಿಟಿಷ್ ಸರ್ಕಾರವು ಟ್ರಾನ್ಸ್- ಪೆಸಿಫಿಕ್ ಪಾಲುದಾರಿಕೆಗಾಗಿ ಸಮಗ್ರ ಮತ್ತು ಪ್ರಗತಿಶೀಲ ಒಪ್ಪಂದಕ್ಕೆ (CPTPP) ಸೇರುವುದಾಗಿ ಘೋಷಿಸಿತು. ಇದು ಬ್ರಿಟನ್‌ನ ಹೆಣಗಾಡುತ್ತಿರುವ ಆರ್ಥಿಕತೆಯನ್ನು ವರ್ಷಕ್ಕೆ $2.5 ಶತಕೋಟಿ (ಸುಮಾರು €2.4 ಶತಕೋಟಿ) ಹೆಚ್ಚಿಸುತ್ತದೆ.

18. "ಡೆಸರ್ಟ್ ನೈಟ್" ವ್ಯಾಯಾಮದಲ್ಲಿ ಯಾವ ದೇಶ ಭಾಗವಹಿಸಿತು?
(ಎ) ಭಾರತ
(ಬಿ) ಫ್ರಾನ್ಸ್
(ಸಿ) ಯುಎಇ
(ಡಿ) ಮೇಲಿನ ಎಲ್ಲಾ✅

ವಿವರಣೆ:- ಭಾರತ, ಫ್ರಾನ್ಸ್ ಮತ್ತು ಯುಎಇ "ಡೆಸರ್ಟ್ ನೈಟ್" ವ್ಯಾಯಾಮದಲ್ಲಿ ಭಾಗವಹಿಸಿದ್ದವು.

• ಭಾರತ, ಫ್ರಾನ್ಸ್ ಮತ್ತು ಯುಎಇ ಅರಬ್ಬಿ ಸಮುದ್ರದಲ್ಲಿ "ಡೆಸರ್ಟ್ ನೈಟ್" ಎಂಬ ತ್ರಿಪಕ್ಷೀಯ ವಾಯು ಯುದ್ಧ ವ್ಯಾಯಾಮವನ್ನು ಪ್ರಾರಂಭಿಸಿವೆ. ಇದು ತ್ರಿಪಕ್ಷೀಯ ರಕ್ಷಣಾ ಸಹಕಾರವನ್ನು ವರ್ಧಿಸುತ್ತದೆ ಮತ್ತು ವಾಯುಪಡೆಗಳ ನಡುವೆ ಉತ್ತಮ ಪರಸ್ಪರ ಕಾರ್ಯಸಾಧ್ಯತೆಯನ್ನು ಉತ್ತೇಜಿಸುತ್ತದೆ. ಭಾರತೀಯ ವಾಯುಪಡೆಯು ಸುಖೋಯ್-30MKI ಗಳು ಮತ್ತು ಜಾಗ್ವಾರ್‌ಗಳಂತಹ ವಿಮಾನಗಳೊಂದಿಗೆ IL-78 ಮಧ್ಯ-ಗಾಳಿ ಇಂಧನ ತುಂಬುವ ಯಂತ್ರಗಳೊಂದಿಗೆ ಭಾಗವಹಿಸಿತು.

19. ಭಾರತದ ಮೊದಲ ಮಧುಮೇಹ ಬಯೋಬ್ಯಾಂಕ್‌ ಅನ್ನು ____ ನಲ್ಲಿ ಸ್ಥಾಪಿಸಲಾಗಿದೆ.
(ಎ) ಇಂದೋರ್
(ಬಿ) ಲಕ್ನೋ
(ಸಿ) ಜೈಪುರ
(ಡಿ) ಚೆನ್ನೈ✅

ವಿವರಣೆ:- ಭಾರತದ ಮೊದಲ ಮಧುಮೇಹ ಬಯೋಬ್ಯಾಂಕ್ ಅನ್ನು ಚೆನ್ನೈನಲ್ಲಿ ಸ್ಥಾಪಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ (MDRF) ಸಹಭಾಗಿತ್ವದಲ್ಲಿ ಚೆನ್ನೈನಲ್ಲಿ ಭಾರತದ ಮೊದಲ ಮಧುಮೇಹ ಬಯೋಬ್ಯಾಂಕ್‌ ಅನ್ನು ಸ್ಥಾಪಿಸಿದೆ.

• ಮಧುಮೇಹ ಸಂಶೋಧನೆಯನ್ನು ಮುನ್ನಡೆಸಲು ಜೈವಿಕ ಮಾದರಿಗಳನ್ನು ಸಂಗ್ರಹಿಸಲು, ಪ್ರಕ್ರಿಯೆಗೊಳಿಸಲು, ಸಂಗ್ರಹಿಸಲು ಮತ್ತು ವಿತರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಜೈವಿಕ ಬ್ಯಾಂಕ್ ಮಧುಮೇಹದ ಕಾರಣ ಮತ್ತು ಭಾರತದಲ್ಲಿ ಅದರ ವಿಶಿಷ್ಟ ಮಾದರಿಯನ್ನು ಅಧ್ಯಯನ ಮಾಡುತ್ತದೆ.

20. ಮೇಲಾಧಾರ-ಮುಕ್ತ ಕೃಷಿ ಸಾಲಗಳಿಗೆ RBI ಮಿತಿ 1.6 ಲಕ್ಷದಿಂದ ರೂ ___ 
(ಎ) 3 ಲಕ್ಷ
(ಬಿ) 5 ಲಕ್ಷ
(ಸಿ) 7 ಲಕ್ಷ
(ಡಿ) 2 ಲಕ್ಷ✅

ವಿವರಣೆ:- 1.6 ಲಕ್ಷದಿಂದ 2 ಲಕ್ಷ ರೂಪಾಯಿಗಳಿಗೆ ಮೇಲಾಧಾರ-ಮುಕ್ತ ಕೃಷಿ ಸಾಲಗಳಿಗೆ RBI ಮಿತಿ.

• ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮೇಲಾಧಾರ ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷದಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಇದು ಮುಂದಿನ ವರ್ಷ ಜನವರಿ 1 ರಿಂದ ಜಾರಿಗೆ ಬರಲಿದೆ.

• ಇದು ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ಹೊಸ ನಿರ್ದೇಶನವು ಪ್ರತಿ ಸಾಲಗಾರನಿಗೆ ರೂ 2 ಲಕ್ಷದವರೆಗಿನ ಕೃಷಿ ಮತ್ತು ಸಂಬಂಧಿತ ಚಟುವಟಿಕೆಯ ಸಾಲಗಳಿಗೆ ಮೇಲಾಧಾರ ಮತ್ತು ಮಾರ್ಜಿನ್ ಅವಶ್ಯಕತೆಗಳನ್ನು ಮನ್ನಾ ಮಾಡಲು ಬ್ಯಾಂಕುಗಳಿಗೆ ಸೂಚನೆ ನೀಡುತ್ತದೆ.

21. ಭಾರತದಲ್ಲಿನ ಸಾರ್ವಜನಿಕ ವಲಯದ ಬ್ಯಾಂಕುಗಳು (PSBs) FY24 ರಲ್ಲಿ ತಮ್ಮ ಅತ್ಯಧಿಕ ಒಟ್ಟು ____  ನಿವ್ವಳ ಲಾಭವನ್ನು ಗಳಿಸಿವೆ.
(ಎ) 1 ಲಕ್ಷದ 41 ಸಾವಿರ ಕೋಟಿ ರೂ✅
(ಬಿ) 2 ಲಕ್ಷ 53 ಸಾವಿರ ಕೋಟಿ
(ಸಿ) 3 ಲಕ್ಷ 75 ಸಾವಿರ ಕೋಟಿ
(ಡಿ) 4 ಲಕ್ಷ 98 ಸಾವಿರ ಕೋಟಿ

ವಿವರಣೆ:- ಭಾರತದಲ್ಲಿನ ಸಾರ್ವಜನಿಕ ವಲಯದ ಬ್ಯಾಂಕುಗಳು (PSBs) FY24 ರಲ್ಲಿ ತಮ್ಮ ಅತ್ಯಧಿಕ ಒಟ್ಟು ನಿವ್ವಳ ಲಾಭ ಸುಮಾರು 1 ಲಕ್ಷ 41 ಸಾವಿರ ಕೋಟಿ ಗಳಿಸಿವೆ. ಸೆಪ್ಟೆಂಬರ್ 2024 ರಲ್ಲಿ, ಒಟ್ಟು ಅನುತ್ಪಾದಕ ಆಸ್ತಿಗಳ (GNPA) ಅನುಪಾತವು 3.12% ಕ್ಕೆ ಇಳಿದಿದೆ.

• ಮಾರ್ಚ್ 2018 ರಲ್ಲಿ ಗರಿಷ್ಠ GNPA 14.58 ಶೇಕಡಾಕ್ಕೆ ಹೋಲಿಸಿದರೆ, ಇದು ತೀವ್ರ ಕುಸಿತವಾಗಿದೆ. ಹಣಕಾಸು ಸಚಿವಾಲಯದ ಪ್ರಕಾರ, ಷೇರುದಾರರ ಆದಾಯಕ್ಕೆ PSB ಗಳು ಗಣನೀಯ ಕೊಡುಗೆಯನ್ನು ನೀಡಿವೆ.

22. ಭಾರತದಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
(ಎ) ಡಿಸೆಂಬರ್ 10
(ಬಿ) ಡಿಸೆಂಬರ್ 14✅
(ಸಿ) ಡಿಸೆಂಬರ್ 15
(ಡಿ) ಡಿಸೆಂಬರ್ 12

23. ಡಿಸೆಂಬರ್ 2024 ರಲ್ಲಿ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಫ್ರಾನ್ಸ್‌ನ ಹೊಸ ಪ್ರಧಾನ ಮಂತ್ರಿಯಾಗಿ ಯಾರನ್ನು ನೇಮಿಸಿದ್ದಾರೆ?            
(ಎ) ಜೀನ್-ಲುಕ್ ಮೆಲೆಂಚನ್
(ಬಿ) ಫ್ರಾಂಕೋಯಿಸ್ ಬೇರೊ✅
(ಸಿ) ಮೈಕೆಲ್ ಬಾರ್ನಿಯರ್
(ಡಿ) ಮರೀನ್ ಲೆ ಪೆನ್

Friday, December 20, 2024

Saving Account Type: ಒಂದಲ್ಲ, ಎರಡಲ್ಲ 7 ರೀತಿಯ ಉಳಿತಾಯ ಖಾತೆಗಳಿವೆ!

Saving Account Type: ಒಂದಲ್ಲ, ಎರಡಲ್ಲ 7 ರೀತಿಯ ಉಳಿತಾಯ ಖಾತೆಗಳಿವೆ!



ಉಳಿತಾಯ (Savings) ನಮ್ಮ ಜೀವನದ ಅವಿಭಾಜ್ಯ ಅಂಗ. ಆದ್ದರಿಂದ, ಬ್ಯಾಂಕ್ ಖಾತೆ (Bank Account) ತೆರೆಯುವುದು ಮತ್ತು ಅದರೊಂದಿಗೆ ಉಳಿತಾಯ ಮತ್ತು ವ್ಯಾಪಾರ ಮಾಡುವುದು ಎರಡೂ ಮುಖ್ಯ. ನಾವು ಉಳಿತಾಯ ಖಾತೆ ಎಂದು ಹೇಳಿದಾಗ ಎರಡು ವಿಧಗಳಿವೆ, ಒಂದು ಸಾಮಾನ್ಯ ಉಳಿತಾಯ ಖಾತೆ (Savings Account) ಮತ್ತು ಇನ್ನೊಂದು ಸಂಬಳ ಖಾತೆ (Salary Account).

ಆದರೆ ಒಂದಲ್ಲ, ಎರಡಲ್ಲ ಏಳು ವಿವಿಧ ರೀತಿಯ ಉಳಿತಾಯ ಖಾತೆಗಳಿವೆ ಅಂತ ಗೊತ್ತಿದ್ಯಾ? ಅವುಗಳ ಲಕ್ಷಣಗಳೂ ಬೇರೆ ಬೇರೆ, ಉದ್ದೇಶವೇ ಬೇರೆ. ಅನೇಕರಿಗೆ ಇದು ತಿಳಿದಿಲ್ಲ. ಪ್ರತಿ ಖಾತೆಯಲ್ಲಿ ಲಭ್ಯವಿರುವ ಪ್ರಯೋಜನಗಳು ಮತ್ತು ಸೌಲಭ್ಯಗಳು ಸಹ ಭಿನ್ನವಾಗಿರುತ್ತವೆ.


ಹಲವು ರೀತಿಯ ಉಳಿತಾಯ ಖಾತೆಗಳು ಲಭ್ಯವಿರುವುದರಿಂದ, ಪ್ರತಿಯೊಂದೂ ವಿಭಿನ್ನ ಅಗತ್ಯಗಳನ್ನು ಪೂರೈಸುವುದರಿಂದ, ಅವುಗಳ ವೈಶಿಷ್ಟ್ಯಗಳು, ಪ್ರಯೋಜನಗಳು, ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳು ಮತ್ತು ಸಂಭಾವ್ಯ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.


ನಿಯಮಿತ ಉಳಿತಾಯ ಖಾತೆ


ವೈಶಿಷ್ಟ್ಯಗಳು: ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಹುಡುಕುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಠೇವಣಿಗಳ ಮೇಲೆ ಬಡ್ಡಿಯನ್ನು ನೀಡುತ್ತದೆ. ATM ಕಾರ್ಡ್‌ಗಳು, ಆನ್‌ಲೈನ್ ಬ್ಯಾಂಕಿಂಗ್ ಮತ್ತು ಚೆಕ್ ಪುಸ್ತಕಗಳಂತಹ ಸೌಲಭ್ಯಗಳು.


ಕನಿಷ್ಠ ಬ್ಯಾಲೆನ್ಸ್: ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ನಿರ್ವಹಿಸುವ ಅಗತ್ಯವಿದೆ (ಮೊತ್ತವು ಬ್ಯಾಂಕಿನಿಂದ ಬ್ಯಾಂಕ್ ಮತ್ತು ನಗರ ಗ್ರಾಮೀಣಕ್ಕೆ ಬದಲಾಗುತ್ತದೆ).


ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ


ವೈಶಿಷ್ಟ್ಯಗಳು: ಕನಿಷ್ಠ ಬ್ಯಾಲೆನ್ಸ್ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ನಂತಹ ಯೋಜನೆಗಳ ಅಡಿಯಲ್ಲಿ ಸಾಮಾನ್ಯವಾಗಿ ನೀಡಲಾಗುತ್ತದೆ.


ಇದಕ್ಕೆ ಸೂಕ್ತವಾಗಿದೆ: ವಿದ್ಯಾರ್ಥಿಗಳು, ಕಡಿಮೆ ಆದಾಯದ ಗುಂಪುಗಳು ಮತ್ತು ಮೊದಲ ಬಾರಿಗೆ ಖಾತೆದಾರರು.


ಸಂಬಳ ಉಳಿತಾಯ ಖಾತೆ


ವೈಶಿಷ್ಟ್ಯಗಳು: ಸಂಬಳದ ಉದ್ಯೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಮಾಸಿಕ ವೇತನವನ್ನು ಈ ಖಾತೆಗೆ ವರ್ಗಾಯಿಸಲಾಗುತ್ತದೆ.


ಮಿನಿಮಮ್ ಬ್ಯಾಲೆನ್ಸ್: ಸಂಬಳ ಸಂಗ್ರಹವಾಗುವವರೆಗೆ ಖಾತೆ ಖಾಲಿಯಾಗಿರುತ್ತದೆ. ಆದರೆ ಸತತ ಮೂರು ತಿಂಗಳವರೆಗೆ ಸಂಬಳವನ್ನು ಸಂಗ್ರಹಿಸದಿದ್ದರೆ, ಅದನ್ನು ಸಾಮಾನ್ಯ ಉಳಿತಾಯ ಖಾತೆಗೆ ವರ್ಗಾಯಿಸಲಾಗುತ್ತದೆ.


ಹಿರಿಯ ನಾಗರಿಕರ ಉಳಿತಾಯ ಖಾತೆ


ವೈಶಿಷ್ಟ್ಯಗಳು: 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಬಡ್ಡಿ ದರಗಳು ಮತ್ತು ಉಚಿತ ಆರೋಗ್ಯ ತಪಾಸಣೆ ಅಥವಾ ಆದ್ಯತೆಯ ಸೇವೆಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.


ಕನಿಷ್ಠ ಬ್ಯಾಲೆನ್ಸ್: ಬ್ಯಾಂಕ್ ಮೂಲಕ ಬದಲಾಗುತ್ತದೆ.


ಮಕ್ಕಳ ಉಳಿತಾಯ ಖಾತೆ

ವೈಶಿಷ್ಟ್ಯಗಳು: ಅಪ್ರಾಪ್ತ ವಯಸ್ಕರಿಗೆ ಉಳಿತಾಯ ಅಭ್ಯಾಸವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಪೋಷಕರ ಮೇಲ್ವಿಚಾರಣೆಯಲ್ಲಿ ನಿರ್ವಹಿಸಲಾಗಿದೆ.


ಕನಿಷ್ಠ ಬ್ಯಾಲೆನ್ಸ್‌: ಸಾಮಾನ್ಯವಾಗಿ ಕಡಿಮೆ ಅಥವಾ ಶೂನ್ಯ.


ಮಹಿಳಾ ಉಳಿತಾಯ ಖಾತೆ


ವೈಶಿಷ್ಟ್ಯಗಳು: ಲಾಕರ್‌ಗಳು, ವಿಮೆ ಅಥವಾ ಶಾಪಿಂಗ್ ವೋಚರ್‌ಗಳ ಮೇಲಿನ ರಿಯಾಯಿತಿಗಳಂತಹ ವಿಶೇಷ ಪ್ರಯೋಜನಗಳು.


ಕನಿಷ್ಠ ಬ್ಯಾಲೆನ್ಸ್: ಬ್ಯಾಂಕ್ ನೀತಿಗಳ ಆಧಾರದ ಮೇಲೆ ಬದಲಾಗುತ್ತದೆ.


ಹೆಚ್ಚಿನ ಬಡ್ಡಿಯ ಉಳಿತಾಯ ಖಾತೆ


ವೈಶಿಷ್ಟ್ಯಗಳು: ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಹೆಚ್ಚಿನ ಕನಿಷ್ಠ ಬ್ಯಾಲೆನ್ಸ್ ಅಗತ್ಯತೆಗಳಂತಹ ಹೆಚ್ಚುವರಿ ಷರತ್ತುಗಳೊಂದಿಗೆ ಬರಬಹುದು.


ಕನಿಷ್ಠ ಬ್ಯಾಲೆನ್ಸ್: ಸಾಮಾನ್ಯ ಖಾತೆಗಳಿಗಿಂತ ಸಾಮಾನ್ಯವಾಗಿ ಹೆಚ್ಚು.


Thursday, December 19, 2024

PM Awas Yojana 2.0: ಮನೆ ಖರೀದಿಸಲು ಸರ್ಕಾರ 2.30 ಲಕ್ಷ ನೀಡ್ತಿದೆ! ಹಣವನ್ನು ಎಲ್ಲಿ ಮತ್ತು ಹೇಗೆ ಪಡೆಯುವುದು?

PM Awas Yojana 2.0: ಮನೆ ಖರೀದಿಸಲು ಸರ್ಕಾರ 2.30 ಲಕ್ಷ ನೀಡ್ತಿದೆ! ಹಣವನ್ನು ಎಲ್ಲಿ ಮತ್ತು ಹೇಗೆ ಪಡೆಯುವುದು?


  ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಅನ್ನೋದು ಹಲವರು ಕನಸು (Dream). ಆದ್ರೆ ಒಂದು ಮನೆ ಕಟ್ಟಿಸೋದು ತಮಾಷೆಯ ಮಾತಲ್ಲ. ಸಾಲ (Loan) ಮಾಡಿ ಹಲವರು ಮನೆ ಕಟ್ಟುತ್ತಾರೆ. ಆದ್ರೆ 20 ವರ್ಷ ಬಡ್ಡಿ (Interest) ಕಟ್ಟೋಕೆ ಆಗದೇ ಕಷ್ಟ ಪಡುತ್ತಾರೆ. ಬಡವರಿಗಂತೂ ಸ್ವಂತ ಮನೆ ಅನ್ನೋದು ಒಂದು ಕನಸು.


ಹಲಬರಿಗೆ ಕನಸಾಗಿಯೇ ಉಳಿದುಬಿಡುತ್ತೆ. ಈಗ ಮೋದಿ ಸರ್ಕಾರ (Modi Government) ಈ ಕನಸನ್ನು ನನಸಾಗಿಸಲು ಸಹಾಯ ಮಾಡಲು ಮುಂದಾಗಿದೆ. ಈಗ ನಿಮ್ಮ ಕನಸಿನ ಮನೆಯನ್ನು ಖರೀದಿಸೋಕೆ ಸರ್ಕಾರ ಹಣ ಸಹಾಯ (Money) ಮಾಡಲಿದೆ. ಸರ್ಕಾರದಿಂದ 2.50 ಲಕ್ಷ ರೂಪಾಯಿ ನೀಡಲಾಗುತ್ತೆ. ಇದಕ್ಕೆ ಒಂದೇ ಷರತ್ತು. ಅದು ಏನಂದ್ರೆ ನಿಮ್ಮ ಹೆಸರನಿಲ್ಲಿ ಮನೆ ಇರಬಾರದು. ಈ ಹಣವನ್ನು ಎಲ್ಲಿ ಮತ್ತು ಹೇಗೆ ಪಡೆಯಬಹುದು? ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.


ಪ್ರಧಾನ ಮಂತ್ರಿ ಆವಾಸ್‌ ಯೋಜನೆ!


ಮನೆ ಖರೀದಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭವನ್ನು ಹೇಗೆ ಪಡೆಯುವುದು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ . ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಅರ್ಬನ್ (PMAY-U 2.0) ಎರಡನೇ ಹಂತವನ್ನು ಪ್ರಾರಂಭಿಸಿದೆ.


ಈ ಯೋಜನೆಯಡಿ, ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚು ನಗರ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು, ಖರೀದಿಸಲು ಅಥವಾ ಬಾಡಿಗೆಗೆ ನೀಡಲು ಹಣಕಾಸಿನ ನೆರವು ನೀಡಲಾಗುವುದು. ಮನೆ ಖರೀದಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ.


2.30 ಲಕ್ಷ ಕೋಟಿ ನೆರವು!


ಈ ಯೋಜನೆಯಡಿ ಕೇಂದ್ರ ಸರ್ಕಾರ 2.30 ಲಕ್ಷ ಕೋಟಿ ನೆರವು ನೀಡಲಿದೆ. ಮೊದಲ ಹಂತದಲ್ಲಿ 1.18 ಕೋಟಿ ಮನೆ ನಿರ್ಮಾಣದ ಗುರಿ ಹೊಂದಲಾಗಿತ್ತು. ಅದರಲ್ಲಿ 85.5 ಲಕ್ಷ ಮನೆಗಳನ್ನು ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. PMAY-U ನ ಮುಖ್ಯ ಉದ್ದೇಶವೆಂದರೆ ನಗರ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್ಲಾ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸುವುದು.


PMAY 2.0 ಅಡಿಯಲ್ಲಿ ಒಂದು ಲಕ್ಷ ಹೊಸ ಮನೆಗಳನ್ನು ನಿರ್ಮಿಸಲಾಗುವುದು . ಈ ಪ್ರತಿ ಮನೆಗೆ ₹ 2.30 ಲಕ್ಷ ಸಹಾಯಧನ ನೀಡಲಾಗುವುದು. ಇದರ ಹೊರತಾಗಿ, ಫಲಾನುಭವಿಗಳ ನೇತೃತ್ವದ ನಿರ್ಮಾಣ (BLC), ಕೈಗೆಟುಕುವ ವಸತಿ ಸಹಭಾಗಿತ್ವ (AHP), ಕೈಗೆಟುಕುವ ಬಾಡಿಗೆ ವಸತಿ (ARH) ಮತ್ತು ಬಡ್ಡಿ ಸಬ್ಸಿಡಿ ಯೋಜನೆ (ISS) ನಂತಹ ಇನ್ನೂ ಅನೇಕ ಸಮಸ್ಯೆಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ.


PMAY 2.0 ಗೆ ಅರ್ಜಿ ಸಲ್ಲಿಸುವುದು ಹೇಗೆ?


ಮೊದಲಿಗೆ pmay-urban.gov.in ಅಧಿಕೃತ ವೆಬ್‌ಸೈಟ್‌ಗೆ ಹೋಗಿ.


ಮುಖಪುಟದಲ್ಲಿ 'PMAY-U 2.0 ಗೆ ಅನ್ವಯಿಸು' ಆಯ್ಕೆಯನ್ನು ಕ್ಲಿಕ್ ಮಾಡಿ.


ಎಲ್ಲಾ ಮಾರ್ಗಸೂಚಿಗಳು ಮತ್ತು ಸೂಚನೆಗಳನ್ನು ಎಚ್ಚರಿಕೆಯಿಂದ .


ವಾರ್ಷಿಕ ಆದಾಯ ಮತ್ತು ಇತರ ಮಾಹಿತಿಯನ್ನು ಸರಿಯಾಗಿ ನೀಡಿ


ಆಧಾರ್ ಕಾರ್ಡ್ ಮಾಹಿತಿಯನ್ನು ಪರಿಶೀಲಿಸಿ.


ವಿಳಾಸ, ಆದಾಯದ ಪುರಾವೆ ಮತ್ತು ಇತರ ಅಗತ್ಯ ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ.


ಫಾರ್ಮ್ ಅನ್ನು ಸಲ್ಲಿಸುವ ಮೊದಲು ಎಚ್ಚರಿಕೆಯಿಂದ . ಪೋರ್ಟಲ್‌ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನು ಸಹ ಟ್ರ್ಯಾಕ್ ಮಾಡಬಹುದು. ಅರ್ಜಿದಾರರು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬೇಕು




PMAY 2.0 ಅಗತ್ಯ ದಾಖಲೆಗಳು!


ಅರ್ಜಿ ದಾಖಲೆಗಳು ಮತ್ತು ಕುಟುಂಬ ಸದಸ್ಯರ ಆಧಾರ್ ಕಾರ್ಡ್ಬ್ಯಾಂ


ಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು, ಈ ಬ್ಯಾಂಕ್ ಖಾತೆಯ ವಿವರ ನೀಡಬೇಕು


ನಿಮ್ಮ ಆದಾಯ ಪುರಾವೆ


ಜಾತಿ ಪ್ರಮಾಣ ಪತ್ರ


ಭೂಮಿ ಅಥವಾ ಮನೆ ಖರೀದಿದಾರರ ದಾಖಲೆ